ಮಂಗಳೂರು (www.vknews.in) : ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರತೀ ಮುಸ್ಲಿಮ್ ತಾಯಿಯಂದಿರು ತಮ್ಮ ಮಕ್ಕಳನ್ನು ದಾನ ನೀಡಿದ್ದಾರೆ. ಈ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಮುಸ್ಲಿಮರು ಗ್ಯಾಲನ್ ಗಟ್ಟಲೆ ರಕ್ತವನ್ನು ಸುರಿದಿದ್ದೇವೆ. ಈ ದೇಶದ ಮಣ್ಣಿನಲ್ಲಿ ಮುಸ್ಲಿಮ್ ಹೋರಾಟಗಾರರ ನೆತ್ತರಿನ ಸೊಗಡು ಅಡಗಿದೆ. ಈ ದೇಶದ ಆಸ್ತಿಯನ್ನು ಅನುಭವಿಸುವ ಹಕ್ಕು ಈ ದೇಶದ ಪ್ರತಿಯೊಬ್ಬ ಮುಸ್ಲಿಮರಿಗಿದೆ.
ಅದನ್ನು ಅನುಭವಿಸುವ ಹಕ್ಕನ್ನು ಯಾರಿಂದಲೋ ಬಿಕ್ಷೆ ಕೇಳಬೇಕೆಂದಿಲ್ಲ. ಅದನ್ನು ಅನುಭವಿಸಿಯೇ ತೀರುತ್ತೇವೆ. ಚುಣಾವಣೆಯಲ್ಲಿ ಹಿನ್ನಡೆ ಅನುಭವಿಸುವ ನಿಟ್ಟಿನಲ್ಲಿ ರಾಜಸ್ತಾನದ ಬನ್ ಸ್ವಾರದಲ್ಲಿ ಮೋದಿ, ಅಲ್ಲಿಯ ಮುಗ್ಧ ಜನರನ್ನು ಮಂಕು ಬೂದಿ ಎರಚಲು ಪ್ರಯತ್ನಿಸಿದ್ದಾರೆ. ಈ ದೇಶದ ಮುಸ್ಲಿಮರಿಗೆ ಇತರರ ತಾಳಿ ಮಾಂಗಲ್ಯದ ಅಗತ್ಯ ಇಲ್ಲ. ಈ ದೇಶದ ಮೊಗಲರು,ನವಾಬರು, ಸುಲ್ತಾನರು, ಕಬೀರರು,ಸೂಫಿ ಸಂತರು ನೀಡಿದ ಕೊಡುಗೆ ಏನು ಎಂದು ಚರಿತ್ರೆ ಓದಿ ತಿಳಿಯಲಿ.
ಈ ದೇಶದ ಆಸ್ತಿಯನ್ನು ಅಂಬಾನಿ ,ಅದಾನಿ ಮತ್ತು ಅರೇಬಿಯಾದ ಶೇಖ್ ಗಳಿಗೆ ಮಾರಿದ ಗೃಹ ಸಚಿವರಂತಹ ಹೀನ ಪರಂಪರೆ ಯಂತವರು ಅಲ್ಲ ಈ ದೇಶದ ಸ್ವಾತಂತ್ಯ ಪ್ರೇಮಿ ಮುಸ್ಲಿಮರು ಎಂದು ಮೋದಿ ಅವರು ಅರಿಯುವುದು ಒಳಿತು. ಪ್ರಧಾನಿ ಅವರು ಈ ದೇಶದ ಪ್ರತಿ ಮುಸ್ಲೀಮರಲ್ಲಿ ಕ್ಷಮೆ ಕೇಳಬೇಕಿದೆ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.