(www.vknews.in) : ಒಂದು ಸಣ್ಣ ವ್ಯತ್ಯಾಸ ಇದೆ , ಒಂದು ಕಾಲವಿತ್ತು ಸುಲ್ತಾನುಲ್ ಉಲಮಾರ ಸಂಘಟನಾ ಶಕ್ತಿಯನ್ನು ನಿರ್ಣಾಮ ಮಾಡಿಯೇ ತೀರುವೆವು ಎಂಬ ಕರ್ಕಶ ನಿಲುವು ಹೊಂದಿದ್ದ ರಾಜಕೀಯ ಪಕ್ಷಗಳು ,ಶಕ್ತಿಗಳು. ಆದರೆ ಬದಲಾದ ರಾಜಕೀಯ ಚಕ್ರ ,ಕೇರಳೀಯ ಉಲಮಾಗಳಿಗೆ ಅಭಿಮಾನದ ರಾಜಕೀಯ ಮುಖ ಸುಲ್ತಾನುಲ್ ಉಲಮಾ ತೆರೆದುಕೊಟ್ಟಿದ್ದಾರೆ. ಎಲ್ಲಿಯವರೆಗೆಂದರೆ, ನಿನ್ನೆ ನಾಲೆಜ್ ಸಿಟಿಯಲ್ಲಿ ಇಬ್ಬರು ಮಾತನಾಡುವುದನ್ನು ಕೇಳಿದೆ, ಕೇರಳ ರಾಷ್ಟೀಯವನ್ನು ಕಾಂತಪುರಂ ಹಾಗೂ ಹಕೀಂ ಅಝ್ಝರಿ ನಿರ್ಣಯಿಸುತ್ತಾರೆ ಎಂಬ ವಾಸ್ತವ ಸತ್ಯ ರಾಜಕಾರಣಿಗಳು ಅರ್ಥೈಸಿ ಬಿಟ್ಟಿದ್ದಾರೆಂದು. ಕಾರಣ ಎಪಿ ಉಸ್ತಾದ್ ಇರುವುದು ಮರ್ಕಝ್ ನಲ್ಲಿ , ಆದರೆ ಅಭ್ಯರ್ಥಿಗಳು ಹುಡುಕಿ ಬರುವುದು ನಾಲೆಜ್ ಸಿಟಿಯಲ್ಲಿರುವ ಹಕೀಂ ಅಝ್ಝರಿ ಯನ್ನು ಎಂಬುದು ಅಚ್ಚರಿಯ ಬೆಳವಣಿಗೆಯಾಗಿದೆ.
ನಿನ್ನೆ ಇಫ್ತಾರ್ ಗೆ ಬಂದ ಪೊಣ್ಣಾನಿ ಅಭ್ಯರ್ಥಿ ಕೆ.ಎಸ್ ಹಂಝ ಹೇಳುತ್ತಾರೆ, 350ಕಿಲೋ ಮೀಟರ್ ಈ ಒಂದು ಭೇಟಿಗಾಗಿ ಸಂಚರಿಸಿ ಬಂದಿದ್ದೇನೆಂದು. ಮಧ್ಯಾಹ್ನ ಬಂದ ಮುಸ್ಲಿಂ ಲೀಗ್ ನಾಯಕ ಕುಂಙಾಲಿಕುಟ್ಟಿ ಹಕೀಂ ಅಝ್ಝರಿ ಉಸ್ತಾದ್ ಅನ್ನು ಕಾಣಲು ಬಂದಿದ್ದು, ತಮ್ಮಿಬ್ಬರ ಅಭ್ಯರ್ಥಿಗಳಿಗೆ ಭೇಟಿಗೆ ಅವಕಾಶ ಕೇಳಿಯಾಗಿದೆ. ದಿನನಿತ್ಯ ಭೇಟಿಗೆ ವಾರದವರೆಗೆ ಅನುಮತಿ ಕೇಳಿ ಕಾದು ಅಭ್ಯರ್ಥಿಗಳ ದಂಡೇ ಹಕೀಂ ಅಝ್ಝರಿ ಬಳಿ ಬರುತ್ತಿದ್ದಾರೆ. ಇಲ್ಲಿ ವಿಶೇಷ ಎಂಬುವುದು ಕಾಂಗ್ರೆಸ್ , ಲೀಗ್, ಸಿಪಿಎಂ, ಸ್ವತಂತ್ರ ಎಲ್ಲರಿಗೂ ಬೇಕಾದ ಒಂದು ರಾಜಕೀಯ ಶಕ್ತಿ ಸುಲ್ತಾನುಲ್ ಉಲಮಾ ಎಂಬ ಮನವರಿಕೆ.
ಅಂದ ಹಾಗೆ ನೆನಪಿಡಿ, ಇದರಲ್ಲಿ ಬರುತ್ತಿರುವ ಹೆಚ್ಚಿನ ರಾಜಕೀಯ ಪಕ್ಷ, ನಾಯಕರು ತಮ್ಮ ಜೀವನದ ಬಹುಪಾಲು ಸಮಯ ,ಶಕ್ತಿ ಉಸ್ತಾದರ ವಿರುದ್ದ ಕತ್ತಿ ಮಸೆದವರಾಗಿದ್ದಾರೆ. ಆದರೆ ಎಲ್ಲರಿಗೂ ಆತ್ಮೀಯ ಸತ್ಕಾರ ಇಲ್ಲಿ ಕಾಣುತ್ತಿದೆ. ತನ್ನ ಯೌವ್ವನ ಕಾಲದಲ್ಲಿ ಎಪಿ ಉಸ್ತಾದ್ ವಿರುದ್ದ ಹಗೆತನದ ಬಲುದೊಡ್ಡ ಹೆಜ್ಜೆ ಹಾಕಿದ್ದ ನಾಸಿರ್ ಮದನಿ ಉಸ್ತಾದ್, ಇತ್ತೀಚೆಗೆ ನಾಲೆಜ್ ಸಿಟಿಯಲ್ಲಿ 5ದಿನದ ವಾಸ್ತವ್ಯಕ್ಕೆ ಬಂದು, 1 ತಿಂಗಳವರೆಗೆ ವಾಸ್ತವ್ಯ ಮಾಡಿ , ಸುಲ್ತಾನುಲ್ ಉಲಮಾ ರಿಂದ ದಲಾಯಿಲ್ ಖೈರ್ ಆತ್ಮೀಯ ಮಜ್ಲಿಸ್ ಇಜಾಝತ್ ಪಡೆದು, ತನ್ನ ಸಂಸ್ಥೆಯಲ್ಲಿ ಮಜ್ಲಿಸ್ ಪ್ರಾರಂಭಿಸಿ ಶೈಖುನಾರ ಆತ್ಮೀಯ ನೆರಳಲ್ಲಿ ತನ್ನ ರಕ್ಷೆ ಹುಡುಕುತ್ತಿದ್ದಾರೆ. ಮತ್ತೊಂದೆಡೆ ಕೇರಳದ ಪ್ರಖ್ಯಾತ ಜಾಗತಿಕ ವಹ್ಹಾಬಿ ನಾಯಕರೊಬ್ಬರು ನಾಲೆಜ್ ಸಿಟಿಯಲ್ಲಿ ಚಿಕಿತ್ಸೆಗೆ ಬಂದು ವಾರಗಳ ಕಾಲ ವಾಸ್ತವ್ಯ ಮಾಡಿ , ಹಕೀಂ ಉಸ್ತಾದರ ಸುನ್ನೀ ಆಶಯಕ್ಕೆ ಮರಳಬೇಕೆಂಬ ಆಹ್ವಾನ ಮೌನವಾಗಿ ಕೇಳಿ ಹೊರಟ ಚರಿತೆಯಾಗಿದೆ ನಾಲೆಜ್ ಸಿಟಿಗೆ ಇರುವುದು.
ನಾನು ಈ ಬರಹ ಬರೆಯುವ ಹೊತ್ತಿಗೆ ಪೊಣ್ಣಾನಿ ಲೀಗ್ ಅಭ್ಯರ್ಥಿ ಸಮದಾನಿ ಸಾಹಿಬ್ ಹಕೀಂ ಉಸ್ತಾದರ ಜೊತೆ ಮಾತು ಕತೆಯಲ್ಲಿ ಇದ್ದಾರೆ…
ಇವಲ್ಲವೇ ಸಮುದಾಯ ಕಟ್ಟಿ ಬೆಳೆಸಬೇಕಾದ ಸಮುದಾಯದ ರಾಜಕೀಯ ಸಬಲೀಕರಣ…. ಎಪಿ ಉಸ್ತಾದರಿಗೆ ಪ್ರಾರ್ಥಿಸುವಾಗ ,ಹಕೀಂ ಅಝ್ಝರಿ ಉಸ್ತಾದರನ್ನೂ ಸೇರಿಸಿ , ರಮಳಾನಿನ ನಮ್ಮೆಲ್ಲಾ ಉಲಮಾಗಳ ಕೈಗಳಿಗೆ ಶಕ್ತಿ ನೀಡಲು ಪ್ರತ್ಯೇಕ ಪ್ರಾರ್ಥನೆ ಇರಲಿ.
✍️ರಾಫಿ ನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.