(www.vknews. in) ; ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ (ರಿ) ಜನವರಿ ತಿಂಗಳ 8 ತಾರಿಕಿನಂದು ಬೆಂಗಳೂರು ನಲ್ಲಿ ನಡೆದಂತಹ ಜನಸ್ಪಂದನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಹೆಚ್ಚಿನ ಶಾಲೆಗಳು ಹಳೆಯದಾಗಿದ್ದು ಮಳೆಗಾಲದಲ್ಲಿ ಮಕ್ಕಳಿಗೆ ಪಾಠ ಪ್ರವಚನ ಮಾಡಲು ಸುರಕ್ಷತೆಯ ದೃಷ್ಟಿಯಿಂದ ಕಷ್ಟ ಸಾಧ್ಯ ಆಗುವ ಸಾಧ್ಯತೆ ಇದ್ದು,ಅಂತಹ ಶಾಲೆಗಳನ್ನು ಗುರುತಿಸಿ ಮಳೆಗಾಲ ಕ್ಕಿಂತ ಮುಂಚಿತವಾಗಿ ದುರಸ್ತಿ ಮಾಡಿಸಿ ಕೊಡಲು ವಿನಂತಿಯನ್ನು ಮಾಡಿದ್ದೆವು, ನಮ್ಮ ವಿನಂತಿಗೆ ಸರಕಾರವು ಕೂಡಲೇ ಸ್ಪಂದಿಸಿ ಅಗತ್ಯ ದುರಸ್ತಿ ಬೇಕಿರುವ ಶಾಲೆಗಳನ್ನು ಪಟ್ಟಿ ಮಾಡಲು,ಹಾಗೂ ದುರಸ್ತಿಗೆ ಬೇಕಾದ ಕ್ರಮವನ್ನು ಜರಗಿಸಲು ರಾಜ್ಯದ ಎಲ್ಲಾ ಶಿಕ್ಷಣಾಧಿಕಾರಿಗಳಿಗೆ ಆದೇಶವನ್ನು ಹೊರಡಿಸಿರುತ್ತಾರೆ.
ಇದು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆಗೆ ಸಂದ ಗೌರವ ಹಾಗೂ ಜಯವಾಗಿವೆ. ನಮ್ಮೊಂದಿಗೆ ಈ ಮನವಿಯನ್ನು ಕೊಡಲು ಬಂದಂತಹ ಎಲ್ಲಾ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸದಸ್ಯರಿಗೆ ಹಾಗೂ ಶೀಘ್ರವಾಗಿ ಸ್ಪಂದಿಸಿದ ಸರಕಾರಕ್ಕೆ ತುಂಬು ಹೃದಯದ ಧನ್ಯವಾದಗಳು
ಮೊಯಿದಿನ್ ಕುಟ್ಟಿ ಸಂಚಾಲಕರು, ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮಿತಿಗಳ ಸಮನ್ವಯ ಕೇಂದ್ರ ವೇದಿಕೆ(ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.