ಜೆದ್ದಾ(www.vknews.in): ಮಕ್ಕಾದಲ್ಲಿರುವ ಪವಿತ್ರ ಹರಂ ಪರಿಸರದ ಮಹತ್ವವನ್ನು ಕಾಪಾಡುವಂತೆ ಯಾತ್ರಾರ್ಥಿಗಳಿಗೆ ಹಜ್ ಮಂತ್ರಾಲಯ ಕೇಳಿಕೊಂಡಿದೆ. ಬಹುತೇಕ ಯಾತ್ರಾರ್ಥಿಗಳು ಹರಂ ಪರಿಸರದಲ್ಲಿ, ಕಅಬಾಲಯದ ಸಮೀಪ ಫೋಟೋಶೂಟ್ ಹಾಗೂ ರೀಲ್ಸ್ ಗಳನ್ನು ಮಾಡುವುದು ಗಮನಕ್ಕೆ ಬಂದಿರುತ್ತದೆ. ಇಂತಹ ಚಟುವಟಿಕೆಗಳು ಪರಿಶುದ್ಧ ಹರಂನ ಮಹತ್ವವನ್ನು ಕಾಪಾಡುವಲ್ಲಿ ವಿಫಲವಾಗುತ್ತಿದೆ. ಯಾತ್ರಾರ್ಥಿಗಳು ತಮ್ಮ ಕರ್ಮವನ್ನು ನಿರ್ವಹಿಸುವ ಸಮಯದಲ್ಲಿ ಇಂತಹವುಗಳಿಂದ ದೂರವಿರಬೇಕೆಂದು ಸಚಿವಾಲಯವು ಸಲಹೆ ನೀಡಿದೆ.
ಅದಲ್ಲದೇ ಹರಂ ಪರಿಸರದ ಯಾವುದೇ ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವುದು ಮಸ್ಜಿದುಲ್ ಹರಂನಲ್ಲಿ ನಮಾಝ್ ನಿರ್ವಹಿಸುವುದಕ್ಕೆ ಸಮಾನವಾಗಿದೆ. ಆದ್ದರಿಂದ ದಟ್ಟ ಜನಸಂದಣಿಯಿರುವ ಸಮಯದಲ್ಲಿ ಮಸ್ಜಿದುಲ್ ಹರಂಗೆ ಬರುವ ಬದಲು ಸುತ್ತಮುತ್ತಲಿನ ಮಸೀದಿಗಳಲ್ಲಿ ನಮಾಝ್ ನಿರ್ವಹಿಸುವುದು ಉತ್ತಮವಾಗಿದೆ ಎಂದ ಸಚಿವಾಲಯ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.