(www.vknews. in) ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ 600/600 ಪಡೆದ ಸಈದಾ ಳಿಗೆ ಜಮಾಅತ್ ನಿಂದ ಚಿನ್ನದ ಉಂಗುರ ಉಡುಗೊರೆ..
ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ನಡೆದ 7 ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ, ಎಲ್ಲಾ ವಿಷಯದಲ್ಲೂ 100 ಅಂಕಗಳೊಂದಿಗೆ, 600 ರಲ್ಲಿ 600 ಪಡೆದ, ಕುಪ್ಪೆಟ್ಟಿ ರೇಂಜ್ ವ್ಯಾಪ್ತಿಯ ಅಬೂಬಕರ್ ಸಿದ್ದೀಕ್ ಜುಮಾ ಮಸ್ಜಿದ್ ನೆಕ್ಕಿಲು ಇದರ ಅಧೀನದಲ್ಲಿರುವ, ನೂರುಲ್ ಹುದಾ ಸೆಕೆಂಡರಿ ಮದ್ರಸ ನೆಕ್ಕಿಲು ಇಲ್ಲಿನ ವಿದ್ಯಾರ್ಥಿನಿ ಫಾತಿಮತ್ ಸಈದಾ ಎನ್ ಎಂಬವಳಿಗೆ, ಮದ್ರಸ ಆಡಳಿತ ಸಮಿತಿ ನೇತೃತ್ವದಲ್ಲಿ, ಜಮಾಅತ್ ವತಿಯಿಂದ, ಫತ್ಹೇ ಮುಬಾರಕ್ ಸಮಾರಂಭದಲ್ಲಿ ಚಿನ್ನದ ಉಂಗುರ ನೀಡಿ ಪ್ರೋತ್ಸಾಹಿಸಲಾಯಿತು. ಇದೇ ಸಂದರ್ಭದಲ್ಲಿ ಇದಕ್ಕೆ ಕಾರಣಕರ್ತರಾದ ಅಧ್ಯಾಪಕರನ್ನು ಕೃತಂಙತಾಪೂರ್ವ ಸ್ಮರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷರಾದ ಕೆ.ಪಿ. ರಮ್ಲಾನ್ ಹಾಜಿ ವಹಿಸಿದ್ದರು. ಖತೀಬ್ ಉಸ್ತಾದರಾದ ಉಮರುಲ್ ಫಾರೂಕ್ ಸಖಾಫಿ ವೇಣೂರು ಸಭೆಯನ್ನು ಉದ್ಘಾಟಿಸಿದರು. ಸದರ್ ಉಸ್ತಾದರಾದ ಮುಹಮ್ಮದ್ ಮುಸ್ತಫಾ ಹಿಮಮಿ ಪರಪ್ಪು ಸ್ವಾಗತ ಭಾಷಣ ಮಾಡಿದರು. ವೇದಿಕೆಯಲ್ಲಿ ಅಧ್ಯಾಪಕರಾದ ಮುಹಮ್ಮದ್ ಹನೀಫ್ ಮಿಸ್ಬಾಹಿ ಅಮ್ಚಿನಡ್ಕ, ಸಂಶುದ್ದೀನ್ ಹಿಮಮಿ ಉರುವಾಲು ಪದವು, ಕಾರ್ಯದರ್ಶಿ ಶರೀಫ್ ಜಾರಿಗೆದಡಿ, ಕೋಶಾಧಿಕಾರಿ ಹಮೀದ್, ಉಪಾಧ್ಯಕ್ಷರಾದ ಅಸ್ಕರ್, ಕಾರ್ಯದರ್ಶಿಗಳಾದ ಬಶೀರ್ ಮುಸ್ಲಿಯಾರ್, ಅಬ್ಬಾಸ್ ಮುಂಡ್ರೋಟು, ಸದಸ್ಯರಾದ ಕಾಸಿಂ ಬಳ್ಳಿ, ಅಬ್ದುಲ್ ಬಶೀರ್, ಅಶ್ರಫ್, ಲತೀಫ್, ಅಬ್ದುಲ್ ರಝಾಕ್ ಫೈಝಿ, ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು. ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್ಸೆಸ್ಸೆಫ್, ಎವೈಎಫ್ ಸಹಿತ ಊರಿನ ಸಂಘ ಕುಟುಂಬಗಳ ನಾಯಕರು, ವಿದ್ಯಾರ್ಥಿಗಳ ರಕ್ಷಕರು, ಜಮಾಅತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯಿಂದ ಮದ್ರಸಕ್ಕೆ ಕೃತಂಙತಾಪೂರ್ವ ಆಗಿ ಫ್ಯಾನ್ ನೀಡಲಾಯಿತು. ಕೊನೆಗೆ ಸಿಹಿತಿಂಡಿ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.