(www.vknews.in) : ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ನ ಸದಸ್ಯತ್ವ ಅಭಿಯಾನ ಮೇ 3 ರಿಂದ ಆರಂಭವಾಗಲಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಛೇರಿ ಹಾಗೂ ಮಾನವೀಯತೆ ನಿರಾಶ್ರಿತರ ಆಶ್ರಮ ಮತ್ತು ಗ್ರಂಥಾಲಯವನ್ನು 7ನೇ ಹೊಸಕೋಟೆ ಸುಂಟ್ಟಿಕೊಪ್ಪದಲ್ಲಿ ತೆರೆಯಲು ಕೆಲಸವನ್ನು ಪ್ರಾರಂಭ ಮಾಡಲಾಗಿದೆ ಹಾಗೂ ಕೆಲವು ಉದ್ದೇಶಗಳನ್ನು ಕಾರ್ಯರೊಪಕ್ಕೆ ತರುವ ಸಲುವಾಗಿ ಟ್ರಸ್ಟ್ ನ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಮೊದಲ ಹಂತದಲ್ಲಿ ಮಾನವೀಯತೆ ಟ್ರಸ್ಟ್ ನ ಎನ್ ಜಿ ಒ ಸದಸ್ಯತ್ವವನ್ನು ತೆಗೆದು ಕೊಂಡವರಿಗೆ ಮಾತ್ರ ಸಂಸ್ಥೆಯ ಯಾವುದೇ ಸ್ಥಾನಮಾನ ಹಾಗೂ ಉದ್ಯೋಗ ಅವಕಾಶಗಳನ್ನು ನಿಡಲಾಗುತ್ತದೆ . ಸದಸ್ಯತ್ವ ತೆಗೆದು ಕೊಳ್ಳಲು ಸರ್ಕಾರದ ಮಾನ್ಯತೆ ಪಡೆದುಕೊಂಡಿದ್ದು ಅದರಂತೆ ಸಂಸ್ಥೆಯ ಸದಸ್ಯತ್ವ ಅಭಿಯಾನ ಮೇ 3 ರಿಂದ ಆರಂಭವಾಗಲಿದೆ.
18 ವರ್ಷ ಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಗೆ ಟ್ರಸ್ಟ್ ನ ಸದಸ್ಯರಾಗಲು ಅವಕಾಶ ಕಲ್ಪಿಸಲಾಗಿದೆ ಹಾಗೂ ಸದಸ್ಯತ್ವ ಪಟ್ಟಿಯಲ್ಲಿರುವ ಮತ್ತು ಸಂಸ್ಥೆಯ ಚಟುವಟಿಕೆಗಳಲ್ಲಿ ಭಾಗವಹಿಸುವ ವ್ಯಕ್ತಿಯು ಟ್ರಸ್ಟ್ ನ ಸದಸ್ಯತ್ವವನ್ನು ತೆಗೆದುಕೊಳ್ಳಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ .ಸಂಸ್ಥೆಯ ಎನ್ ಜಿ ಒ ಗಳನ್ನು ಟ್ರಸ್ಟಿಗಳು ಆಯ್ಕೆ ಮಾಡುತ್ತಾರೆ ಅಥವಾ ತೆಗೆದು ಹಾಕುತ್ತಾರೆ ಮತ್ತು ಫಿಕ್ಸಿಂಗ್ ಅಧಿಕಾರಿಯಾಗಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶಿವಕುಮಾರ್ ಹೂಟಗಳ್ಳಿ ಇವರು ತಿಳಿಸಿರುತ್ತಾರೆ.
ಸಭೆಯಲ್ಲಿ ಟ್ರಸ್ಟಿಗಳಾದ 7ನೆ ಹೊಸಕೋಟೆಯ ಸೌಮ್ಯಶ್ರೀ, ಮಡಿಕೇರಿಯ ಚೇತನ್ .ಕೆ .ಎಂ , ಮೈಸೂರಿನ ನಾಗೇಂದ್ರ. ಕೆ ಮತ್ತು ಲೇನರ್ಡ ಜೋಸೆಫ್ ಬ್ಯಾಸ್ಟೀನ್ ಹಾಗೂ ಕಾನೂನು ಘಟಕದ ಮುಖ್ಯಸ್ಥೆ ಮೊನಾಲಿಸಾ ಶಿವಕುಮಾರ್ ವಕೀಲರು ಮತ್ತು ಸಂಸ್ಥೆಯ ಪ್ರಾದೇಶಿಕ ಆಡಳಿತ ಅಧಿಕಾರಿ 7ನೆ ಹೊಸಕೋಟೆಯ ಸ್ಟೇನಿ ಜೋಸೆಫ್ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಮಾಹಿತಿಗಾಗಿ 9481332181 ಸಂಪರ್ಕಿಸಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.