ಕಣ್ಣೂರು (www.vknews.in) ; ನಿಲ್ಲಿಸಿದ್ದ ಪ್ರವಾಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಪಯ್ಯಂಬಲಂ ರೆಡ್ ಕ್ರಾಸ್ ರಸ್ತೆಯ ಶಾಬಿ ರಝಿಲ್ ನಿವಾಸಿ ಕೆ ಅಬ್ದುಲ್ ಬಾಸಿತ್ (21) ಮೃತಪಟ್ಟವರು. ಈತನೊಂದಿಗಿದ್ದ ರಬೀಹ್ (16) ಗಂಭೀರ ಗಾಯಗೊಂಡು ಕಣ್ಣೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶುಕ್ರವಾರ ನಸುಕಿನ 1.40ಕ್ಕೆ ಅಪಘಾತ ಸಂಭವಿಸಿದೆ. ತಲಶ್ಶೇರಿಯಿಂದ ಕಣ್ಣೂರು ಕಡೆಗೆ ಹೋಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ನಿಂತಿದ್ದ ಟೂರಿಸ್ಟ್ ಬಸ್ನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಸಿತ್ನನ್ನು ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು, ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಬೈಕ್ ಓಡಿಸುವಾಗ ನಿದ್ದೆಗೆ ಜಾರಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತೀರ್ಮಾನ. ಬಾಸಿತ್ ಕಣ್ಣೂರು ನಗರದ ವಾಣಿಜ್ಯ ಕಾಲೇಜಿನ ಪದವಿ ವಿದ್ಯಾರ್ಥಿ. ಇವರು ಕಣ್ಣೂರಿನ ಸಂಸ್ಥೆಯ ಉದ್ಯೋಗಿ ಅಫ್ಜಲ್-ಬಶೀರಾ ದಂಪತಿಯ ಪುತ್ರ. ಒಡಹುಟ್ಟಿದವರು: ಅಫ್ರಾ ಮತ್ತು ಆಮ್ರಾ (ಇಬ್ಬರೂ ವಿದ್ಯಾರ್ಥಿಗಳು).
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.