(www.vknews.in) ; ಹುಬ್ಬಳ್ಳಿಯ ಕಾಲೇಜ್ ವಿದ್ಯಾರ್ಥಿನಿ ನೇಹಾ ಎಂಬ ಮುಗ್ಧ ಹುಡುಗಿಯನ್ನು ನಿರ್ದಯವಾಗಿ ಕೊಂದ ಫಯಾಝ್, ಹೆಸರಿನಲ್ಲಿ ಮಾತ್ರ ಮುಸ್ಲಿಂ ಆಗಿದ್ದು ನಾಮಧಾರಿಯೊಬ್ಬನ ನೀಚ ಕೃತ್ಯವನ್ನು ಮುಂದಿಟ್ಟುಕೊಂಡು ಇಸ್ಲಾಂ ಧರ್ಮ ಮತ್ತು ಮುಸ್ಲಿಂ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಅಕ್ಷಮ್ಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ,ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹೇಳಿದ್ದಾರೆ.
ವಿವಿಧ ಧರ್ಮ, ಜಾತಿಯವರು ಪ್ರೀತಿಸುವ ಪ್ರಕರಣ ಹಿಂದೆಯೂ ನಡೆದಿದ್ದು ಇದೀಗ ಫಯಾಝ್ ಪ್ರೀತಿಯ ಹೆಸರಿನಲ್ಲಿ ಅಮಾಯಕ ವಿದ್ಯಾರ್ಥಿನಿಯೊಬ್ಬಳನ್ನು ಹತ್ಯೆ ಮಾಡುವ ಮೂಲಕ ತನ್ನ ರಾಕ್ಷಸ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾನೆ. ಇಡೀ ಮನುಕುಲ ತಲೆತಗ್ಗಿಸುವ ನೀಚ ಕೃತ್ಯ ಮಾಡಿದ ಫಯಾಝ್ ಎಂಬ ಕೊಲೆಗಡುಕನಿಗೆ ಮರಣದಂಡನೆಗಿಂತ ಕಡಿಮೆಯ ಶಿಕ್ಷೆ ನೀಡಬಾರದು.
ನಾಡಿನಲ್ಲಿ ಅಪರಾಧ ಪ್ರವೃತ್ತಿ ಹೆಚ್ಚಲು ಭಾರತದ ದುರ್ಬಲ ಕಾನೂನು ಪ್ರಮುಖ ಕಾರಣವಾಗಿದೆ. ಮುಸ್ಲಿಂ ರಾಷ್ಟ್ರ ಗಳಲ್ಲಿರುವಂತೆ ಕೊಂದವರನ್ನು ಕೊಂದರೆ ಮತ್ತು ಕಳ್ಳತನ ಮಾಡಿದವರ ಕೈ ಕತ್ತರಿಸುವ ಕಠಿಣ ಕಾನೂನು ಜಾರಿಗೆ ತಂದರೆ ಮಾತ್ರ ಭಾರತದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗಬಹುದು. ಅಪರಾಧ ಮನೋಭಾವ ಇರುವವರನ್ನು ಯಾವುದೇ ಒಂದು ಧರ್ಮ, ಜಾತಿಯ ಆಧಾರದಲ್ಲಿ ಕಾಣದೆ ಕೇವಲ ಅಪರಾಧಿಗಳನ್ನಾಗಿ ಮಾತ್ರ ಕಾಣುವ ಪರಿಪಾಠ ಬೆಳೆಸಿಕೊಂಡರೆ ನಾಡಿನ ಬಹುತೇಕ ಸಮಾಜ ವಿಭಜಕ ಘಟನೆಗಳು ಕಡಿಮೆಯಾಗಬಹುದು.
ನೇಹಾ ಳ ಕೊಲೆ ಆರೋಪಿ ಫಯಾಝ್ ನಿಗೆ ಕಠಿಣ ಶಿಕ್ಷೆ ವಿಧಿಸಿ ಜನಸಾಮಾನ್ಯರಿಗೆ ಕಾನೂನಿನ ಮೇಲೆ ಗೌರರವುಂಟಾಗುವಂತೆ ಮಾಡಬೇಕಾದದ್ದು ಸರಕಾರದ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.