(www.vknews.in) ; ಪೊಲೀಸ್ ಇಲಾಖೆಯ ಚರಿತ್ರೆ ಯಲ್ಲೇ ಶಿಸ್ತಿನ ಶಿಖರವನ್ನೇ ಕಟ್ಟಿದ ಕೀರ್ತಿ ರಾಜ್ಯದ ADGP ಶ್ರೀ ಅಲೋಕ್ ಕುಮಾರ್ IPS ರವರಿಗೆ ಸಲ್ಲುತ್ತದೆ. ಇಲಾಖೆಯ ಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರದಂತಹ ಅನಿಷ್ಟತೆಗಳನ್ನು ನಿದಾ೯ಕ್ಷಿಣ್ಯವಾಗಿ ಕೊನೆಗೊಳಿಸಿ ಅದಕ್ಷ ಪೊಲೀಸರನ್ನು ಅಮಾನತು ಮಾಡಿ ದಕ್ಷರಿಗೂ ಪ್ರಾಮಾಣಿಕರಿಗೂ ಆಶ್ರಯ ಪುರಸ್ಕಾರ ನೀಡಿದ ಒಬ್ಬ ಮಹಾನ್ ಮೇಧಾವಿಯಾದ ಶ್ರೀ ಅಲೋಕ್ ಕುಮಾರ್ ರವರು ರಾಜ್ಯದ ಎಲ್ಲಾ ಪೊಲೀಸರಿಗೆ ಶಿಸ್ತಿನ ಪಾಠವನ್ನು ಕಲಿಸಿ ಕೊಟ್ಟಿದ್ದಾರೆ.
ರಾಜ್ಯದ ವಿವಿದೆಡೆಗಳಲ್ಲಿ ASP ಯಾಗಿಯೂ, DCP ಯಾಗಿಯೂ, ಜಂಟಿ ಪೊಲೀಸ್ ಕಮಿಷನರ್ ಆಗಿಯೂ, ಪೊಲೀಸ್ ಕಮಿಷನರ್ ಆಗಿಯೂ, ರಾಜ್ಯದ ಕಾನೂನು ಸುವ್ಯವಸ್ಥೆ ಯ ADGP ಯಾಗಿಯೂ ಅತ್ಯಂತ ದಕ್ಷತೆ ಗಳಿಂದ ಸೇವೆ ಸಲ್ಲಿಸಿ ಸಾರ್ವಜನಿಕರ ಮತ್ತು ಸರಕಾರದ ಪ್ರಶಂಸೆಗೆ ಪಾತ್ರರಾಗಿರುವ ಶ್ರೀ ಅಲೋಕ್ ಕುಮಾರ್ ರಂತಹ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿ ಪೊಲೀಸ್ ಇಲಾಖೆಯಲ್ಲಿ ಸಿಗುವುದು ಬಹಳ ವಿರಳ. ಲಂಚ ಭ್ರಷ್ಟಾಚಾರ ಇತ್ಯಾದಿಗಳ ಪರಮ ಶತ್ರುವಾದ ಇವರು ಅತ್ಯಂತ ಸರಳ ಹಾಗೂ ನಿರಾಡಂಬರ ವ್ಯಕ್ತಿ ಯಾಗಿದ್ದಾರೆ. ಎಷ್ಟೇ ದೊಡ್ಡ ಪ್ರಭಾವಿಗಳ ಆಸೆ-ಆಮಿಷ ಬೆದರಿಕೆಗಳಿಗೂ ಬಗ್ಗದೆ ರಾಜಕಾರಣಿಗಳ ಒತ್ತಡ ಬಲವಂತಗಳಿಗೆ ಜಗ್ಗದೆ ಪೊಲೀಸ್ ಕಾನೂನಿನ ಪ್ರತೀ ಇಂಚನ್ನು ಕ್ರಮಿಸಿ ಪೊಲೀಸ್ ಇಲಾಖೆಯಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದಿದ್ದಾರೆ. ಇಂತಹ ಒಬ್ಬ ಧೀಮಂತ ಪೊಲೀಸ್ ವರಿಷ್ಠ ರನ್ನು ಪಡೆದ ರಾಜ್ಯದ ಜನತೆ ನಿಜಕ್ಕೂ ಧನ್ಯರು.
ಶ್ರೀಯುತ ಅಲೋಕ್ ಕುಮಾರ್ ರವರು ಶೀಘ್ರವೇ ರಾಜ್ಯದ ಪೊಲೀಸ್ ಮಹಾ ನಿದೇ೯ಶಕರಾಗಿ ಭಡ್ತಿಗೊಂಡು ರಾಜ್ಯ ಪೊಲೀಸ್ ಇಲಾಖೆಗೆ ಕೀರ್ತಿ ತರಲೆಂದು ನಾವು ಹಾರೈಸುತ್ತೇವೆ.
ಶೇಖ್ – ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.