ಪತ್ರಕರ್ತರಿಗೆ ಸರಕಾರದಿಂದ ಜೀವವಿಮಾ ಒದಗಿಸಲು ಒತ್ತಾಯ
ಮುದ್ದೇಬಿಹಾಳ (www.vknews.com) : ಕೋವಿಡ-19 ವೈರಸ್ಸ ವಿರುದ್ಧ ವಾರಿಯರ್ಸವಾಗಿ ಹೋರಾಟದಲ್ಲಿ ಪತ್ರಕರ್ತರ ಮತ್ತು ಮಾಧ್ಯಮ ಸಿಬ್ಬಂದಿಗಳಿಗೆ ಪಾತ್ರವೂ ಪ್ರಮುಖವಾಗಿದೆ. ಆದ್ದರಿಂದ ರಾಜ್ಯ ಸರಕಾರವು ಪತ್ರಕರ್ತರಿಗೆ ವಿಶೇಷ ಜೀವ ವಿಮಾ ಸೌಲಭ್ಯವನ್ನು ಘೋಷಿಸಬೇಕೆಂದು ಸಕಾರಕ್ಕೆ ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘ ಮಹಾಮಂಡಳ ರಾಜ್ಯಾಧ್ಯಕ್ಷ ಅಬ್ದುಲರಝಾಕ ನದಾಫ್ ಅವರು ಕರ್ನಾಟಕ ಸರಕಾರಕ್ಕೆ ತಹಶೀಲ್ದಾರ ಮೂಲಕ ಸರಕಾರ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶನಿವಾರ ಈ ವಿಚಾರವಾಗಿ ಟ್ವೀಟ್ ಮಾಡುವ ಮೂಲಕ ಮಾತನಾಡಿದವರು. ಕೊರೋನಾ ವಿರುದ್ದದ ಹೋರಾಟದಲ್ಲಿ ಲಾಕಡೌನ್ ಆದೇಶವಾದಾಗಿನಿಂದ ಹಗಲು ರಾತ್ರಿ ತಮ್ಮ ಆರೋಗ್ಯದ ಹಂಗು ತೋರೆದು ನಮ್ಮ ನಿಮ್ಮಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮಾಧ್ಯಮದ ಮಿತ್ರರಿಗೆ ಯಾವುದೇ ಸರಕಾರದ ವೇತನ ಮತ್ತು ಆರೋಗ್ಯ ವಿಮೆ ಇರುವದಿಲ್ಲಿ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋರೊನಾ ವೈರಸ್ಸದಿಂದ ಭಯಭೀತಿಯಿಂದ ಕಾರ್ಯನಿರ್ವಹಿಸುವ ಮಾಧ್ಯಮದ ಬಗ್ಗೆ ಸರಕಾರ ಮುನ್ಸೂಚನೆ ವಹಿಸಿ ಇವರ ಆರೋಗ್ಯದ ದೃಷ್ಠಿಯಿಂದ ಜೀವ ವಿಮಾ ಒದಗಿಸುವಂತೆ ಆಗ್ರಹಿಸಿದರು. ಹೋರಾಟದಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಪತ್ರಕರ್ತರು ತಮ್ಮ ಜೀವ ಲೆಕ್ಕಿಸದೆ ಈ ಮಾರಕ ಸೋಂಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ದೇಶದಲ್ಲಿ ಜನರು ಸಾವು ನೋವುಗಳಿಂದ ತೊಂದರೆ ಅನುಭವಿಸುವಂತಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರ ಕೊರೋನಾ ವೈರಸ್ ತಡೆಯುವುದಕ್ಕಾಗಿ ತಕ್ಷಣವೆ ಮುಂಜಾಗೃತೆ ತೆಗೆದುಕೊಂಡಿದ್ದರಿಂದ ಹೆಚ್ಚಿನ ಸಾವು ನೋವುಗಳಾಗುವುದನ್ನು ತಪ್ಪಿಸವಂತಾಗಿದೆ.
ಬೇರೆ ದೇಶಗಳನ್ನು ಹೊಲಿಸಿದರೆ ನಮ್ಮ ದೇಶ ಲಾಕಡೌನನಿಂದ ಹಾಗೂ ಕೊರೋನಾ ವಾರಿಯರ್ಸಗಳಾಗಿ ಹೋರಾಟ ಮಾಡಿದ ವೈದ್ಯರು, ಪೋಲಿಸ ಸಿಬ್ಬಂದಿಗಳ ಜೊತೆಗೆ ವರದಿಗಾರರು, ಮಾಧ್ಯಮ ಕ್ಯಾಮೀರಾಮ್ಯಾನ, ಸಹ ಕೋವಿಡ್-19 ವಿರುದ್ದ ಹೆಚ್ಚಿನ ಶ್ರಮದಾಯಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಜನರಿಗೆ ಜಾಗೃತಿ, ಪ್ರಚಾರದಾಯಕ ಕಾರ್ಯದಲ್ಲಿ ಮುನ್ಸೂಚನೆ ವಹಿಸಿದ್ದಾರೆ.
ಕೋವಿಡ್-19 ಲಾಕಡೌನ್ ಆದಾಗಿನಿಂದ ಮಾಧ್ಯಮದ ಸಲಹೆಗಾರರು ಸುದ್ದಿಗಾಗಿ ಜೀವದ ಹಂಗನ್ನು ತೊರೆದು ವೈರಸ್ಸ ಹರಡಿರುವಂತಹ ಸ್ಥಳದಲ್ಲಿ ಹೋಗಿ ಅವರ ಚಿತ್ರಿಕರಣ ಮಾಡುವುದು, ವರದಿಯನ್ನು ಪ್ರಕಟಿಸುವುದು ಕೋರೊನಾದ ವಿರುದ್ದ ಹೋರಾಟ ಮಾಡಿ ತಮ್ಮ ಪ್ರಾಣವನ್ನೇ ಪಣಕಿಟ್ಟು ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ಮಹತ್ವದ ಸುದ್ದಿಗಳನ್ನು ಸಮೂಹ ಮಾಧ್ಯಮದಲ್ಲಿ ಬಿಂಬಿಸಿ ಜನರಿಗೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ, ಇತ್ತೀಚಿಗೆ ರಾಮನಗರದಲ್ಲಿ ಸುದ್ದಿಗಾಗಿ ತೆರಳಿ ಮರಳಿ ಬರುವಾಗ ಅಪಘಾತಗೀಡಾಗಿ ಸಾವನಪ್ಪಿದ ಘಟನೆ ನಡೆದಿದ್ದು, ಎಲ್ಲ ಕಾರ್ಯದಲ್ಲಿ ಮುನ್ಸೂಚನೆಯಲ್ಲಿ ಇರುವವರು ಮಾಧ್ಯಮದ ಸ್ನೇಹಿತರು ಇವರಿಗೆ ಯಾವುದೇ ರೀತಿಯ ಪರಹಾರ, ಜೀವ ರಕ್ಷಣೆ ನೀಡಿರುವದಿಲ್ಲ, ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಮಾಧ್ಯಮದ ಸ್ನೇಹಿತರಿಗೆ ಜೀವವಿಮೆ ಸೌಲಭ್ಯವನ್ನು ಪೂರೈಸಬೇಕು, ಅವರ ಜೀವಕ್ಕೆ ತೊಂದರೆಯಾದರೆ ಆಯಾ ಕುಟುಂಬಗಳ ಜೀವನೋಪಾಯಕ್ಕೆ ಜೀವವಿಮೆಯ ಸೌಲಭ್ಯ ಆಸರೆಯಾಗುತ್ತದೆ, ಬೇರೆ ಬೇರೆ ರಾಜ್ಯದಲ್ಲಿ ಇವರ ಕಾರ್ಯವನ್ನು ಮನವರಿಸಿಕೊಂಡು ಆಯಾ ಸರಕಾರ ಅವರ ಆಸರೆಗೆ ಜಿವವಿಮೆ ನೀಡಿ ಸಹಕಾರಕ್ಕೆ ಮುಂದಾಗಿದ್ದಾರೆ. ಇದರಬಗ್ಗೆ ಆದಷ್ಟು ಮುತವೃರ್ಜಿಸಿ ರಾಜ್ಯ ಸರಕಾರ ಇವರಿಗೆ ಹೆಚ್ಚಿನ ಜಿವವಿಮೆಯನ್ನು ಓದಗಿಸುವಂತೆ ಆಗ್ರಹಿಸಿ ಮಾತನಾಡಿದರು.
ಈ ಸಮಯದಲ್ಲಿ ತಹಶೀಲ್ದಾರ ಎಮ್ ಎಸ್ ಮಳಗಿ ಅವರು ಮನವಿಯನ್ನು ಸ್ವೀಕರಿಸಿದರು. ಮಲ್ಲಿಕ ನಧಾಪ್, ರಾಜು ನಧಾಪ್, ಕಾಶೀಮಸಾಬ ಬಿಳಗಿ, ಲಾಡ್ಲೇಮಶಾಕ ನದಾಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.