ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮೂಸ ಅಲೈಹಿಸಲಾಂ ರವರು ತೂರಿಸೀನಾ ಶಿಖರ ಏರುತ್ತಿರುವಾಗ ಕಾಲಿಗೇನೋ ತೊಡರಿದಂತೆ ಎಡವಿ ಮುಗ್ಗರಿಸಿ ಬೀಳುವಾಗ…
“ಓ ಮೂಸ ಜಾಗೃತೆ ಪಾಲಿಸಿರಿ….ನಿಮಗಾಗಿ ಪ್ರಾರ್ಥನೆ ಮಾಡುವವರನ್ನು ನೀವು ಈಗಾಗಲೇ ಕಳಕೊಂಡಿದ್ದೀರಿ” ಎಂದು ಅಲ್ಲಾಹನು ಎಚ್ಚರಿಸುತ್ತಾನೆ.
ಇದು ಪ್ರವಾದಿ ಮೂಸ ಅಲೈಹಿಸಲಾಮರಿಗೆ ತನ್ನ ತಾಯಿಯ ಅಗಳುವಿಕೆಯ ಬಗೆಗಿನ ಎಚ್ಚರಿಕೆಯಾಗಿತ್ತು. ಅಮ್ಮನ ಕಾಲ ಮುಗಿದರೆ ಅವಳಷ್ಟು ಪ್ರಾರ್ಥಿಸುವವಳು ಯಾರೂ ಇಲ್ಲ ಎಂಬುದರ ಸೂಚನೆಯೂ ಹೌದು.!
ಅಮ್ಮಂದಿರ ಅಗಳುವಿಕೆಯ ಬಳಿಕವಷ್ಟೆ ಅವರಿಗಿರುವ ಬೆಲೆ,ಅವರು ಕೊಟ್ಟ ಪ್ರೀತಿಯ ಬಗ್ಗೆ ತಿಳಿಯಲು ಸಾಧ್ಯ. ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ, ಮಕ್ಕಳ ಏಳಿಗೆಯ ಕನಸು ಕಾಣುತ್ತಿರುತ್ತಾಳೆ, ತಪ್ಪಿದ್ದನ್ನು ತಿದ್ದುವ ಮೊದಲ ಟೀಚರ್ ಆಗಿರುತ್ತಾಳೆ,
ವಿದ್ಯೆ,ಬುದ್ದಿ ಕಳಿಸಿಕೊಟ್ಟು ಭವಿಷ್ಯದ ಯಶಸ್ವಿ ಬದುಕಿಗೆ ಪ್ರೋತ್ಸಾಹ,ಪ್ರೇರಣೆ ಮತ್ತು ಸ್ಪೂರ್ತಿಯ ಚಿಲುಮೆಯಾಗಿರುತ್ತಾಳೆ, ಜನ್ಮ ನೀಡಿ, ತನ್ನ ಎದೆ ಹಾಲು ಕುಡಿಸಿ, ಬೆವರ ಸುರಿಸಿ ಎತ್ತಿ ಹೊತ್ತು,ಬದುಕು ಕಟ್ಟಲು ಸರಿದಾರಿ ತೋರಿಸುತ್ತಾಳೆ. ಲಾಲನೆ,ಪಾಲನೆಯಲ್ಲಿ ಅವಳ ವೈಯಕ್ತಿಕ ಸಮಯವನ್ನು ಮಕ್ಕಳಿಗೆ ನೀಡುತ್ತಾಳೆ. ಅಮ್ಮ ಬದುಕಿನ ಬೆಳಕಾಗಿರುತ್ತಾಳೆ ಅಮ್ಮನ ಕಾಲ ಮುಗಿದರೆ ಎಲ್ಲವೂ ಮುಗಿದಂತೆ. ನಿರೀಕ್ಷೆಯ ಕದ ಮುಚ್ಚಲ್ಪಟ್ಟಂತೆ. ಮಕ್ಕಳು ಏನೇ ಆಗಿರಲಿ,ಹೇಗೇಯೇ ಇರಲಿ ಒಳಿತಿಗಾಗಿ ಪ್ರಾರ್ಥಿಸುತ್ತಾಳೆ,
ಅಮ್ಮನ ಪ್ರಾರ್ಥನೆಗಿಂತ ಮಿಗಿಲಾದ ಅಸ್ತ್ರ ಇನ್ನೊಂದಿಲ್ಲ ಎಂಬುದಕ್ಕೆ ಅಲ್ಲಾಹನು ಪ್ರವಾದಿ ಮೂಸ ಅಲೈಹಿಸಲಾಮರಿಗೆ ಕೊಟ್ಟ ಎಚ್ಚರಿಕೆಯ ಸಂದೇಶ ಅತ್ಯುತ್ತಮ ಉದಾಹರಣೆಯಾಗಿದೆ.
ಭೂಲೋಕದಲ್ಲಿ ಸ್ವರ್ಗ ಇರುವ ಮೂರು ಜಾಗದಲ್ಲಿ ಒಂದಾಗಿದೆ ಅಮ್ಮನ ಪಾದದಡಿ. ಅಮ್ಮನ ಬಗ್ಗೆ ತಿಳಿಯಲು ಇದಕ್ಕಿಂತ ಹೆಚ್ವಿನದ್ದು ಬೇಕಾಗಿಲ್ಲ.
ಅಮ್ಮ ಎಂದರೆ ಪ್ರೀತಿಯ ಪ್ರತೀಕ,ನೋವಿನ ಮೊದಲ ಪದ,ಮಮತೆಯ ಪ್ರತಿರೂಪ…,
-ಇಸ್ಹಾಕ್ ಸಿ.ಐ.ಫಜೀರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.