(www.vknews. in) ಮಂಜ ಉರೂಸ್ ಸ್ವಾಗತ ಸಮಿತಿ: ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಪ್ರಧಾನ ಸಂಚಾಲಕರಾಗಿ ಉವೈಸ್ ಬೀಟಿಗೆ ಕೋಶಾಧಿಕಾರಿಯಾಗಿ ಅಬೂಬಕರ್ ಉಕ್ಕುಡ ಆಯ್ಕೆ
ಇತಿಹಾಸ ಪ್ರಸಿದ್ಧ ಮಂಜ ಬೆಳಿಯೂರುಕಟ್ಟೆ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಮೇ ತಿಂಗಳ 9,10,11 ದಿನಗಳಲ್ಲಿ ವಿಜೃಂಭನೆಯಿಂದ ನಡೆಯಲಿದ್ದು ಅದರ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ,ಉಪಾಧ್ಯಕ್ಷರಾಗಿ ಯು. ಟಿ.ಅಲಿ ಪಾಲಸ್ತಡ್ಕ, ಅಬ್ದುಲ್ ಹಮೀದ್ ಹಾಜಿ ಕೊಡಂಗಾಯಿ, ಅಬ್ದುಲ್ ಹಮೀದ್ ಎ.ಕೆ. ಸಾಜ, ಅಬ್ದುಲ್ಲ ಕುಂಞ ಸಾರ್ಯ ,ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಉವೈಸ್ ಬೀಟಿಗೆ, ಕಾರ್ಯದರ್ಶಿಗಳಾಗಿ ಎ.ಕೆ .ರಿಯಾಝ್ ಬುಳೇರಿಕಟ್ಟೆ, ಖಲಂದರ್ ಕಬಕ, ಕೋಶಾಧಿಕಾರಿಯಾಗಿ ಅಬೂಬಕರ್ ಉಕ್ಕುಡ ಅವರನ್ನು ಹಾಗು ನೂರಾ ಒಂದು ಮಂದಿ ಸದಸ್ಯರನ್ನು ಆರಿಸಲಾಯಿತು. ಈ ಸಂಬಂಧವಾಗಿ ಮಂಜ ಮಸ್ಜಿದುಲ್ ಅನ್ಸಾರ್ ಗೌರವ್ವಾದ್ಯಕ್ಷ ಸಯ್ಯಿದ್ ಫಕ್ರುದ್ದೀನ್ ಹದ್ದಾದ್ ತಂಙಳ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶೈಖುನಾ ವಾಲೆಮುಂಡೋವುಉಸ್ತಾದ್ ಉದ್ಘಾಟನೆ ಮಾಡಿದರು, ಕುಂಬ್ರ ಮರ್ಕಝುಲ್ ಹುದಾ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್ ಅರಿಯಡ್ಕ ಶುಭ ಹಾರೈಸಿದರು. ಮಂಜ ಮರ್ಕಝ್ ಅಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ವಿಷಯ ಮಂಡಿಸಿ ಮಾತನಾಡಿದರು. ಅದರೊಂದಿಗೆ ಅಗಲಿದ ಸಯ್ಯಿದ್ ಕರುವೇಲ್ ಸಾದತ್ ತಂಙಳ್ ಹಾಗೂ ಕುಂಬ್ರ ಮರ್ಕಝ್ ವಿದ್ಯಾರ್ಥಿನಿ ರಫಾ ಫಾತಿಮಾ ಅವರ ಸ್ಮರಣೆ ಕಾರ್ಯಕ್ರಮ ನಡೆಸಲಾಯಿತು
ಉರೂಸಿನ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಪ್ರಾರಂಭದಲ್ಲಿ ಮರ್ಕಝ್ ಮಂಜ ಪ್ರಧಾನ ವ್ಯವಸ್ಥಾಪಕ ಇಬ್ರಾಹಿಂ ಖಲೀಲ್ ಮಾಲಿಕಿ ಸ್ವಾಗತಿಸಿ ಕಲಂದರ್ ಕಬಕ ಧನ್ಯವಾದ ಅರ್ಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.