(www.vknews.com) : ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಮಂಗಳೂರು ವಿಭಾಗ ,”ಫ್ರೋ.ಕೆ.ಎಸ್.ನಿಸಾರ್ ಅಹಮದ್ ರವರ ಕಾವ್ಯ ಸಂಸ್ಮರಣೆ”ಕಾರ್ಯಕ್ರಮ ದ ಮೂಲಕ ಹಿರಿಯ ಕವಿಗೆ ಗೌರವಪೂರ್ಣ ಭಾವ ಶ್ರದ್ಧಾಂಜಲಿ ಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸವನ್ನು ನೀಡಿದ ಡಾ.ಶೈಲಜಾ ಏತಡ್ಕ ಇವರು,”ಪ್ರೋ.ಕೆ.ಎಸ್.ನಿಸಾರ್ ಅಹಮದ್ ಅವರ ಬರಹ ಮತ್ತು ವ್ಯಕ್ತಿತ್ವಗಳಲ್ಲಿ ಭಾರತದ ಸನಾತನ ಪರಂಪರೆ, ಸಂಸ್ಕೃತಿ, ಕಲಾತ್ಮಕತೆಗಳು ಸಮ್ಮಿಳಿತಗೊಂಡಿವೆ.ಅವರು ವಿಶೇಷವಾಗಿ ನವ್ಯ ಮಾದರಿಯ ಕವನಗಳನ್ನು ರಚಿಸಿದರೂ ಅವರ ಮನಸ್ಸು, ಬುದ್ಧಿ, ಭಾವಗಳು ನವೋದಯದ ಕವಿಗಳ ಉದಾರ ಭಾವ ಹಾಗು ಮುಕ್ತ ಮನಸ್ಸುಳ್ಳದ್ದು..ಅವರ ಕಾವ್ಯ ಹಾಗೂ ಕೃತಿಗಳಲ್ಲಿ ಸನಾತನ ಪರಂಪರೆ, ಸಂಸ್ಕೃತಿ,ಕಾವ್ಯ, ಕಲೆಗಳು ಪ್ರತಿಮೆಗಳಾಗಿ,ರೂಪಕಗಳಾಗಿ,ವಸ್ತುಗಳಾಗಿ ಮರುರೂಪಗೊಂಡಿವೆ.”-ಎಂದು ಅವರ ಬದುಕು, ಬರಹಗಳನ್ನು ಪರಿಚಯಿಸಿದರು.
ಡಾ.ಪ್ರಶಾಂತ್ ನಾಯ್ಕ್, ಪ್ರಾಧ್ಯಾಪಕರು ಮಂಗಳೂರು ವಿಶ್ವವಿದ್ಯಾಲಯ,ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ , ತಮ್ಮ ಹಾಗೂ ಪ್ರೊ.ನಿಸಾರ್ ಅಹಮದ್ ಅವರ ವೃತ್ತಿಯ ಕಾರಣದಿಂದ ಬೆಳೆಯಿಸಿಕೊಂಡು ಬಂದ ಒಡನಾಟದ ಬಾಂಧವ್ಯ ಗಳನ್ನು ಆ ಮೂಲಕ ಅವರ ಅತ್ಯಂತ ಆಪ್ತವಾದ ಮಾನವೀಯ ಕಾಳಜಿಗಳನ್ನು ನೆನಪಿಸಿಕೊಂಡರು. ದೇಶ ವಿದೇಶಗಳಲ್ಲಿ ಪ್ರೋ.ನಿಸಾರ್ ಅಹಮದ್ ಅವರ ಕಾವ್ಯ , ಕೃತಿಗಳು ಅನುವಾದಗಳಾಗಿ ಪರಿಚಿತಗೊಂಡದ್ದಲ್ಲದೆ ವೈಯಕ್ತಿಕವಾಗಿಯೂ ತಮ್ಮ ಆತ್ಮೀಯ ಹೃದಯ ಸ್ಪರ್ಶೀ ಒಡನಾಟಗಳಿಂದ ಎಲ್ಲರಿಗೂ ಅವರು ಬೇಕಾದವರಾಗಿದ್ದರು . ವಿಜ್ಞಾನದ ಪ್ರಾಧ್ಯಾಪಕರಾಗಿ ಮಕ್ಕಳಿಗಾಗಿ”ಮಕ್ಕಳ ವಿಜ್ಞಾನ ಪುಸ್ತಕಗಳನ್ನು ಬರೆದರು.ಅಲ್ಲದೆ ಅಕಾಡೆಮಿಕ್ ವಲಯದಲ್ಲಿ ವಿಜ್ಞಾನದ ಪ್ರಾಧ್ಯಾಪಕರಾಗಿ ಹಲವು ಹಿರಿಯ ಹುದ್ದೆಗಳನ್ನು ಜವಾಬ್ದಾರಿ ಹಾಗೂ ನಿಷ್ಠೆಗಳಿಂದ ನಿರ್ವಹಿಸಿದರು.-, ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೋ.ಮಿತ್ರಪ್ರಭಾ ಹೆಗ್ಡೆ ಯವರು ಮಾತನಾಡಿ,ಅವರ ಕಾವ್ಯ, ಕೃತಿಗಳು ಇಂದಿನ ಕಾಲಕ್ಕೆ ಎಷ್ಟೊಂದು ಪ್ರಸ್ತುತ ಎಂದು ವಿವರಿಸಿದರು.
ಕಾರ್ಯಕ್ರಮವನ್ನು ಶೈಲೇಶ್ ಕುಲಾಲ್, ಸಂಯೋಜಕರು, ಮಂಗಳೂರು ಘಟಕ ಇವರು ಸಂಯೋಜಿಸಿದರು.ಡಾ.ಮಾಧವ . ಪ್ರಾಧ್ಯಾಪಕರು ಇವರು ಧನ್ಯವಾದಗಳನ್ನು ಅರ್ಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.