(www.vknews.in) ; ಮಕ್ಕಳ ಎಳೆ ಮನದಲ್ಲಿ ಕೂಡಾ ಎಂತೆಂತಹ ಉದಾತ್ತ ಭಾವನೆಗಳಿವೆ ನೋಡಿ! ಸುರತ್ಕಲ್ ನ ಸಾದಿಕ್ ರವರ ಪುತ್ರಿ ಮರ್ವಾ ಮಾಡಿದ ಈ ಒಂದು ಕಾರ್ಯ ನಿಜಕ್ಕೂ ಶ್ಲಾಘ್ಯ, ಸುಂದರ, ಮನೋಹರ. ಇವಳು ಮಿತ್ರಪಟ್ಣ ಮಾನ್ವಿಯ ಒಂದು ಕುಟುಂಬಕ್ಕೆ ಮೊನ್ನೆ ಈದುಲ್ ಫಿಥರ್ ಹಬ್ಬದಂದು 8100 ರೂ. ದಾನ ಮಾಡಿ ಬೆರಗು ಹುಟ್ಟಿಸಿದಳು. ಈದ್ ಹಬ್ಬವನ್ನು ಅರ್ಥಪೂರ್ಣಗೊಳಿಸಿದಳು.
ಕೊಟ್ಟ ಮೊತ್ತ ನಮ್ಮ ದೃಷ್ಟಿಯಿಂದ ಬಾರೀ ದೊಡ್ಡ ಮೊತ್ತವಾಗದಿರಬಹುದು. ಆದರೆ ಆ ಮುದ್ದು ಬಾಲಕಿ ಪರ್ವಾಳ ಕಡೆಯಿಂದ ಯೋಚಿಸಿದರೆ ಅದು ದೊಡ್ಡ ಮೊತ್ತ. ಅದರ ಹಿನ್ನೆಲೆಯಲ್ಲಿ ಅವಳ ಎಳೆ ಮನದಲ್ಲಿ ಅಡಗಿಸಿಟ್ಟ ಆ ಅದ್ಭುತ ಕಾನ್ಸ್ಪೆಕ್ಟ್ ಇದೆಯಲ್ಲ? ಅದು ಕೋಟಿ ಬೆಲೆಯದ್ದು.
ಮರ್ವಾ ನೀಡಿದ್ದ ಆ ಮೊತ್ತ ಅವಳ ಅಪ್ಪ ಸಾದಿಕ್ ಆಗಾಗ ಕೊಡುತ್ತಾ ಬಂದಿದ್ದ 100 ರೂ, 50 ರೂಗಳ ಒಟ್ಟು ಸಂಗ್ರಹ. ಈದ್ ಹಬ್ಬಕ್ಕೆ ಅವಳಿಗೆ ಸ್ವಂತಕ್ಕೆ ಏನಾದರೂ ಖರೀದಿ ಮಾಡಿಕೊಳ್ಳಲು ನೀಡಿದ್ದು. ಆದರೆ ಆ ಎಳೆ ಮನದಲ್ಲಿ ಮಾತ್ರ ಯಾರಿಗೂ ಗೊತ್ತೇ ಇಲ್ಲದಿದ್ದ ಒಂದು ಮಾನವೀಯ ಮಿಡಿತ ಚಿಗುರೊಡೆದಿತ್ತು. ಸರಿ ಸುಮಾರು ಅವಳದೇ ಪ್ರಾಯದ ಬಾಲಕಿ ಲಾರಿ ಡಿಕ್ಕಿ ಹೊಡೆದು ಮೃತಳಾದ ನೋವು ಆ ಎಳೆ ಮನದಲ್ಲಿ ಮಡುಗಟ್ಟಿತ್ತು. ಅವಳು ಆ ದುಡ್ಡನ್ನು ನೀಡಿದ್ದು ಅದೇ ಮೃತ ಬಾಲಕಿಯ ಹೆತ್ತವರಿಗೆ..! ಎಳೆ ಮಕ್ಕಳು ದುರ್ಮರಣಕ್ಕೀಡಾಗುವಾಗ ಎಲ್ಲರ ಮನ ಒಮ್ಮೆ ಕದಡುತ್ತದೆ. ಆದರೆ ಕೆಲವೇ ಅವಧಿಯಲ್ಲಿ ಅದು ಮಾಯವಾಗಿರುತ್ತದೆ. ಆದರೆ ಸಮಪ್ರಾಯದ ಮಕ್ಕಳ ಮನದಲ್ಲಿ ಅದು ಮಾಯದ ಬೇಸರವಾಗಿ ಬೇರು ಹಿಡಿದುಕೊಂಡಿರುತ್ತದೆ ಎಂಬುದಕ್ಕೆ ಮರ್ವಾಳ ಈ ನಡೆ ಸಾಕ್ಷಿ.
ಮರ್ವಾಳ ತಂದೆ ಸಾದಿಕ್ ನಮ್ಮ ಆ್ಯಕ್ಸಿಬ್ಲೂ ಮಿನರಲ್ ವಾಟರ್ ಕಂಪೆನಿ ಯ ಸುರತ್ಕಲ್ ನ ಡಿಸ್ಟಿಬ್ಯೂಟರ್ ಆಗಿದ್ದಾರೆಂಬುದು ಕಂಪೆನಿಗೊಂದು ಹೆಮ್ಮೆಯ ವಿಚಾರ. ಸಾದಿಕ್ ಕೂಡಾ ಉದಾರ ಮನಸ್ಥಿತಿಯ ವ್ಯಕ್ತಿ. ಮರ್ವಾ ತಂದೆಗೆ ತಕ್ಕ ಮಗಳೆನಿಸಿದ್ದಾಳೆ. ಮರ್ವಾಳಿಗೆ ಉಜ್ವಲ ಭವಿಷ್ಯತ್ತುಂಟಾಗಲಿ ಎಂಬ ದುಆದೊಂದಿಗೆ ನಮ್ಮ ಕಂಪೆನಿಯ ಪರವಾಗಿ ಅಭಿನಂದನೆಗಳು.
— ಡಿ.ಐ. ಅಬೂಬಕರ್ ಕೈರಂಗಳ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.