ಗುತ್ತಿಗಾರು(ವಿಶ್ವಕನ್ನಡಿಗ ನ್ಯೂಸ್): ಅನ್ಸಾರುಲ್ ಮುಸ್ಲಿಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ ಗುತ್ತಿಗಾರು(A.M.Y.A) ಇದರ 26 ನೇ ವಾರ್ಷಿಕ ಮಹಾಸಭೆ ಜನವರಿ 26ನೇ ಶುಕ್ರವಾರದಂದು ಜರುಗಿತು.
ಸ್ಥಳೀಯ ಖತೀಬರಾದ ಸುಲೈಮಾನ್ ಸಅದಿ ಕೂರ್ನಡ್ಕರವರು ದುಆ ಮಾಡಿದರು.
ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಹುಲ್ ಹಮೀದ್.ಹೆಚ್.ಎಮ್.ಬಾಕಿಲರವರು ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕಲಂದರ್ ಬಾಕಿಲ,ಕೋಶಾಧಿಕಾರಿಯಾಗಿ ಮಜೀದ್ ವಳಲಂಬೆಯನ್ನು ನೇಮಿಸಲಾಯಿತು. ಸಭೆಯನ್ನು ಅಬ್ದುಸ್ಸಮದ್ ಬಾಕಿಲರವರು ಸ್ವಾಗತಿಸಿ ಹಾರಿಸ್ ಸಅದಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.