ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್): ಏಪ್ರಿಲ್ 23 ರ ಮಂಗಳವಾರದಂದು ವಿಟ್ಲ ಸಮೀಪದ ಪಡಿಬಾಗಿಲು ಎಂಬಲ್ಲಿ ಬಾವಿಗೆ ರಿಂಗ್ ಅಳವಡಿಸುವಾಗ ಉಸಿರುಗಟ್ಟಿ ಮೃತರಾದ ಇಬ್ರಾಹಿಂ ಕುಕ್ಕಿಲ ಇವರ ಮನೆಗೆ ವಿಟ್ಲ ಜಮಾತ್ ಅಧ್ಯಕ್ಷ ಆಶ್ರಫ್ ಮೊಹಮ್ಮದ್ ಪೊನ್ನಟು, ಉಪಾಧ್ಯಕ್ಷ ಮೊಹಮ್ಮದ್ ಗಮಿ, ಜಮಾಅತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲ್ ಆಡಳಿತ ಸಮಿತಿ ಕಾರ್ಯದರ್ಶಿ ನೋಟರಿ ವಕೀಲ ಕೆ. ಅಬೂಬಕರ್, ವಿಟ್ಲ ಜಮಾಅತ್ ಖತೀಬ್ ಅಬ್ಬಾಸ್ ಪೈಝಿ, ಮುಅಝೀನ್ ಹಕೀಮ್ ಮುಸ್ಲಿಯಾರ್ ಬೇಟಿ ನೀಡಿ ಸಂತಾಪ ಸೂಚಿಸಿದರು.
ಮೃತರ ಇಬ್ಬರು ಮಕ್ಕಳಾದ ಮೊಹಮ್ಮದ್ ಇರ್ಫಾನ್ 5ನೇ ತರಗತಿ ಮತ್ತು ಮೊಹಮ್ಮದ್ ಇಶಾನ್ 3ನೇ ತರಗತಿಯಲ್ಲಿ ವಿಟ್ಲ ಜಮಾತ್ ಅಧೀನದ ಹೊರೈಝನ್ ಪಬ್ಲಿಕ್ ಸ್ಕೂಲಿನಲ್ಲಿ ಕಲಿಯುತ್ತಿದ್ದು ಇವರಿಗೆ ಹತ್ತನೇ ತರಗತಿ ತನಕ ಇದೇ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸ ಕೊಡುವುದಾಗಿ ಜಮಾತ್ ಅಧ್ಯಕ್ಷರು ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.