ಸೊಹಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಒಮಾನ್ ಸೊಹಾರ್ ಝೋನ್ ವತಿಯಿಂದ ರಕ್ತದಾನ ಶಿಬಿರವು ಸೊಹಾರ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಿತು.
KCF ಡೇ ಪ್ರಯುಕ್ತ ಸೊಹಾರ್ ಝೋನ್ ಹಾಗೂ ಮಿನಿಸ್ಟರಿ ಆಫ್ ಹೆಲ್ತ್ ಸೊಹಾರ್ ಹಮ್ಮಿಕೊಂಡ ರಕ್ತದಾನ ಶಿಬಿರವು ಸೊಹಾರಿನ ಸರ್ಕಾರಿ ಆಸ್ಪತ್ರೆ ಬ್ಲಡ್ ಬ್ಯಾಂಕ್ ನಲ್ಲಿ ನಡೆದಿದ್ದು ಹೆಚ್ಚಿನ ಧಾನಿಗಳು ರಕ್ತದಾನ ಮಾಡಿ ಸಹಕರಿಸಿದರು.
ಸೊಹಾರ್ ಬ್ಲಡ್ ಬ್ಯಾಂಕ್ ಸಂಯೋಜಕ ಡಾ. ಅಬ್ದುಲಾ ಕೆಸಿಎಫ್ ನ ಸಾಮಾಜಿಕ ಕಾರ್ಯಗಳ ಬಗ್ಗೆ ತಿಳಿದು ಶ್ಲಾಘಿಸಿದರು.
ನಂತರ ಜುಮಾ ನಮಾಝಿನ ಬಳಿಕ ನಡೆದ ಕೆಸಿಎಫ್ ಡೇ ಆಚರಣೆಯಲ್ಲಿ ಸೈಯಿದ್ ಆಬಿದ್ ಅಲ್ ಹೈದ್ರೋಸಿ ಅವರು ದುಆಕ್ಕೆ ನೇತೃತ್ವ ನೀಡಿದರು. ಸೊರಾರ್ ಝೋನ್ ಶಿಕ್ಷಣ ವಿಭೀಗದ ಅಧ್ಯಕ್ಷರಾದ ಇಕ್ಬಾಲ್ ಮದನಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಸಿಎಫ್ ದಶಮಾನೋತ್ಸವ ಆಚರಣೆಯ ಸಂಭ್ರಮದಲ್ಲಿದ್ದು, ಡಿಸೇನಿಯಂ 10 ಯೋಜನೆಯ ಬಗ್ಗೆ KCF ಅಂತರ್ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಕಾರ್ಯದರ್ಶಿ ಸೈಯಿದ್ ಆಬಿದ್ ಅಲ್ ಹೈದ್ರೋಸಿ ಯವರು ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಮಾರ್ಚ್ ತಿಂಗಳಲ್ಲಿ ನಡೆಯುವ ವಿವಿಧ ಸೆಕ್ಟರ್ ಗಳಾದ ಸಹಮ್, ಪಲಜ್ , ಬುರೈಮಿ ಸೆಕ್ಟರ್ ಸಮ್ಮೇಳನದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸೊಹಾರ್ ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆಯವರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಇಹ್ಸಾನ್ ವಿಭಾಗದ ಅಧ್ಯಕ್ಷ ಇಕ್ಬಾಲ್ ಎರ್ಮಾಳ್, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಡಾ. ಹಾಫಿಝ್ ರಝಾಕ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇದೇ ಸಂಧರ್ಭದಲ್ಲಿ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಗೌರವಿಸದರು.
ಸಭೆಯಲ್ಲಿ ಮುನೀರ್ ಕುತ್ತಾರ್, ಆರಿಫ್ ಮದಕ ಹಾಗೂ ಸೊಹಾರ್, ಸಹಮ್ ಸೆಕ್ಟರ್ ಕಾರ್ಯಕರ್ತರು, ಕೆಸಿಎಫ್ ಅಭಿಮಾನಿಗಳು ರಾಷ್ಟ್ರೀಯ ನಾಯಕರುಗಳು ಉಪಸ್ತಿತರಿದ್ದರು.
ಸಂಘಟನಾ ಅಧ್ಯಕ್ಷ ಅಶ್ರಫ್ ಕುತ್ತಾರ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಸ್ವಾಗತಿಸಿ ಮೀಡಿಯಾ ಅಧ್ಯಕ್ಷ ಶಫೀಕ್ ಎಲಿಮಲೆಯವರು ವಂಧಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.