ಅಬುಧಾಬಿ (www.vknews.in) : ದುಬೈ ವಿಮಾನ ನಿಲ್ದಾಣದಿಂದ ಸಂಯುಕ್ತ ಅರಬ್ ಸಂಸ್ಥಾನದ ಅಜ್ಮಾನ್ ಪ್ರದೇಶದಲ್ಲಿ ಸಂಕಷ್ಟದಲ್ಲಿದ್ದ ಮಂಗಳೂರು ಮೂಲದ ರಜಿಯಾ ಮತ್ತು ಮೂರು ಮಕ್ಕಳನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದ ಸದಸ್ಯರು ಸುರಕ್ಷಿತವಾಗಿ ತಾಯಿನಾಡಿಗೆ ಕಳಿಸಿದರು, ರಜಿಯಾ ಅವರ ಕೇರಳ ಮೂಲದ ಗಂಡ ಕಾನೂನುಬಾಹಿರ ವ್ಯವಹಾರ ಮಾಡುತ್ತಿರುವಾಗ ಹಲವು ದಿನಗಳಿಂದ ದುಬೈ ಪೊಲೀಸರ ವಶದಲ್ಲಿ ಇದ್ದ ಕಾರಣ ವಾಸಿಸಲು ವಸತಿ ಮತ್ತು ಊಟಕ್ಕೆ ಸಹ ಪರದಾಡುತ್ತಿದ್ದ ಕುಟುಂಬವನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಉಪ ಸಮಿತಿ ಸದಸ್ಯರಾದ ನಜೀರ್ ಕಾಸರಗೋಡು ಕನ್ನಡಿಗ ಅವರು ಸಂಪರ್ಕಿಸಿ ಹಣ ಸಹಾಯ ಮಾಡಿದರು, ಹಾಗೆ ಮಂಗಳೂರಿನ ಮೂಸ ಮತ್ತು ಅವರ ಪತ್ನಿ ಸೈನಾ ಅವರು ಕುಟುಂಬವನ್ನು ಭೇಟಿಮಾಡಿ ಕೆಲವು ದಿನಗಳಿಗೆ ಬೇಕಾದ ಆಹಾರ ಸಾಮಗ್ರಿ ಮತ್ತು ದೈನಂದಿನ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಟ್ಟರು.
ಯುಎಇ ಕನ್ನಡಿಗರ ಆರ್ಥಿಕ ಸಹಾಯದೊಂದಿಗೆ 8900 ದಿರಾಮ್ (ಎರಡು ಲಕ್ಷ ರೂಗಳಷ್ಟು ) ಹಣವನ್ನು ಟಿಕೆಟ್, ಔಟ್ ಪಾಸ್, ಮನೆ ಬಾಡಿಗೆ ಮುಂತಾದುವುಗಳಿಗೆ ವ್ಯಯಿಸಿ ಮೂರು ಮುದ್ದು ಮಕ್ಕಳನ್ನು ಮತ್ತು ಗರ್ಭಿಣಿ ತಾಯಿಯನ್ನು ಸುರಕ್ಷಿತವಾಗಿ ದುಬೈ ವಿಮಾನ ನಿಲ್ದಾಣದಿಂದ ಹೆಮ್ಮೆಯ ದುಬೈ ಕನ್ನಡ ಸಂಘದ ಸಹಾಯ ಹಸ್ತ ವಿಭಾಗದ ರಫೀಕಲಿ ಕೊಡಗು, ಹಾದಿಯ ಮಂಡ್ಯ ಹಾಗೂ ಮೂಸ ಸೈನಾ ದಂಪತಿಗಳು ಮಂಗಳೂರಿಗೆ ಕಳುಹಿಸಿಕೊಟ್ಟರು.
ಈ ಮಾನವೀಯ ಸಾಮಾಜಿಕ ಕಾರ್ಯಕ್ಕೆ ಸಹಾಯ ಮಾಡಿದ ಎಲ್ಲಾ ದಾನಿಗಳಿಗೂ ಹಾಗೂ ಹಿತೈಷಿಗಳಿಗೂ ನಮ್ಮ ಮೂಲಕ ಸಂಘದವರು ಧನ್ಯವಾದಗಳನ್ನು ತಿಳಿಸಿದ್ದಾರೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.