(www.vknews. in) ; ಸರ್ವಜನಾಂಗದ ಶಾಂತಿಯ ಊರು ಪಾಟ್ರಕೋಡಿ. ಪಾಟ್ರಕೋಡಿ ನಾಡು ಎಂದರೆ ಸೌಹಾರ್ದತೆಯ ನಾಡು. ಅಲ್ಲಿ ಅತೀ ಹೆಚ್ಚು ಮುಸ್ಲಿಮರು ವಾಸಿಸುತ್ತಿರುವ ನಾಡು. ಪಾಟ್ರಕೋಡಿ ನಾಡು ಕ್ರೀಡೆ ಯಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿ ಹಲವು ಕ್ರೀ ಡೆಯಲ್ಲಿ ಪ್ರಶಸ್ತಿಗಳಿಸಿ ಇಂಡಿಯನ್ ಪಾಟ್ರ ಕೋಡಿ ಎಂಬ ನಾಮದಿಂದ ಹೆಸರುವಾಸಿಯಾದ ನಾಡು.
ಪಾಟ್ರಕೋಡಿ ನಾಡು ಇವತ್ತು ಸೌಹಾರ್ದತೆಯ ಜನಪರ ಕಾರ್ಯಕ್ರಮ ಮಾಡಿ ಸೌಹಾರ್ದತೆಯ ಹೆಸರುವಾಸಿಯಾಗಿ ಮೂಡಿ ಬಂತು. ಹಿಂದು ಮುಸ್ಲಿಮರ ನಡುವೆ ಇರುವ ಸೌಹಾರ್ದತೆಯಿಂದ ಕೆದಿಲ ಮಲರಾಯ ದೇವಸ್ಥಾನದಲ್ಲಿ ನಡೆಯುವ ವರ್ಷ ಪ್ರತಿ ನಡೆಯುವ ಜಾತ್ರೆ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಪಾಟ್ರಕೋಡಿ ನಾಡಿನ ಮುಸ್ಲಿಮರು ಕೈಲಾದ ಸಹಾಯ ಮಾಡಿ ಕಾರ್ಯಕ್ರಮದಲ್ಲಿ ಕೈ ಜೋಡಿಸಿ ನಾವು ಎಲ್ಲರೂ ಭಾರತೀಯರು ಎಂದು ಸೌಹಾರ್ದತೆಗೆ ಸಂಕೇತವನ್ನು ನಮ್ಮ ಜಿಲ್ಲೆಗೆ ಮೆರುಗು ನೀಡಿದ ನಾಡು ಪಾಟ್ರಕೋಡಿ.
ಕೆದಿಲ ಮಲರಾಯ ದೇವಸ್ಥಾನದ ಆಡಳಿತ ಮಂಡಳಿಯು ಜಾತಿ ಧರ್ಮ ಮತ ಬೇಧವಿಲ್ಲದೆ ನಾವು ಎಲ್ಲರು ಒಂದೇ ಎಂಬ ಸೌಹಾರ್ದತೆಯ ಇಪ್ತಾರ್ ಕೂಟ ನಡೆಸಿ ದಕ್ಷಿಣ ಕನ್ನಡ ಜಿಲ್ಲೆಯ ಅಪರೂಪದ ಕಾರ್ಯಕ್ರಮ ನಡೆಸಿ ಬೇರೆ ದೇವಸ್ಥಾನದ ಆಡಳಿತ ಮಂಡಳಿಗೆ ಸೌಹಾರ್ದತೆಯ ಮಾದರಿಯಾದ ಕೆಲಸ ವನ್ನು ತೋರಿಸಿ ಕೊಟ್ಟು ಎಲ್ಲರು ಶ್ಲಾಘಿಸಿದರು.
ಇಂತಹ ಕಾರ್ಯಕ್ರಮವನ್ನು ಎಲ್ಲಾ ನಾಡಿನಲ್ಲಿ ನಡೆಸಿ ಸೌಹಾರ್ದತೆಯನ್ನು ಮೂಡಿಸಿ. ರಾಜಕೀಯ ಲಾಭ ಪಡೆಯುವ ಕೆಲವು ಕೋಮು ಕ್ರಿಮಿಗಳನ್ನು ದೂರವಿಟ್ಟು. ನಮ್ಮಿಂದ ಸೌಹಾರ್ದತೆಯ ಇಂಡಿಯಾವನ್ನು ಕಟ್ಟಲಿಕ್ಕೆ ಸಾದ್ಯವಾಗಬಹುದು.
— B.K ಸಿದ್ದೀಕ್ ಬೀಟಿಗೆ ಕೆದಿಲ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.