(www.vknews.in) ; NRI ಪ್ರವಾಸಿಗರು ಕಲ್ಲೇಗ ಜಮಾಅತ್ ವತಿಯಿಂದ ದಿನಾಂಕ 21/04/2023 ರಂದು ಪುತ್ತೂರಿನ ಕಲ್ಲೇಗ ಮದ್ರಸ ಸಭಾಂಗಣದಲ್ಲಿ ನಡೆದ ಸಾಮೂಹಿಕ ಮುಂಜಿ CIRCUMCISION ಕಾರ್ಯಕ್ರಮ NRI ಪ್ರವಾಸಿಗರು ಕಲ್ಲೇಗ ಜಮಾಅತ್ ಸಮಿತಿಯ ಅಧ್ಯಕ್ಷರಾದ ಜಃ ಮುಹಮ್ಮದ್ ಬೊಳ್ವಾರ್ (ಮಮ್ಮು ವಿದ್ಯಾಪುರ ಕಬಕ )ರವರ ಅಧ್ಯಕ್ಷತೆಯಲ್ಲಿ ಬಹಳ ಸರಳ ಸುಂದರವಾಗಿ ನಡೆಯಿತು_
_ಕಾರ್ಯಕ್ರಮದಲ್ಲಿ ಕಲ್ಲೇಗ ಜುಮಾ ಮಸೀದಿಯ ಮುದರ್ರಿಸ್ ಬಹುಃ ಶಾಫಿ ಫೈಝಿ ಇರ್ಫಾನಿ ಉಸ್ತಾದ್ ದುವಾಃ ಮಾಡಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲಾರನ್ನ NRI ಪ್ರವಾಸಿಗರು ಕಲ್ಲೇಗ ಜಮಾಅತ್ ಸಮಿತಿಯ ಪ್ರ.ಕಾರ್ಯದರ್ಶಿ ಜಃ ಅಬ್ದುಲ್ ಹಮೀದ್ ಕಬಕ ರವರು ಸ್ವಾಗತಿಸಿದರು ಬಳಿಕ NRI ಸಮಿತಿ ನಡೆದು ಬಂದ ದಾರಿ ಮತ್ತು ಸಮಿತಿಯ ವತಿಯಿಂದ ಕಳೆದ ಎಂಟು ವರ್ಷಗಳಿಂದ ನಡೆದ ಉತ್ತಮ ಕಾರ್ಯಕ್ರಮ, ಸೇವೆ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಮದುವೆ, ಮುಂಜಿ, ಹಾಗೂ ಕರ್ನಾಟಕದಲ್ಲೇ ಪ್ರಥಮ ಭಾರಿಗೆ ನಡೆಸಿ ಬಹಳಷ್ಟು ಪ್ರಶಂಸೆಗೆ ಪಾತ್ರವಾದ ಜಮಾಅತ್ ಸಂಗಮ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಪ್ರಸಾವಿಕ ಭಾಷಣವನ್ನ NRI ಸಮಿತಿಯಯ ಪ್ರಧಾನ ಸಲಹೆಗಾರರಾದ ಜಃ ಬಶೀರ್ ಹಾಜಿ ಕಬಕ ರವರು ಪ್ರಾಸ್ತಾವಿಕವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಲ್ಲೇಗ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾದ ಜಃ ಕೆ.ಪಿ.ಮುಹಮ್ಮದ್ ಹಾಜಿ, ಉಪಾಧ್ಯಕ್ಷರಾದ ಜಃ ಅಡ್ವಕೇಟ್ ಸಿದ್ದೀಕ್ ಹಾಜಿ, ಕೋಶಾಧಿಕಾರಿ ಜಃ ಆಶ್ರಫ್ ಹಾಜಿ ಕಲ್ಲೇಗ, ಪ್ರ.ಕಾರ್ಯದರ್ಶಿ ಅಬ್ದುಲ್ ರಹಿಮಾನ್ (ಅದ್ದಮ್ಮ )ಜಮಾಅತ್ ಕಮಿಟಿಯ ಸದಸ್ಯರು ಹಾಗೂ ಮುಂಜಿ ಕಾರ್ಯಕ್ರಮ ನಡೆಸಲು ಬಂದ ಕಾರ್ಕಳದ ನಿವೃತ್ತ ಸರಕಾರಿ ವ್ಯೆದ್ಯರಾದ ಮಾನ್ಯ ಡಾಃ ರಹಮತ್ತುಲ್ಲಾ ಯೂಸುಫ್ ಹಾಗೂ ಅಲ್ – ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ )ಇದರ ಗೌರವಾಧ್ಯಕ್ಷರಾದ ಕೆ.ಪಿ.ಅಬುಬಕ್ಕರ್ ಹಾಜಿ, ಅಲ್ ಅಮೀನ್ ಯಂಗ್ ಮೆನ್ಸ್ ಅಧ್ಯಕ್ಷರಾದ ಜಃ ಅಬ್ದುಲ್ ರಶೀದ್, ಹಾಗೂ ಯಂಗ್ ಮೆನ್ಸ್ ಸದಸ್ಯರು, ಬೊಳ್ವಾರ್ ಜುಮಾ ಮಸೀದಿಯ ಪ್ರ.ಕಾರ್ಯದರ್ಶಿ ಮುಹಮ್ಮದ್ ಹನೀಫ್, ಸಹದಿಯಾ ಮದ್ರಸ ಶಾಂತಿ ನಗರ ಇದರ ಆಡಳಿತ ಸಮಿತಿಯ ಸದಸ್ಯರು, ಕೆದುವಡ್ಕ ಮದ್ರಸದ ಆಡಳಿತ ಸಮಿತಿಯ ಸದಸ್ಯರು, ಕಾರ್ಜಾಲ್ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರು, ಪೋಳ್ಯ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಹಾಗೂ SKSSF ಕಲ್ಲೇಗ ಮತ್ತು ಶಾಂತಿ ನಗರ ಶಾಖೆಯ ಅಧ್ಯಕ್ಷರು ಮತ್ತು ಸದಸ್ಯರು ಮತ್ತು NRI ಪ್ರವಾಸಿಗರು ಕಲ್ಲೇಗ ಜಮಾಅತ್ ಸಮಿತಿಯ ಉಪಾಧ್ಯಕ್ಷರಾದ ಮೊಯಿದು ಬೊಳ್ವಾರ್, ಇಬ್ರಾಹಿಮ್ ಕಲ್ಲೇಗ, ಊರಿನ ಪ್ರತಿನಿಧಿ ಹನೀಫ್ ಹಾಜಿ ಉದಯ, ಫಾರೂಕ್ ಮುರ ಹಾಗೂ NRI ಸದಸ್ಯರು ಮತ್ತು ಜಮಾಅತ್ ಭಾಂಧವರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ NRI ಪ್ರವಾಸಿಗರು ಕಲ್ಲೇಗ ಜಮಾಅತ್ ನ ನಿಕಟಪೂರ್ವ ಅ಼ಧ್ಯಕ್ಷರಾದ ಬಹುಃ ಸುಲೈಮಾನ್ ಮೌಲವಿ ರವರು ಧನ್ಯವಾದ ಸಮರ್ಪಿಸಿದರು ಕಾರ್ಯಕ್ರಮದಲ್ಲಿ ಸುಮಾರು 35 ಮಕ್ಕಳ ಮುಂಜಿ CIRCUMCISION ಕಾರ್ಯ ನಡೆಯಿತು ಕಾರ್ಯಕ್ರಮದಲ್ಲಿ ಲಘು ಉಪಹಾರ ಪಾನೀಯ ಮತ್ತು ಮುಂಜಿ ನಡೆಸಿದ ಮಕ್ಕಳಿಗೆ ಮೆಡಿಸಿನ್ ಮತ್ತು ಓರಸ್ ಎನರ್ಜಿ ಡ್ರಿಂಕ್ಸ್ , ಚಾಕ್ ಲೇಟ್, ಐಸ್ ಕ್ರೀಂ ನೀಡಲಾಯಿತು.
ವರದಿ :- ಹನೀಫ್ ಹಾಜಿ ಉದಯ ಕಲ್ಲೇಗ, ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.