(www.vknews.in) : SKSSF ದೇರಳಕಟ್ಟೆ ಶಾಖೆಯ ವತಿಯಿಂದ ಮಾಸಿಕ ಶಂಸುಲ್ ಉಲಮಾ ಮೌಲಿದ್ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ದೇರಳಕಟ್ಟೆ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ಹಾಜಿ ಕೆ ಅಬೂಬಕ್ಕರ್ ನಾಟ್ಟೆಕ್ಕಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಬದ್ರಿಯಾ ಜುಮಾ ಮಸೀದಿ ಖತೀಬ್ ಬಹು ತಾಜುದ್ದೀನ್ ರಹ್ಮಾನಿ ಮೌಲಿದ್ ಮಜ್ಲಿಸ್ ಗೆ ನೇತೃತ್ವ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿಯಲ್ಲಿ 03 ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸಿ SKSSF ನ ಪ್ರತಿಯೊಂದು ಕಾರ್ಯಚಟುವಟಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ಬಹು ಇಸ್ಹಾಖ್ ಫೈಝಿ ಉಸ್ತಾದರನ್ನು SKSSF ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಬೀಳ್ಕೊಡುಗೆ ನಡೆಸಲಾಯಿತು, ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಮಾತನಾಡಿದ ಬಹು ಇಸ್ಹಾಖ್ ಫೈಝಿ SKSSF ದೇರಳಕಟ್ಟೆ ಶಾಖೆಯು ಜಿಲ್ಲೆಯಲ್ಲೇ ಮಾದರಿ ಶಾಖೆಯಾಗಿ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಅಭಿನಂದನಾರ್ಹವಾಗಿದೆ, ಸಹಚಾರಿ ರಿಲೀಫ್ ಸೆಂಟರ್ ಮೂಲಕ SKSSF ಕಾರ್ಯಕರ್ತರು ನಡೆಸುವ ಕಾರುಣ್ಯ ಸೇವೆಗೆ ನಾಡಿನ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಉಮರುಲ್ ಫಾರೂಖ್ ತಂಙಳ್, ದೇರಳಕಟ್ಟೆ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ದಾರಿಮಿ ಬದ್ಯಾರ್, ಬದ್ರಿಯಾ ಜುಮಾ ಮಸೀದಿ ಮುಅಝಿನ್ ಉಸ್ತಾದ್ ಉಬೈದ್ ಮುಸ್ಲಿಯಾರ್, SKSSF ದೇರಳಕಟ್ಟೆ ಶಾಖೆಯ ಗೌರವ ನಿರ್ದೇಶಕರಾದ ಹಾಜಿ ಅಬ್ದುರ್ರಹ್ಮಾನ್ ಪನೀರ್, ಮೊಹಮ್ಮದ್ ನಡುಪದವು, ಎಸ್.ವೈ ಎಸ್ ದೇರಳಕಟ್ಟೆ ಉಪಾಧ್ಯಕ್ಷರಾದ ಮೊಹಮ್ಮದ್ ಪನೀರ್, SKSSF ದೇರಳಕಟ್ಟೆ ಶಾಖೆಯ ಮಾಜಿ ಅಧ್ಯಕ್ಷರಾದ ಹಾಜಿ ಕೆರೀಂ ಡಿ, ಬೆಳ್ಮ ಗ್ರಾಮ ಪಂಚಾಯತ್ ಸದಸ್ಯರಾದ ಇಕ್ಬಾಲ್ ಹೆಚ್.ಆರ್, SKSSF ಉಳ್ಳಾಲ ಕ್ಲಸ್ಟರ್ ಕೌನ್ಸಿಲರ್ ಶಾಕಿಬ್ ಯಮಾನಿ, ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಸಿರ್ ಡಿ, ಕೇಂದ್ರ ಜುಮಾ ಮಸೀದಿ ಬೆಳ್ಮ ರೆಂಜಾಡಿ ಮಾಜಿ ಕಾರ್ಯದರ್ಶಿ ಖಾಸಿಂ ಹಾಜಿ,ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ SKSSF ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿ, ದೇರಳಕಟ್ಟೆ ಶಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇರ್ಫಾನ್ ಡಿ.ಧನ್ಯವಾದ ಸಮರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.