ಕಾಸರಗೋಡು (www.vknews.in) ; ಶಾಲೆ ಬಿಟ್ಟ ಬಳಿಕ ಮನೆಯ ಸಮೀಪ ವಾಹನದಿಂದ ಇಳಿದ ನರ್ಸರಿ ವಿದ್ಯಾರ್ಥಿನಿಯೋರ್ವರು ಅದೇ ಶಾಲಾ ಬಸ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಕಂಪಾರ ಶ್ರೀಬಾಗಿಲು ಪೆರಿಯೊಡುಕ ಮರ್ಹಬ ಹೌಸ್ನ ಮೊಹಮ್ಮದ್ ಜುಬೈರ್ ಅವರ ಪುತ್ರಿ ಆಯಿಷಾ ಜೋಯಾ (4) ಮೃತಪಟ್ಟ ನರ್ಸರಿ ವಿದ್ಯಾರ್ಥಿನಿ.
ನೆಲ್ಲಿಕುನ್ನು ಉಪ್ಪುಪ ನರ್ಸರಿ ಶಾಲೆಯ ವಿದ್ಯಾರ್ಥಿನಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಶಾಲೆ ಬಿಟ್ಟ ನಂತರ ಮಧ್ಯಾಹ್ನ ನರ್ಸರಿ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಮನೆ ಬಳಿ ಇಳಿಸಲಾಗಿತ್ತು. ಬಸ್ ವಾಪಸ್ ತೆಗೆದುಕೊಳ್ಳುವಾಗ ಅದೇ ಬಸ್ ಡಿಕ್ಕಿ ಹೊಡೆದು ಬಾಲಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಸಮೀಪದ ಕೈಗಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಘಟನೆಯನ್ನು ನೋಡಿ ಮಗುವನ್ನು ಆಸ್ಪತ್ರೆಗೆ ಸಾಗಿಸಿದರು. ಅಷ್ಟರೊಳಗೆ ಸಾವು ಸಂಭವಿಸಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.