(www.vknews. in) ಸಮಸ್ತ ಸಂಘಟನೆಗಳ ವತಿಯಿಂದ ಹಜ್ ಗೆ ಹೊರಟ ಶಂಸುದ್ದೀನ್ ಸೂರಲ್ಪಾಡಿ ಯವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ
ದುಬೈ : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ ಮಾಜಿ ಅದ್ಯಕ್ಷರೂ , ಮುಖ್ಯ ಉಪದೇಶಕರೂ ಆದ ಜನಾಬ್ ಶಂಸುದ್ದೀನ್ ಸೂರಲ್ಪಾಡಿಯವರು ಕುಟುಂಬ ಸಮೇತ ಈ ವರ್ಷದ ಪುಣ್ಯ ಹಜ್ ಕರ್ಮ ನಿರ್ವಹಿಸಲು ಹೊರಟಿದ್ದು ಅವರನ್ನು ಸನ್ಮಾನಿಸಿ ಬೀಳ್ಕೊಡಲು ಸಮಸ್ತ ಸಂಘಟನೆಗಳಿಂದ ತೀರ್ಮಾನಿಸಲಾಯಿತು. ಅ ಪ್ರಯುಕ್ತ ದಿನಾಂಕ 21/04/2024 ನೇ ರವಿವಾರದಂದು ದುಬೈ ಕೆ ಎಂ ಸಿ ಸಿ ಹಾಲ್ ನಲ್ಲಿ ಸಯ್ಯದ್ ಆಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ನಡೆದ ದಾರುನ್ನೂರ್ ಮಾಸಿಕ ಮಜ್ಲಿಸುನ್ನೂರ್ ಮತ್ತು ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ ಯವರ ಅದ್ಯಕ್ಷತೆಯಲ್ಲಿ ನಡೆದ ದ್ವೈಮಾಸಿಕ ಸಭೆಯಲ್ಲಿ ಈ ವರ್ಷ ಕುಟುಂಬ ಸಮೇತ ಪವಿತ್ರ ಹಜ್ ಕರ್ಮ ನಿರ್ವಹಿಸಲು ಹೊರಟ ಜನಾಬ್ ಶಂಸುದ್ದೀನ್ ಸೂರಲ್ಪಾಡಿ ಯವರಿಗೆ ಸನ್ಮಾನಿಸಿ ಬೀಳ್ಕೊಡುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಯಸ್ ಕೆ ಯಸ್ ಯಸ್ ಯಫ್ ಇದರ ಶಾರ್ಜಾ ಸ್ಟೇಟ್ ಅದ್ಯಕ್ಷರೂ ,ಯಸ್ ಕೆ ಯಸ್ ಯಸ್ ಯಫ್ ಮೀಂ ಇದರ ಚೇರ್ಮೇನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಜನಾಬ್ ಶಂಸುದ್ದೀನ್ ಸೂರಲ್ಪಾಡಿಯವರನ್ನು ಯಸ್ ಕೆ ಯಸ್ ಯಸ್ ಯಫ್ ವತಿಯಿಂದ ಮೊತ್ತ ಮೊದಲು ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಯು ಎ ಇ ಸಮಿತಿ ಇದರ ಮಾಜಿ ಅದ್ಯಕ್ಷರೂ ಪ್ರಸ್ತುತ ಮುಖ್ಯ ಉಪದೇಶಕರಾಗಿ ಕಾರ್ಯನಿರ್ವಹಿಸುತ್ತರುವ ಮತ್ತು ದಾರುನ್ನೂರ್ ಅಭ್ಯುದಯದಲ್ಲಿ ಹೆಚ್ಚು ಪರಿಶ್ರಮ ಮತ್ತು ಸಹಕಾರ ನೀಡುತ್ತಿರುವ ಜನಾಬ್ ಶಂಸುದ್ದೀನ್ ಸೂರಲ್ಪಾಡಿ ಯವರನ್ನು ದಾರುನ್ನೂರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು ಬಳಿಕ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಯು ಎ ಇ ಸಮಿತಿ ಇದರ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಜನಾಬ್ ಶಂಸುದ್ದೀನ್ ಸೂರಲ್ಪಾಡಿ ಯವರನ್ನು ದಾರುಸ್ಸಲಾಮ್ ಬೆಳ್ತಂಗಡಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಬಳಿಕ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರ್ ಯು ಎ ಇ ಸಮಿತಿಯ ಉಪದೇಶಕರಾಗಿ ಸಹಕರಿಸುತ್ತಿರುವ ಜನಾಬ್ ಶಂಸುದ್ದೀನ್ ಸೂರಲ್ಪಾಡಿ ಯವರನ್ನು ನೂರುಲ್ ಹುದಾ ಇದರ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಜನಾಬ್ ಶಂಸುದ್ದೀನ್ ಸೂರಲ್ಪಾಡಿ ಯವರ ಸೇವೆಯನ್ನು ಸ್ಮರಿಸಿ ಸಯ್ಯದ್ ಆಸ್ಕರ್ ಅಲಿ ತಂಗಳ್ ( ಅದ್ಯಕ್ಷರು ಯಸ್ ಕೆ ಯಸ್ ಯಸ್ ಯಫ್ ಯು ಎ ಇ ಹಾಗೂ ದಾರುಸ್ಸಲಾಂ ಬೆಳ್ತಂಗಡಿ ಯು ಎ ಇ ) ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್ ( ಅದ್ಯಕ್ಷರು ದಾರುನ್ನೂರ್ ಶಾರ್ಜಾ ಸ್ಟೇಟ್ ) ಜನಾಬ್ ಬದ್ರುದ್ದೀನ್ ಹೆಂತಾರ್( ಪ್ರಧಾನ ಕಾರ್ಯದರ್ಶಿ ದಾರುನ್ನೂರ್ ಯು ಎ ಇ ) ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್( ಉಪಾದ್ಯಕ್ಷರು ದಾರುನ್ನೂರ್ ಯು ಎ ಇ ) ಜನಾಬ್ ಶರೀಫ್ ಕಾವು( ಅದ್ಯಕ್ಷರು ನೂರುಲ್ ಹುದಾ ಯು ಎ ಇ ) ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ ( ಅದ್ಯಕ್ಷರು ದಾರುನ್ನೂರ್ ದುಬೈ ಸ್ಟೇಟ್ ) ಮೊದಲಾದವರು ಮಾತನಾಡಿದರು. ಮಾಡಿದ ಸನ್ಮಾನ ಮತ್ತು ಬೀಳ್ಕೊಡುಗೆಗೆ ಜನಾಬ್ ಶಂಸುದ್ದೀನ್ ಸೂರಲ್ಪಾಡಿಯವರು ಕೃತಜ್ಞತೆ ಅರ್ಪಿಸಿ , ಎಲ್ಲರೊಂದಿಗೆ ದುಆ ಮಾಡಲು ವಿನಂತಿಸಿ , ಅಲ್ಲಾಹನು ಸ್ವೀಕಾರ ಯೋಗ್ಯವಾದ ಹಜ್ ನೆರವೇರಿಸಲು ಬೇಕಾಗಿ ಪ್ರಾರ್ಥಿಸಿ ತನ್ನ ಮಾತನ್ನು ಮುಕ್ತಾಯಗೊಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.