ಸೊಹಾರ್(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಒಮಾನ್,ಸೊಹಾರ್ ಝೋನ್ ಸಹಮ್ ಸೆಕ್ಟರ್ ಇದರ ಸಮ್ಮೇಳನವು ಶುಕ್ರವಾರ ಜುಮ್ ನಮಾಝಿನ ಬಳಿಕ ದುಬೈ ರೆಸ್ಟೋರೆಂಟ್ ಸೊಹಾರ್ ನಲ್ಲಿ ನಡೆಯಿತು.
ಡಾ. ಹಾಫಿಝ್ ಅಬ್ದುರ್ರಝಾಕ್ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ ಇವರು ಉದ್ಘಾಟಿಸಿದರು. ಡಾ. ಅಬ್ದುಲ್ ರಝಾಕ್ ರವರು ದುಆಕ್ಕೆ ನೇತೃತ್ವ ನೀಡಿದರು.
ಕಾರ್ಯಕ್ರಮದಲ್ಲಿ ಆತಿಫ್ ರವರು ಕಿರಾಅತ್ ಪಠಿಸಿದರು. ಕೆಸಿಎಫ್ ಒಮಾನ್ ಇಹ್ಸಾನ್ ಸಮಿತಿ ಕಾರ್ಯದರ್ಶಿಗಳಾದ ಇಕ್ಬಾಲ್ ಎರ್ಮಾಳ್ ರವರು ಕೆಸಿಎಫ್ ನ ಸಾಧನೆಯ ಕುರಿತು, ಹತ್ತು ವರ್ಷಗಳು ತುಂಬಿದ ಕೆಸಿಎಫ್ ನ ದಶವಾರ್ಶಿಕ ಡಿಸೇನಿಯಂ ನ ಕುರಿತು ಸವಿಸ್ಥಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಸದಸ್ಯರಿಗೆ ಕ್ವಿಝ್ ಸ್ಫರ್ಧೆ ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ವಾಹಿದ್ ಖಾನ್ ಬೆಂಗಳೂರು, ಡಾ. ಅಬ್ದುಲ್ ರಜಾಕ್ ಇವರನ್ನು ಸನ್ಮಾನಿಸಲಾಯಿತು. ಹಾಗೂ ಗಲ್ಫಿಗೆ ವಿಧಾಯ ಹೇಳಿ ಊರಿಗೆ ತೆರಳುತ್ತಿರುವ ಅಸ್ಗರ್ ಬಜ್ಪೆಯವರನ್ನು ಬೀಳ್ಕೊಡಲಾಯಿತು.
ಸೇರಿದವರು ಸಮಸ್ತದ ದ್ವಜ ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ, ಸೊಹಾರ್ ಝೋನ್ ಅಧ್ಯಕ್ಷ ಉಮರ್ ಫಾರೂಕ್ ಕುಕ್ಕಾಜೆ, ಕಾರ್ಯದರ್ಶಿ ಮುಬೀನ್ ಜೊಕಟ್ಟೆ, ಕೋಶಾಧಿಕಾರಿ ಮುನೀರ್ ಕುತ್ತಾರ್, ಕೆಸಿಎಫ್ ಒಮಾನ್ ಮೀಡಿಯಾ ವಿಭಾಗದ ಅಧ್ಯಕ್ಷ ಶಫೀಕ್ ಎಲಿಮಲೆ,ಕಾರ್ಯದರ್ಶಿ ಅಶ್ರಫ್ ಕುತ್ತಾರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಶ್ರಫ್ ಕುತ್ತಾರ್ ರವರು ನಿರೂಪಣೆ ಮಾಡಿದರು. ಶರೀಫ್ ಮಾಚಾರ್ ಸ್ವಾಗತಿಸಿ ಸಹಮ್ ಸೆಕ್ಟರ್ ಅಧ್ಯಕ್ಷ ರಶೀದ್ ಕೊಡಗು ವಂಧಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.