(www.vknews. in) ; ನಂದರಬೆಟ್ಟು ಅನ್ಸಾರಿಯಾ ಇಸ್ಲಾಮಿಕ್ ಮದ್ರಸದಲ್ಲಿ 19/04/2024 ರಂದು ಮಗ್ರಿಬ್ ನಮಾಜಿನ ನಂತರ ಮಿತಬೈಲ್ ರೇಂಜ್ ವತಿಯಿಂದ ರೇಂಜ್ ಮಟ್ಟದ ಮಿಹ್ರಜಾನುಲ್ ಬಿದಾಯ ( ಮದ್ರಸ ಆರಂಭೋತ್ಸವ) ಜರಗಿತು.
ಮದೀನಾ ಮಸ್ಜಿದ್ ಇಮಾಮ್ ಶಫೀಕ್ ಅರ್ಷದಿಯವರು ದುವಾದೊಂದಿಗೆ ಆರಂಭವಾದ ಸಭೆಯನ್ನು ಪರೀಕ್ಷಾ ಬೋರ್ಡು ಚೇರ್ಮೆನ್ ಹಾಜಿ ಅಬ್ದುಲ್ ಮಜೀದ್ ಮದನಿ ಉದ್ಘಾಟಿಸಿದರು. ಮಿತ್ತಬೈಲ್ ಮದ್ರಸ ಮೆನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಏನ್. ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು, ರೇಂಜ್ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ, ಸದರ್ ಮುಅಲ್ಲಿಂ ಅನ್ವರ್ ಅಝ್ಹರಿ, ಮದೀನಾ ಮಸ್ಜಿದ್ ಇಮಾಮ್ ಶಫೀಕ್ ಅರ್ಷದಿ ರೇಂಜ್ I. T. ಕೋಡಿನೇಟರ್ ರಫೀಕ್ ಅಸ್ಲಮಿ ಮಾತನಾಡಿದರು.
ಅನ್ಸಾರಿಯಾ ಇಸ್ಲಾಮಿಕ್ ಮದ್ರಸ ಹಾಗೂ ಮದೀನಾ ಮಸ್ಜಿದ್ ಇದರ ಉಪಾಧ್ಯಕ್ಷರಾದ ಎಸ್. ಎ. ರಝಕ್, ಸದಸ್ಯರಾದ ಅಹ್ಮದ್ ಕುಂಞ, ಲೆಕ್ಕ ಪರಿಶೋದಕ ಶರೀಫ್ ಕಂಟ್ರಾಕ್ಟರ್, ನಂದರಬೆಟ್ಟು SKSSF ಅಧ್ಯಕ್ಷ ಇಕ್ಬಾಲ್ ಕೊಳ್ತಮಜಲ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಆರಂಭದಲ್ಲಿ ರೇಂಜ್ ಕಾರ್ಯದರ್ಶಿ ಅನ್ವರ್ ಅಝ್ಹರಿ ಸ್ವಾಗತಿಸಿದರೆ ಕೊನೆಯಲ್ಲಿ ರಫೀಕ್ ಅಸ್ಲಮಿ ಧನ್ಯವಾದಗಳನ್ನು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.