(www.vknews.in) ; ಖಲೀಫ ಉಮರ್ (ರ) ರ 2ಕೊರತೆಯನ್ನು ಹೇಳಿದ ಆತ್ಮೀಯ ಸ್ನೇಹಿತ ಸಲ್ಮಾನುಲ್ ಫಾರಿಸಿ(ರ) – ಉತ್ತಮ ಗುಣ ಸ್ವಭಾವ ಹೊಂದಲು ಕೈಗೊಳ್ಳಬೇಕಾದ 4ವಿಷಯಗಳು..
1. ಮಾರ್ಗದರ್ಶಕರಾಗಿ ಆತ್ಮೀಯ ಗುರು ಒಬ್ಬರನ್ನು ಹೊಂದುವುದು. 2. ತನ್ನ ಕೊರತೆಯನ್ನು ಸೂಚಿಸುವ ಹತ್ತಿರದ ಒಬ್ಬ ಗೆಳೆಯನನ್ನು ಹೊಂದುವುದು. ಒಂದು ದಿನ ಖಲೀಫಾ ಉಮರ್ ರ , ತನ್ನ ಆತ್ಮೀಯ ಸ್ನೇಹಿತರಾದ ಸಲ್ಮಾನುಲ್ ಫಾರಿಸಿ (ರ)ರ ಬಳಿ ತನ್ನ ಕೊರತೆ ಯನ್ನು ಹೇಳುವಂತೆ ಒತ್ತಾಯಪೂರ್ವಕ ವಿನಂತಿಸಿದರು. ಆದರೆ ಖಲೀಫರ ಕೊರತೆ ಸೂಚಿಸಲು ಸಲ್ಮಾನ್ ಫಾರಿಸ್ ತಂಙಲ್ ಮುಂದಾಗಲಿಲ್ಲ. ಆದರೆ ಒತ್ತಾಯ ಸಹಿಸದಾದಾಗ, ತಮಗೆ ಎರಡು ಕೊರತೆ ಇದೆ ಎಂದು ಸೂಚಿಸಿದರು. ಮೊದಲನೆಯದಾಗಿ ತಾವು ಆಹಾರದಲ್ಲಿ 2ಪದಾರ್ಥ ಉಪಯೋಗಿಸುವುದಾಗಿಯೂ, ಮತ್ತು ಬೇಸಿಗೆ ಮತ್ತು ಚಳಿಗಾಲದಲ್ಲಿ ಈ ರೀತಿ 2ವಾತಾವರಣದಲ್ಲಿ ಉಪಯೋಗಿಸುವ ವಿಭಿನ್ನ ವಸ್ತ್ರ ಹೊಂದಿರುವುದಾಗಿ ಕೇಳಲ್ಪಟ್ಟಿದ್ದೇನೆ ಎಂಬುದನ್ನು ಸೂಚಿಸಿದರು. ಸಂತೋಷಗೊಂಡ ಉಮರ್ ರ ಆ ತನ್ನೆರಡು ಕೊರತೆಯನ್ನು ನೀಗಿಸುವುದಾಗಿ ಭರವಸೆ ನೀಡಿದರು. ಆಗಿನ ಅವರ ಸೂಕ್ಷ್ಮತೆಯ ಕಾಲದಲ್ಲಿ ಅವೆರಡೂ ಕೊರತೆಯಾಗಿ ಮಹಾನರು ಕಂಡುಕೊಂಡು, ತಿದ್ದಿಕೊಂಡರು.
ಅದೇ ರೀತಿ ಮಹಾನರಾದ ದಾವೂದ್ ತ್ವಾಘೀ (ರ) ರ ಮೇಲೆ ಜನರ ಅಪವಾದ ಬಂತು, ಮಹಾನರು ಜನರೊಂದಿಗೆ ಸೇರಿಕೊಳ್ಳುವುದಿಲ್ಲವೆಂದು. ಮಹಾನರು ಜನರೊಂದಿಗೆ ಹೇಳಿದರು, ತಾವು ನನ್ನ ಕೊರತೆಯನ್ನು ನನಗೆ ಸೂಚಿಸುದಿಲ್ಲ, ಗೌರವ ಮಾತ್ರ ನೀಡುತ್ತೀರಿ. ಆದ್ದರಿಂದ ನಿಮ್ಮಿಂದ ಅಂತರ ಕಾಯ್ದುಕೊಂಡನೆಂದು. ಒಟ್ಟಾರೆಯಾಗಿ ಈ ಎರಡೂ ಘಟನೆಗಳು ನಮ್ಮ ಗುಣ ಸ್ವಭಾವ ಉತ್ತಮವಾಗಿಸಲು, ನಮ್ಮ ಜೊತೆ ಕೇವಲ ಹೊಗಲು ಭಟರಾದ ಗೆಳೆಯರು ಮಾತ್ರವಾಗಿಸದೆ, ನಮ್ಮ ಕೊರತೆ ನಮಗೆ ಸೂಚಿಸುವ ಹತ್ತಿರದ ಒಬ್ಬರಾದರೂ ಗೆಳೆಯರು ಹೊಂದುವುದು ಕಡ್ಡಾಯವಾಗಿದೆ. ಎಂಬುದು ಇಮಾಮ್ ಗಳು ತಮ್ಮ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
3.ನಮ್ಮೊಂದಿಗೆ ದ್ವೇಷ ಇರುವವರು ನಮ್ಮ ಕುರಿತು ಹೇಳುವ ಕೊರತೆಯನ್ನು ನಾವು ಕೇಳಬೇಕು. ಅದು ಅವರೊಂದಿಗೆ ಹಗೆ ತೀರಿಸಲು ಅಲ್ಲ, ಅದು ಕೇಳಿ ನಮ್ಮ ತಪ್ಪನ್ನು ತಿದ್ದಿಕೊಳ್ಳಲು ಆಗಿದೆ.
4.ಜನರೊಂದಿಗೆ ಬೆರೆತು, ಅವರಲ್ಲಿ ತಪ್ಪುಗಳು ಕಾಣುವಾಗ, ಆ ತಪ್ಪು ತನ್ನಲ್ಲಿ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು.
ವಿಶ್ವ ಪ್ರಸಿದ್ಧ ಉಲಮಾ ಉಮರ್ ಬಿನ್ ಹಫೀಝ್ ತಂಙಲ್ ಯೆಮೆನ್ ರವರ ಇಮಾಮ್ ಗಳಿಂದ ಸಂಗ್ರಹಿಸಿದ ವಿಷಗಳ ಸಂಗ್ರಹದ ಪ್ರಮುಖ ಗ್ರಂಥವೊಂದರಲ್ಲಿ ಈ ವಿಷಯಗಳು ಉಲ್ಲೇಖವಾಗಿದೆ.
✍️ ರಾಫಿ ನಗರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.