ಹೊಸದಿಲ್ಲಿ (www.vknews.in) : ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪೈಕಿ ನಾಲ್ವರಲ್ಲಿ ಒಬ್ಬರು ಇತರೆ ಪಕ್ಷಗಳಿಂದ ಬಂದವರು ಎಂದು ಅಂದಾಜಿಸುತ್ತಿದೆ. ಪಕ್ಷಾಂತರ ಮಾಡಿದವರಲ್ಲಿ ಬಹುತೇಕರು ಕಾಂಗ್ರೆಸ್ನವರೇ ಆಗಿದ್ದಾರೆ. ಬಿಜೆಪಿ ಇದುವರೆಗೆ ಘೋಷಿಸಿರುವ ಅಭ್ಯರ್ಥಿಗಳ ಕುರಿತು ‘ದಿ ಪ್ರಿಂಟ್’ ಸಿದ್ಧಪಡಿಸಿರುವ ವಿಶ್ಲೇಷಣಾ ವರದಿಯಲ್ಲಿ ಪಕ್ಷಾಂತರಿಗಳನ್ನು ಅಭ್ಯರ್ಥಿಗಳನ್ನಾಗಿ ಮಾಡಿರುವ ಅಂಕಿ ಅಂಶಗಳಿವೆ. ಬೇರೆ ಪಕ್ಷಗಳ ಜನರನ್ನು ಬಿಜೆಪಿಗೆ ಕರೆತರುವುದರ ಹಿಂದಿನ ಗುರಿ ಹೆಚ್ಚು ರಾಜ್ಯಗಳಲ್ಲಿ ಬೇರುಗಳನ್ನು ಸ್ಥಾಪಿಸುವುದು. ಆದರೆ, ಪಕ್ಷದ ಕಾರ್ಯಕರ್ತರನ್ನು ಹೊರಗಿಟ್ಟು ಕೇವಲ ಸೀಟು ಮತ್ತು ಲಾಭಕ್ಕಾಗಿ ಬಂದವರನ್ನು ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ ಎಂದು ಪಕ್ಷದೊಳಗೆ ಪ್ರತಿಭಟನೆ ನಡೆದಿದೆ.
ಬಿಜೆಪಿ ಇದುವರೆಗೆ 417 ಅಭ್ಯರ್ಥಿಗಳ ಪಟ್ಟಿಯನ್ನು ವಿವಿಧ ಹಂತಗಳಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ 116 ಮಂದಿ ಅಂದರೆ ಶೇ. 28ರಷ್ಟು ಮಂದಿ ಇತರೆ ಪಕ್ಷಗಳಿಂದ ಬಿಜೆಪಿ ಸೇರಿದ್ದಾರೆ. 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಬಹುತೇಕರು ಬಿಜೆಪಿ ಸೇರಿದ್ದರು.
ಕಾಂಗ್ರೆಸ್ನಿಂದ 37, ಬಿಆರ್ಎಸ್ನಿಂದ 9, ಬಿಎಸ್ಪಿಯಿಂದ 8, ಟಿಎಂಸಿಯಿಂದ 7, ಬಿಜೆಡಿ, ಎನ್ಸಿಪಿ, ಎಸ್ಪಿಯಿಂದ ತಲಾ ಆರು ಮತ್ತು ಐಎಡಿಎಂಕೆಯಿಂದ ನಾಲ್ವರು ಅಭ್ಯರ್ಥಿಗಳು ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ತಮಿಳುನಾಡು (11), ತೆಲಂಗಾಣ (12) ಮತ್ತು ಒಡಿಶಾ (8)ದಲ್ಲಿ ಬಿಜೆಪಿ 61 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅದರಲ್ಲಿ 31 ಸ್ಥಾನಗಳನ್ನು ಬೇರೆ ಪಕ್ಷ ತೊರೆದವರಿಗೆ ನೀಡಲಾಗಿದೆ. ಆಂಧ್ರಪ್ರದೇಶದಲ್ಲಿ ಆರು ಅಭ್ಯರ್ಥಿಗಳ ಪೈಕಿ ಐದು ಸ್ಥಾನಗಳನ್ನು ಹೊರಗಿನವರಿಗೆ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಘೋಷಣೆಯಾಗಿರುವ 64 ಅಭ್ಯರ್ಥಿಗಳ ಪೈಕಿ 20 ಮಂದಿ ಇತರೆ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು. ಈ 20 ಅಭ್ಯರ್ಥಿಗಳ ಪೈಕಿ 7 ಮಂದಿ 2014ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.
ಹರಿಯಾಣದಲ್ಲಿ 10 ಅಭ್ಯರ್ಥಿಗಳಲ್ಲಿ ಆರು ಮಂದಿ ಪಕ್ಷಾಂತರಿಗಳಾಗಿದ್ದಾರೆ. ಬಹುತೇಕರು ಕಾಂಗ್ರೆಸ್ನಲ್ಲಿದ್ದರು. ಮಹಾರಾಷ್ಟ್ರದಲ್ಲಿ ಘೋಷಿಸಲಾದ 24 ಅಭ್ಯರ್ಥಿಗಳಲ್ಲಿ ಏಳು ಮತ್ತು ಜಾರ್ಖಂಡ್ನಲ್ಲಿ 14 ಅಭ್ಯರ್ಥಿಗಳಲ್ಲಿ ಆರು ಅಭ್ಯರ್ಥಿಗಳು ಹೊರಗಿನವರು.
ಇಷ್ಟೊಂದು ಜನರು ಬಿಜೆಪಿಗೆ ಏಕೆ ಸೇರ್ಪಡೆಗೊಂಡರು ಎಂಬ ಪ್ರಶ್ನೆಗೆ ಉತ್ತರಿಸಿದ ಪಕ್ಷದ ವಕ್ತಾರ ಆರ್ಪಿ ಸಿಂಗ್, ‘ಪ್ರತಿಯೊಬ್ಬ ರಾಜಕಾರಣಿಯೂ ತನಗೆ ಎಲ್ಲಿಂದ ಹೆಚ್ಚಿನ ಲಾಭ ಸಿಗಬಹುದು ಎಂದು ಯೋಚಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.