(www.vknews.com) : ಪಕ್ಷವೊಂದು ತಮ್ಮ ರಾಜಕೀಯ ಲಾಭದ ಹಿತಾಸಕ್ತಿಯನ್ನು ಮುಂದಿಟ್ಟು ಬಹಳ ಕಾಲದಿಂದ ಡಂಗುರ ಸಾರುತ್ತಲೇ ಬಂದಿದ್ದ ಗೋಹತ್ಯೆ ನಿಷೇಧ ಎಂಬ ಅಸ್ತ್ರಕ್ಕೆ ಕೊನೆಗೂ ವಿಧಾನ ಸಭೆ ಯಲ್ಲಿ ಅಂಗೀಕಾರ ನೀಡಲಾಗಿದೆ. ಆದರೆ ಇಲ್ಲಿ ಯಾವ ಕಾರಣಕ್ಕಾಗಿ ಇದನ್ನು ಜಾರಿಗೊಳಿಸಲಾಗುತ್ತದೆ ಎಂಬುದು ಜನರಿಗೆ ಅರ್ಥ ಆಗ್ತಾ ಇಲ್ಲ.
ಗೋವಧೆಯು ಹಿಂದುಗಳ ಭಾವನೆಗೆ ದಕ್ಕೆ ತರುವುದರಿಂದ ಈ ಕಾನೂನನ್ನು ತರಲಾಗಿದೆ ಎಂದು ನಂಬಲು ಸಾದ್ಯವಿಲ್ಲ. ಕಾರಣ ಹದಿಮೂರು ವರ್ಷದ ನಂತರ ಗೋವನ್ನು ಹತ್ಯೆ ಮಾಡವುದಕ್ಕೆ ಈಗ ಪಾಸು ಮಾಡಿದ ಕಾನೂನು ಮಾನ್ಯತೆ ನೀಡುತ್ತಿದೆ. ಹಾಗಾದರೆ ಹದಿಮೂರು ವರ್ಷದ ಬಳಿಕ ಗೋವಿನೊಂದಿಗಿನ ಪೂಜ್ಯ ಭಾವನೆ ಇಲ್ಲದಾಗುತ್ತಾ?ನಿಜವಾಗಿಯೂ ಆ ಮುದಿ ಟೈಮಲ್ಲಿ ಅದಕ್ಕೆ ಆರೈಕೆ ಇನ್ನಷ್ಟು ಸಿಗಬೇಕಾಗಿದೆಯಲ್ಲವೇ?
ಇನ್ನು ಮಾನವೀಯ ನೆಲೆಯಲ್ಲಿ ಪ್ರಾಣಿ ಹತ್ಯೆಯನ್ನು ತಡೆಯುವುದಕ್ಕಾಗಿ ಇದನ್ನು ಜಾರಿ ಮಾಡುವುದಾದರೆ ಇಲ್ಲಿ ಕುರಿ ,ಮೇಕೆ,ಕೋಳಿ, ಮೊದಲಾದ ಪ್ರಾಣಿಗಳು ಯಾವ ತಪ್ಪು ಮಾಡಿದೆ ಎಂದು ಕೇಳಲೇ ಬೇಕಾಗುತ್ತದೆ.
ಇನ್ನು ಗೊಬ್ಬರದ ಕಾರಣಕ್ಕಾಗಿ ಎನ್ನುವುದಾದರೆ ಆಡಿನ ಗೊಬ್ಬರಕ್ಕೆ ಬಹಳ ಬೇಡಿಕೆ ಇದೆ. ಹಾಲಿನ ಉದ್ದೇಶಕ್ಕಾದರೆ ಎತ್ತು ,ಹೋರಿ ಹಾಲು ಕೊಡುತ್ತಾ ಎಂದು ಕೇಳ ಬೇಕಾಗುತ್ತದೆ. ಒಟ್ಟಾರೆ ಜನ ಸಾಮಾನ್ಯರು ಗೊಂದಲ್ಲಿದ್ದಾರೆ. ಅದೇನೇ ಇರಲಿ ,ಈಗ ರಾಜ್ಯದಲ್ಲಿ ಕೋಮು ದ್ವೇಷಕ್ಕಾಗಿ ಬಳಕೆಯಾಗುತ್ತಿದ್ದ ಈ ಗೋವು ರಾಜಕೀಯಕ್ಕೆ ಇತೀ ಶ್ರೀ ಹಾಡಿದ್ದಕ್ಕೆ ಯಡ್ಡಿ ಸರಕಾರವನ್ನು ಅಭಿನಂದಿಸಲೇ ಬೇಕಾಗಿದೆ.
ಇನ್ನು ಮುಂದೆ ಅಕ್ರಮ ಗೋ ಸಾಗಾಟವನ್ನು ಫಲಪ್ರದವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಗೋವಧೆ ಕೇಂದ್ರಕ್ಕೆ ಸರಕಾರ ಅನುಮತಿ ನೀಡ ಬೇಕು. ರೈತರ ಹಿತದೃಷ್ಟಿಯಲ್ಲಿ ಇದು ಬಹಳ ಅಗತ್ಯ .
ಹದಿಮೂರು ವರ್ಷ ಕಳೆದ ಗೋವುಗಳನ್ನು ಮಾಂಸಕ್ಕಾಗಿ ಮಾರುವ ಹಕ್ಕು ಈಗ ತರಲಾದ ಕಾನೂನಿನ ಪ್ರಕಾರ ರೈತರಿಗಿದೆ. ಅವುಗಳನ್ನು ವಿಲೇವಾರಿ ಮಾಡಲು ಗ್ರಾಮಕ್ಕೊಂದು ಪಶು ವೈದ್ಯ ಮತ್ತು ಕಸಾಯಿಖಾನೆ ಸ್ಥಾಪಿಸಿದರೆ ಎಲ್ಲಾ ಗೊಂದಲವೂ ಮುಕ್ತಾಯವಾಗಿ ನಾಡಿನಲ್ಲಿ ಶಾಂತಿ ಉಂಟಾಗುತ್ತೆ.
ಅದೇ ವೇಳೆ ಬೀಫ್ ಪ್ರಿಯರು ಸದ್ಯ ಹದಿಮೂರು ವರ್ಷ ಪ್ರಾಯದ ಗೋವು ಇರುವ ರೈತರ ಪರವಾಗಿ ಅದನ್ನು ವಿಲೇವಾರಿ ಮಾಡಲು ಸಹಕರಿಸ ಬೇಕು. ಇನ್ನು ಹದಿಮೂರು ವರ್ಷದ ಗೋವುಗಳು ಇಲ್ಲದಿದ್ದರೆ ಈಗ ಇರುವ ಗೋವುಗಳಿಗೆ ಹದಿಮೂರು ಆಗುವ ತನಕ ಭೀಪ್ ಸೇವಿಸದೇ ಕೋಳಿ ,ಆಡು ಮಾಂಸ ಸೇವಿಸಿ ಸಹಕಾರ ನೀಡ ಬೇಕು.
ಅದೇ ವೇಳೆ ತರಾತುರಿಯಲ್ಲಿ ಗೋಹತ್ಯಾ ನಿಷೇಧದ ಕಾನೂನು ತಂದ ಸರಕಾರದೊಂದಿಗೆ ನಾಡಿನ ಜನತೆ ಇನ್ನೊಂದು ಕಾನೂನನ್ನು ತರಬೇಕೆಂದು ಆಗ್ರಹಿಸುತ್ತಿದ್ದಾರೆ. ಹೌದು..ಅದೆಷ್ಟೋ ಕೊಲೆ, ಕುಟುಂಬಕಲಹ , ಅನಾರೋಗ್ಯಕ್ಕೆ ಕಾರಣವಾಗುತ್ತಿರುವ , ಅದೆಷ್ಟೋ ಮಹಿಳೆಯರ ಕಣ್ಣೀರ ಹೊಳೆಯನ್ನೇ ಹರಿಸುತ್ತಿರುವ ಎಲ್ಲಾ ರೀತಿಯ ಲಹರಿ ಪದಾರ್ಥಗಳನ್ನು ಮತ್ತು ಶರಾಬು,ಮದ್ಯವನ್ನು ಮಾರುವುದು ಮತ್ತು ಸೇವಿಸುವುದನ್ನು ನಿಷೇಧಿಸಿದರೆ ಅದಕ್ಕೆ ನಾಡಿನ ಜನತೆ ಅಬಾರಿಯಾಗಿರುತ್ತಾರೆ.
ನಿಮ್ಮ ತಾಕತ್ತನ್ನು ತೋರಿಸ ಬೇಕಾಗಿರುವುದು ಇವುಗಳನ್ನು ನಿಷೇಧಿಸುವ ಮೂಲಕ .ಏನಂತೀರಿ?
– ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.