ಕಾಸರಗೋಡು (www.vknews.in) ; ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣದೊಂದಿಗೆ ಯುವಕನೊಬ್ಬನನ್ನು ಬಂಧಿಸಲಾಗಿದೆ. ಸಿದ್ದಿಕ್ (30) ಬಂಧಿತ ಆರೋಪಿ. ಗುರುವಾರ ಬೆಳಗ್ಗೆ ಕಾಸರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರೋಟರಿ ಕ್ಲಬ್ ಬಳಿ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ. 19,60,500 ವಶಪಡಿಸಿಕೊಳ್ಳಲಾಗಿದೆ.
ಓಣಂ ಆಚರಣೆ ಅಂಗವಾಗಿ ಪೊಲೀಸರು ನಡೆಸಿದ ವಾಹನ ಪರೇಡ್ ವೇಳೆ ಹಣದೊಂದಿಗೆ ಬಂದ ಯುವಕರು ಸಿಕ್ಕಿಬಿದ್ದಿದ್ದಾರೆ. ಇದು ಬೇರೆ ಬೇರೆ ಕಡೆ ಹಂಚಲು ಹಣ ಎಂದು ಯುವಕ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಸರಗೋಡು ಡಿವೈಎಸ್ಪಿ ಪಿ.ಕೆ.ಸುಧಾಕರನ್ ನೇತೃತ್ವದಲ್ಲಿ ಹಣ ಬೇಟೆ ನಡೆದಿದೆ.
ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಹಣದ ವಹಿವಾಟು ಜೋರಾಗಿದೆ ಎನ್ನುತ್ತಾರೆ ಪೊಲೀಸರು. ಈ ತಿಂಗಳ ಅವಧಿಯಲ್ಲಿ ಪೊಲೀಸರು ಎರಡು ಕೋಟಿ ರೂ.ಗೂ ಹೆಚ್ಚು ವಶಪಡಿಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠ ಡಾ. ವೈಭವ್ ಸಕ್ಸೇನಾ ಸೂಚನೆ ಮೇರೆಗೆ ಜಿಲ್ಲೆಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.