ನವದೆಹಲಿ(ವಿಶ್ವ ಕನ್ನಡಿಗ ನ್ಯೂಸ್): ಚೀನಾ ಭಾರತದೊಳಗೆ ನುಸುಳಿಯೂ ಇಲ್ಲ,ಭಾರತದ ಗಡಿಯನ್ನು ಆಕ್ರಮಿಸಿಯೂ ಇಲ್ಲ ಎಂದು ಭಾರತದ ಪ್ರಧಾನಿ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ.ಲಡಾಕ್ ನ ಗಡಿಯಲ್ಲಿ ಚೀನಾದ ಸೈನಿಕರಿಂದ ಹತ್ಯೆಗೊಳಗಾದ 20 ಭಾರತೀಯ ಸೈನಿಕರ ಬಲಿದಾನದ ಬಗ್ಗೆ ಸಭೆ ಕರೆದಿದ್ದ ಪ್ರಧಾನಿ ಪ್ರತಿಪಕ್ಷಗಳಿಗೆ ಈ ಸಮಜಾಯಿಷಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಭಾರತೀಯ ಸೈನಿಕರೂ ದಾಳಿಗೆ ಪ್ರತ್ಯುತ್ತರ ನೀಡಿ ತಕ್ಕ ಪಾಠ ಕಳಿಸಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ.ಸೇನೆಗೆ ಈ ಸಂಬಂಧ ಸ್ವಾತಂತ್ರ್ಯ ನೀಡಿದ್ದು, ರಾಜತಾಂತ್ರಿಕ ಮಟ್ಟದಲ್ಲೂ ಎಚ್ಚರಿಕೆ ನೀಡಿದ್ದೇವೆ,ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತಂದರೆ ಯಾವುದೇ ರಾಜಿ ಇಲ್ಲ ಎಂದೂ ಅವರು ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.