ಚಿಕ್ಕಬಳ್ಳಾಪುರ (www.vknews.com) : ಕೊರೋನಾ ಎಂಬ ಮಹಾಮಾರಿಯಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೂಡ ಲಾಕ್ಡೌನ್ ಜೊತೆಗೆ ಕೆಲವು ವಾರ್ಡ್ಗಳು ಸೀಲ್ ಡೌನ್ ಕೂಡ ಆಗಿದ್ದು, ಇದರಿಂದ ಜನರು ಪರದಾಡುವಂತಾಗಿದೆ.
ಇದನ್ನು ಮನಗೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್.ಬಿ.ಐ. ಲೈಫ್ ಇನ್ಶುರೆನ್ಸ್ ಕಂಪನಿಯ ವತಿಯಿಂದ ರೂ. 131000/- ಮೌಲ್ಯದ 1000 ಆಹಾರ ಕಿಟ್ ಅನ್ನು ಇಂದು ನಗರಸಭೆ ಕಮೀಷನರ್ ಡಿ. ಲೋಹಿತ್ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಕಮಿಷನರ್ ಡಿ.ಲೋಹಿತ್ ರವರು ಮಾತನಾಡುತ್ತಾ, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮ ಕಂಪನಿಯವರು ಮುಂದೆ ಬಂದು 1000 ಆಹಾರ ಕಿಟ್ ಅನ್ನು ವಿತರಿಸುತ್ತಿರುವುದು ಸಂತಸದ ವಿಚಾರ ಈ ರೀತಿಯ ಅನೇಕ ಸಾಮಾಜಿಕ ಸೇವೆಗಳು ನಿಮ್ಮ ಕಂಪನಿಯವರ ಕಡೆಯಿಂದ ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎ.ಸಿ. ರಘುನಂದನ್, ಎಸ್.ಬಿ.ಐ. ಲೈಫ್ ಇನ್ಶುರೆನ್ಸ್ ಕಂಪನಿಯ ಮ್ಯಾನೇಜರ್ ಬಿ. ವೇಣುಗೋಪಾಲ್, ಕಂಪನಿಯ ಸಿಬ್ಬಂದಿಗಳಾದ ವಿ. ಅರ್ಪಿತ್ ಕುಮಾರ್, ಜಿ.ವಿ. ಶ್ರೀನಿವಾಸ್, ಡೆವಲಪ್ಮೆಂಟ್ ಮ್ಯಾನೇಜರ್ ಗಳಾದ ರವಿ, ಕಿರಣ್ ಕುಮಾರ್, ನಾರಾಯಣ ಸ್ವಾಮಿ, ಆಶೀರ್ವಾದ್, ನರಸಿಂಹ ಮೂರ್ತಿ, ಇನ್ಸೂರೆನ್ಸ್ ಸಲಹೆಗಾರರಾದ ಮುನಿವೀರೇಗೌಡ, ಹರೀಶ್ ಕುಮಾರ್, ಸುಜಿತ್, ಹರೀಶ.ಸಿ., ಸವಿತಾ ಸಮಾಜ ಅಧ್ಯಕ್ಷರು ಚಲಪತಿ ಉಪಸ್ಥಿತರಿದ್ದರು.
ವರದಿ : ವಿ. ಅರ್ಪಿತ್ ಕುಮಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.