ಸನ್ಮಾನ್ಯ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಯವರೇ ಗೌರವ ಪೂರ್ವಕವಾಗಿ ತಮಗೊಂದು ಬಹಿರಂಗ ಪತ್ರ, ಪುತ್ತೂರು ಕಂಬಳದಲ್ಲಿ ರಾಜಕೀಯ ಮಾತಾಡಿ ಹೋಗಿದ್ದೀರಿ..
ಇದು ಸರಿಯಾ? ಮೊನ್ನೆ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಾರಂಭದಲ್ಲಿ ಕಂಬಳಕ್ಕೆ ಅಥಿತಿಯಾಗಿ ಅರುಣ್ ಕುಮಾರ್ ಪುತ್ತಿಲರವರು ಬಂದಿದ್ದಾರೆ ಅವರನ್ನುದ್ದೇಶಿಸಿ ಪುತ್ತಿಲರವರೇ ಈ ಕಂಬಳಕ್ಕೆ ತಾವು ಅಥಿತಿಯಾಗಿ ಬಂದಿದ್ದೀರಿ ಮುಂದಿನ ಬಾರಿ ತಾವು ಈ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗುತ್ತೀರಿ ಎಂದು.
ಒಂದು ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿ ಸಂಸತ್ ಸದಸ್ಯರಾಗಿ ಮಂತ್ರಿಯಾಗಿ ಆಯ್ಕೆಯಾಗಿ ಎಲ್ಲಾ ಅಧಿಕಾರವನ್ನು ಅನುಭವಿಸಿದ ವಿನಯ ಕುಮಾರ್ ಸೊರಕೆಯವರು ಬಹಿರಂಗವಾಗಿ ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದಾರೆಂದರೆ ಇವರ ಹಿಂದಿನ ಅಜೆಂಡಾ ಏನು?
ವಿನಯ ಕುಮಾರ್ ಸೊರಕೆಯವರೇ ಪುತ್ತೂರು ಕ್ಷೇತ್ರದ ಜನರ ನರನಾಡಿಯಾಗಿರುವ ಜನಪ್ರಿಯ ಶಾಸಕರಾದಂತಹ ಅಶೋಕ್ ರೈಗಳ ಕೇವಲ ಏಳು ತಿಂಗಳ ಅಭಿವೃದ್ಧಿ ನೋಡಿ ಇಂದು ಪುತ್ತೂರಿನ ಜನತೆಯ ಹ್ರದಯಲ್ಲಿ ಅಚ್ಚಳಿಯದೆ ನಿಂತಿದ್ದಾರೆ.
ಸೊರಕೆಯವರೇ. ಅಶೋಕ್ ರೈಗಳು ಶಾಸಕರಾಗಿ ಆಯ್ಕೆಯಾಗುವುದಕ್ಕೆ ಮುಂಚೆ ತಾವು ಮತ್ತು ಶಕುಂತಳಾ. ಶೆಟ್ಟಿಯವರು ಮಠಂದೂರು ಸಹಿತ ಹಲವರು ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದೀರಿ ಅಲ್ಲವೇ ? ಪುತ್ತೂರಿನ ಜನರ ಕೈಗೆ ಚೊಂಬು ಕೊಟ್ಟು ಕೋಟಿ ಕೋಟಿ ಬಾಚಿ ಬ್ಯಾಂಕಲ್ಲಿಟ್ಟು ಆಸ್ತಿ ಪಾಸ್ತಿ ಖರೀದಿಸಿ ಆರಾಮವಾಗಿದ್ದೀರಲ್ಲವೇ ಓಟು ಹಾಕಿ ಗೆಲ್ಲಿಸಿದ ಜನರು ಸತ್ತರೆ ಸಾಯಲಿ ನಮಗೇನು ಎಂದು ಕೊಂಡು ತಮ್ಮನ್ನು ಗೆಲ್ಲಿಸಿದ ಜನರನ್ನು ಮರೆತು ಉಡುಪಿ ಜಿಲ್ಲೆಯ ಕಾಪುಗೆ ಹೋಗಿ ನೆಲೆಸಿದ್ದೀರಲ್ಲವೇ ?
ಅಮಾವಾಸ್ಯೆಗೋ ಪುಣ್ಣಮೆಗೋ ಒಂದು ಸಾರಿ ಪುತ್ತೂರಿಗೆ ಬಂದು ತನ್ನದೇ ಪಕ್ಷದ ನಾಯಕರ ಶಾಸಕರ ಕಾರ್ಯಕರ್ತರ ಬಗ್ಗೆ ಲಘುವಾಗಿ ಮಾತನಾಡಿ ಹೋಗುವ ತಾವು ಯಾವ ಸೀಮೆಯ ಕಾಂಗ್ರೆಸ್ ನಾಯಕರಾಗಿದ್ದೀರಾ ? ಅರುಣ್ ಕುಮಾರ್ ಪುತ್ತಿಲರವರ ಹಿನ್ನೆಲೆ ಮತ್ತು ಬಿಜೆಪಿ ಪಕ್ಷದಲ್ಲಿ ಅವರಿಗಿರುವ ಸ್ಥಾನಮಾನ ಏನು ಎಂದು ಇಡೀ ರಾಜ್ಯಕ್ಕೆ ಗೊತ್ತಿದೆ ಅದೂ ಅಲ್ಲದೆ ಒಬ್ಬ ಕೋಮುವಾದಿಯ ಬಗ್ಗೆ ಒಂದು ಜಾತ್ಯಾತೀತ ಪಕ್ಷದ ನಾಯಕ ಮುಂದಿನ ಬಾರಿ ಅರುಣ್ ಕುಮಾರ್ ಪುತ್ತಿಲ ಶಾಸಕರಾಗುತ್ತಾರೆ ಎಂದು ಹೇಳುವ ನೀವು ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಶೋಕ್ ರೈಗಳಿಗೆ ಬೆಂಬಲಿಸಿದ್ದೀರಾ ಅಥವಾ ಪುತ್ತಿಲರ ಬ್ಯಾಟಿಗೆ ಸಿಕ್ಸರ್ ಹೊಡೆದಿದ್ದೀರಾ?
ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಯಾವ್ಯಾವ ನಾಯಕರು ಬ್ಯಾಟ್ ಬೀಸಿದ್ದಾರೆ ಅವರ ಹಿಂದಿನ ರೂವಾರಿ ಯಾರು ಅಶೋಕ್ ರೈಗಳಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಹೈಕಮಾಂಡ್ ಸಹಿತ ರಾಜ್ಯ ನಾಯಕರ ಹಿಂದೆ ಬಿದ್ದವರು ಯಾರು ? ಶತಾಯ ಗತಾಯ ಪ್ರಯತ್ನ ಪಟ್ಟವರು ಯಾರು ಎಂದು ಎಲ್ಲರಿಗೂ ತಿಳಿದಿದೆ.
ಸೊರಕೆಯವರೇ ಒಂದು ಮಾತು ನೆನಪಿನಲ್ಲಿಟ್ಟು ಕೊಳ್ಳಿ ಪುತ್ತೂರು ಕ್ಷೇತ್ರದ ಶಾಸಕ ಸ್ಥಾನ ಇನ್ನು ಮೂವತ್ತು ವರ್ಷಕ್ಕೆ ಖಾಲಿ ಇಲ್ಲ ಯಾವ ಪುತ್ತಿಲರೂ ಇಲ್ಲ ಯಾವ ಸೊರಕೆಯೂ ಇಲ್ಲ ಕಡ್ಲೆ ಕಾಯಿ ತಿನ್ತಾ ಇರ ಬೇಕಷ್ಟೇ ಈಗಾಗಲೇ ಪುತ್ತೂರು ಕ್ಷೇತ್ರದ ಒಂದೂವರೆ ಲಕ್ಷದಷ್ಟು ಮತದಾರರು ತೀರ್ಮಾನಿಸಿ ಬಿಟ್ಟಿದ್ದಾರೆ ಇನ್ನು ಮೂವತ್ತು ವರ್ಷಗಳ ತನಕ ಅಶೋಕ್ ರೈಗಳೇ ಪುತ್ತೂರಿನ ಶಾಸಕರು ಎಂದು ಶಾಸಕರಾಗಿ ಎಂಪಿಯಾಗಿ ಮಂತ್ರಿಯಾಗಿ ಎಐಸಿಸಿ ಕಾರ್ಯದರ್ಶಿಯಾಗಿ ಪಕ್ಷದ ಎಲ್ಲಾ ಅಧಿಕಾರವನ್ನೂ ಅನುಭವಿಸಿ ಪಕ್ಷಕ್ಕೆ ದ್ರೋಹ ಬಗೆಯುವಂತಹ ತಮ್ಮಂತಹವರಿಂದ ಕಾಂಗ್ರೆಸ್ ಪಕ್ಷ ಉದ್ದಾರವಾಗಲು ಸಾಧ್ಯವಿಲ್ಲ ಕಾಂಗ್ರೆಸ್ ಪಕ್ಷ ಇಂದಿನ ಈ ಸ್ಥಿತಿಗೆ ತಮ್ಮಂತಹವರೇ ಕಾರಣ.
ಸೊರಕೆಯವರೇ ಒಂದು ಮಾತು ನೆನಪಿನಲ್ಲಿಟ್ಟು ಕೊಳ್ಳಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟಲ್ಲಿ ಸ್ಪರ್ಧಿಸ ಬೇಡಿ. ಯಾಕೆಂದರೆ ಸುಮಾರು ಐದು ಲಕ್ಷದಷ್ಟು ಮುಸ್ಲಿಮರು ತಮ್ಮ ವಿರುದ್ಧ ಮತ ಚಲಾಯಿಸಲಿದ್ದಾರೆ ಅಂದು ಮುಸ್ಲಿಮರ ವಿರುದ್ಧ ಮುಸ್ಲಿಮ್ ನಾಯಕರಿಗೆ ಟಿಕೆಟ್ ಕೊಟ್ಟರೆ ಗೆಲ್ಲುವುದಿಲ್ಲ ಎಂದು ಮುಸ್ಲಿಮರನ್ನು ಅಣಕಿಸಿದ್ದೀರಿ, ಅವಮಾನಿಸಿದ್ದೀರಿ. ತಾಕತ್ತಿದ್ದರೆ ದಕ ಜಿಲ್ಲೆಯಿಂದ ಕಾಂಗ್ರೆಸ್ ಟಿಕೆಟ್ ತಂದು ಸ್ಪರ್ಧಿಸಿ, ರಾಜಕೀಯ ಆಟ ಆಡಲು ತಮಗೆ ಮಾತ್ರ ಅಲ್ಲ ಗೊತ್ತಿರೋದು ನಮಗೂ ಗೊತ್ತಿದೆ.
ಅಶೋಕ್ ರೈಗಳೇ ನನಗೆ ತಾವುಗಳು ಬೈದರೂ ಸರಿ ಹೊಡೆದರೂ ಸರಿ ಇದ್ದದ್ದನ್ನು ಇದ್ದ ಹಾಗೆ ಹೇಳೋದು ಬರೆಯೋದು ನನ್ನ ಅಭ್ಯಾಸ ತಮ್ಮನ್ನು ಯಾರೇ ಅವಮಾನಿಸಿದರೂ ಆತ ಎಷ್ಟೇ ದೊಡ್ಡ ನಾಯಕನಾದರೂ ಸರಿ. ವಿರೋಧಿಸಿಯೇ ವಿರೋಧಿಸುತ್ತೇನೆ ತಾವುಗಳು ಪುತ್ತೂರಿನ ಬಡವರ ಅಸಹಾಯಕರ ಅಂಗವಿಕಲರ ರೋಗಿಗಳ ಮತ್ತು ಪುತ್ತೂರಿನ ಸಮಗ್ರ ಅಭಿವೃದ್ಧಿಯ ಆಪಧ್ಭಾಂಧವರು ತಾವು ಮಾಡೋ ಪುಣ್ಯದ ಕೆಲಸದಲ್ಲಿ ನಮಗೂ ಪಾಲಿದೆ. ಹೇಗೆಂದರೆ ತಮ್ಮ ಸಾವಿರಾರು ಅಭಿಮಾನಿಗಳು ರಾತ್ರಿ ಹಗಲೂ ದುಡಿದು ಬರೆದು ಗೆಲ್ಲಿಸಿದ್ದೇವೆ ತಮ್ಮನ್ನು ತಮ್ಮ ಅಭಿಮಾನಿಗಳು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಹೊರಗಿನವ್ರು ಬಂದು ನಾಲಗೆ ಹರಿಯ ಬಿಟ್ಟರೆ ತಮ್ಮ ಅಭಿಮಾನಿಗಳು ತಮ್ಮನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ. ಜೈ ಅಶೋಕ್ ರೈ..
ಅದ್ದು ಪಡೀಲ್ ✍️
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.