(www.vknews. in) ರಕ್ತದಾನ ಶ್ರೇಷ್ಟ ದಾನ ……..ಅಮೈ ಶಿವಪ್ರಸಾದ್ ಭಟ್ಟ
ದಿ. 5.5.24 ಭಾನುವಾರದಂದು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮತ್ತು ಹವ್ಯಕ ಸಭಾ ಮಂಗಳೂರು ಮತ್ತು ಶ್ರೀ ಭಾರತಿ ಕಾಲೇಜು ನಂತೂರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಕ್ತನಿಧಿ ತೇಜಸ್ವಿನಿ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಶ್ರೀ ಭಾರತಿ ಕಾಲೇಜು ನಂತೂರಿನಲ್ಲಿ ಬೆಳಗ್ಗೆ 9 ರಿಂದ 1ರ ವರೆಗೆ ರಕ್ತದಾನ ಶಿಬಿರ ಜರುಗಿತು. ವೈದಿಕ ವಿದ್ವಾಂಸ ಶ್ರೀ ಅಮೈ ಶಿವಪ್ರಸಾದ್ ಭಟ್ ದೀಪ ಬೆಳಗಿಸಿ,ಸ್ವಯಂ ರಕ್ತದಾನ ಮಾಡಿ ಶಿಬಿರವನ್ನು ಉದ್ಗಾಟಿಸಿದರು. ವೇದ ಶಿಬಿರದ ವಿದ್ಯಾರ್ಥಿಗಳು ವೇದ ಘೋಷ ಮಾಡಿ ರಕ್ತದಾನದ ಮೆರುಗನ್ನು ಹೆಚ್ಚಿಸಿದರು. ಈ ಸಂದರ್ಬದಲ್ಲಿ ಶ್ರೀಕ್ರಷ್ಣ ನೀರಮೂಲೆ,ಶ್ರೀಮತಿ ಅನಿತಾ ಬೋಳಂತಕೋಡಿ,ಶಿಬಿರದ ಸಂಯೋಜಕರಾದ ಡಾ ಮುರಲೀ ಮೋಹನ್ ಚೂಂತಾರು,ಡಾ ಶಿರಿನ್,ಶ್ರೀ ಬಾಲಕ್ರಷ್ಣ ಭಟ್ ಕೊಂಚಾಡಿ, ಡಾ ಸದಾಶಿವ ರಾವ್,ಡಾ ಮೋಹನ್ ಭಟ್ ಮುಂತಾದವರು ಉಪಸ್ಥಿತರಿದ್ರರು.ಓಟ್ಟು ೨೨ಮಂದಿ ರಕ್ತದಾನಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.