ಬಂಟ್ವಾಳ(www.vknews.in) :ಸಾಮಾಜಿಕ ಮುಖಂಡರ ಸ್ಮರಣಾರ್ಥ ಅವರ ಹೆಸರಿನಲ್ಲಿ ಸ್ಥಾಪಿಸುವ ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಸಂಘಟನೆಯ ಉದ್ದೇಶ ಸಾರ್ಥಕವಾಗುತ್ತದೆ. ಸಾಮಾಜಿಕ ಮುಖಂಡರ ಹೆಸರು ಅಚ್ಚಳಿಯದೆ ಉಳಿಯುತ್ತದೆ. ಉಳಿದವರಿಗೂ ಉತ್ತಮ ಕೆಲಸ ಮಾಡಲು ಸ್ಫೂರ್ತಿ, ಪ್ರೇರಣೆ ಒದಗಿಸುತ್ತದೆ. ಮಂಗಳೂರಿನ ಗುರುಪುರ ಕೈಕಂಬ ಸಮೀಪದ ಸುರಲ್ಪಾಡಿಯ ನೌಷಾದ್ ಹಾಜಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ತನ್ನ ಸಮಾಜ ಮುಖಿ ಕಾರ್ಯಗಳಿಂದ ಸಮುದಾಯದ ಜನರ ಪ್ರೀತಿಗೆ ಪಾತ್ರವಾಗಿದೆ. ಗುರುಪುರ ಕೈಕಂಬ ಸುರಲ್ಪಾಡಿಯ ದಿವಂಗತ ನೌಷಾದ್ ಹಾಜಿ ಎಂಬವರು ಮುಸ್ಲಿಂ ಸಮಾಜದ ಅಗ್ರ ಗಣ್ಯ ನೇತಾರರಲ್ಲಿ ಒಬ್ಭರು. ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಅಭಿಮಾನಿಗಳು ಮತ್ತು ಕುಟುಂಬದ ಸದಸ್ಯರು ‘ನೌಷಾದ್ ಹಾಜಿ ಸುರಲ್ಪಾಡಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್’ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಆ ಮೂಲಕ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೀಗ ಈ ಟ್ರಸ್ಟ್ ಮದರಸವೊಂದರ ನವೀಕರಣವನ್ನು ಮಾಡಿದೆ. ಬಂಟ್ವಾಳ ತಾಲೂಕಿನ ಅಲ್ಲಿಪಾದೆಯ ಕುಂಟಾಲ್ಪಲ್ಕೆ ದಾರುಲ್ ಉಲೂಮ್ ಮದರಸದ ನವೀಕರಣ ಕಾಮಗಾರಿಯನ್ನು ಕೈಗೆತ್ತಿಕೊಂಡು ಪೂರ್ತಿಗೊಳಿಸಿದೆ. ಇದೀಗ ಕಳೆದ ಶುಕ್ರವಾರ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸ್ಥಳೀಯ ಜಮಾತಿನ ಸದಸ್ಯರು ಉಪಸ್ಥಿತಿಯಲ್ಲಿ ನವೀಕೃತ ಮದರಸದ ಲೋಕಾರ್ಪಣೆಯೂ ನೆರವೇರಿದೆ. . ಸಮಸ್ತ ಮದರಸ ಅಂಗೀಕಾರದಂತೆ ಟ್ರಸ್ಟಿನ ಸಲಹೆಗಾರ ಹುಸೈನ್ ದಾರಿಮಿ ರೆಂಜಳಾಡಿ ಉಸ್ತಾದ್ ಮತ್ತು ಕುಂಟಾಲ್ಪಲ್ಕೆ ಅಲ್ಲಿಪಾದೆ ಮಸೀದಿ ಗೌರವಾಧ್ಯಕ್ಷ ಅಬ್ಬಾಸ್ ಅವರು ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು. ನವೀಕೃತ ಮದರಸ ಕಟ್ಟಡವನ್ನು ಅಧ್ಯಕ್ಷ ಆಸಿಫ್ ಆದರ್ಶ್ ಸುರಲ್ಪಾಡಿ, ಉಪಾಧ್ಯಕ್ಷ ಲತೀಫ್ ಗುರುಪುರ, ನೌಷಾದ್ ಹಾಜಿ ಪುತ್ರ ಇಸ್ಮಾಯಿಲ್ ನಯೀಝ್ ಮತ್ತು ಸಹೋದರ ಸತ್ತಾರ್ ಹಾಜಿ ಕೃಷ್ಣಾಪುರ ಅವರು ಉದ್ಘಾಟಿಸಿದರು. ಮದರಸ ನವೀಕರಣದ ಜವಾಬ್ದಾರಿ ವಹಿಸಿ ಉತ್ತಮವಾಗಿ ನಿರ್ವಹಿಸಿದ ಇ.ಕೆ.ಖಲೀಲ್ ವಗ್ಗ ಮತ್ತು ಟ್ರಸ್ಟಿನ ಪ್ರಚಾರಕ ‘ನಮ್ಮ ಕುಡ್ಲ ಚಾನಲ್ ನ ವೀಡಿಯೋ ಎಡಿಟರ್ ರಹಿಮಾನ್ ಅಡ್ಡೂರು ಅವರ ಮಾಧ್ಯಮ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಟ್ರಸ್ಟಿನ ಕೋಶಾಧಿಕಾರಿ ಶಾಫಿ ಮೂಲರಪಟ್ನ, ಪ್ರಧಾನ ಕಾರ್ಯದರ್ಶಿ ಡಾ. ಇ.ಕೆ.ಎ.ಸಿದ್ದೀಕ್ ಅಡ್ಡೂರು, ಜತೆ ಕಾರ್ಯದರ್ಶಿ ಯಾಸೀರ್ ಮೂಡುಬಿದಿರೆ, ಸಲಹೆಗಾರ ಫಕೀರಬ್ಬ ಮಾಸ್ಟರ್, ಪೆರಿಯಪಾದೆ ಮಸೀದಿ ಅಧ್ಯಕ್ಷ ರಿಯಾಝ್ ಅರಬಿ, ಉಪಾಧ್ಯಕ್ಷ ಇಲ್ಯಾಸ್ ಅರ್ಶದಿ, ಕಾರ್ಯದರ್ಶಿ ಮಹಮ್ಮದ್, ಕೋಶಾಧಿಕಾರಿ ಶಾಫಿ ಅರ್ಶದಿ, ಖತೀಬ್ ಅಬ್ದುಲ್ ರಶೀದಿ ಫೈಝಿ, ಮುಅಝಿನ್ ಆದಂ ಮದನಿ, ಮಕ್ಸೂದ್ ಸ ಅದಿ, ಇಲ್ಯಾಸ್, ಯಹ್ಯಾ ಮದನಿ ಮರ್ದಾಳ, ಟ್ರಸ್ಟಿನ ಸದಸ್ಯರಾದ ಶಾಲಿ ಮೂಲರಪಟ್ನ, ಅಶ್ರಫ್ ಬೆಳ್ಳೂರು, ಖಲೀಲ್ ವಗ್ಗ, ಲತೀಫ್ ವಗ್ಗ, ತಾಜುದ್ದೀನ್ ಅಮ್ಮುಂಜೆ, ಆಶಿಕ್ ಕುಕ್ಕಾಜೆ, ದಾವೂದ್ ಮುಲರಪಟ್ನ ಸಲಹೆಗಾರ ರಫೀಕ್ ಮಾಸ್ಟರ್, ಕಾರ್ಯನಿರತ ಕಾರ್ಯದರ್ಶಿ ಹಮೀದ್ ಕಣ್ಣೂರು ಹಾಗೂ ಜಮಾತ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.