ದುಬೈ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು ಎ ಇ ಸಮಿತಿ ಅಧೀನದಲ್ಲಿ ದುಬೈ ಕೆ ಎಂ ಸಿ ಸಿ ಸಭಾಂಗಣ ಅಬು ಹೈಲ್ ನಲ್ಲಿ ಕೆ ಐ ಸಿ ಗ್ರಾಂಡ್ ಮೀಲಾದ್ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಲುಹರ್ ನಮಾಝಿನ ಬಳಿಕ ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ ರವರ ನೇತೃತ್ವದಲ್ಲಿ ಮೌಲೂದ್ ಮಜ್ಲಿಸ್ ಪ್ರಾರಂಭ ಗೊಳ್ಳಲಿದೆ , ದುಬೈಯ ಪ್ರಸಿದ್ಧ ಬುರ್ದಾ ತಂಡದವರಿಂದ ಬುರ್ದಾ ಆಲಾಪನೆ ನಡೆಯಲಿದ್ದು ನಂತರ ಹಿರಿಯ ಕಿರಿಯ ವಿಭಾಗದ ಇಸ್ಲಾಮಿಕ್ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.
ಅಬ್ದುಲ್ ಖಾದರ್ ಬೈತಡ್ಕ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಸಕ್ತ ಕಾರ್ಯಕ್ರಮದಲ್ಲಿ ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದಾರೆ. ಸಯ್ಯದ್ ಶುಹೈಬ್ ತಂಙಳ್ ದುಬೈ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಉಸ್ತಾದ್ ಇಸಾಕ್ ಕೌಸರಿ ರವರು ಕೆ ಐ ಸಿ ಸಂಸ್ಥೆಯ ಪರಿಚಯವನ್ನು ನೀಡಲಿದ್ದಾರೆ.
ವಿವಿಧ ಕ್ಷೇತ್ರಗಳ ಗಣ್ಯರು, ಹಿತೈಷಿಗಳು , ಸಹ ಸಂಸ್ಥೆಗಳ ನೇತಾರರು , ಕೆ ಐ ಸಿ ಹಿತೈಷಿಗಳು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಉಸ್ತಾದ್ ಹಮೀದ್ ಮುಸ್ಲಿಯಾರ್ ನೀರ್ಕಜೆ ರವರು ಮುಖ್ಯಪ್ರಭಾಷಣ ಗೈಯಲಿದ್ದಾರೆ. ಪ್ರಸಕ್ತ ಕಾರ್ಯಕ್ರದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆಗೊಳಿಸಲಾಗಿದ್ದು ಕೆ ಐ ಸಿ ಹಿತೈಷಿಗಳು ಅನಿವಾಸಿ ದೀನೀ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರವನ್ನು ಯಶಸ್ವಿಗೊಳಿಸುವಂತೆ ಮೀಲಾದ್ ಸ್ವಾಗತ ಸಮಿತಿ ಚೇರ್ಮನ್ ಜಬ್ಬಾರ್ ಬೈತಡ್ಕ, ಕಾರ್ಯದರ್ಶಿ ರಾಝಿಕ್ ಹಾರಾಡಿ ರವರು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.