ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್): ಕರ್ನಾಟಕ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ 2021-22ನೇ ಸಾಲಿನ ರಾಜ್ಯ ಸಮಿತಿಯ ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಶಿವಮೊಗ್ಗದ ಸಾಗರದಲ್ಲಿ ಜ.31ರಂದು ನಡೆಯಿತು. ನೂತನ ರಾಜ್ಯ ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಅದಿ, ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿಯಾಗಿ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಆಯ್ಕೆಗೊಂಡರು.
ಕಾರ್ಯದರ್ಶಿಗಳಾಗಿ ಮುಸ್ತಫಾ ನಈಮಿ ಹಾವೇರಿ, ನೌಫಲ್ ಸಖಾಫಿ ಕಳಸ, ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು, ನವಾಝ್ ಭಟ್ಕಳ, ಶರೀಫ್ ಕೊಡಗು, NC ರಹೀಂ ಉಡುಪಿ, ಹಕೀಂ ಬೆಂಗಳೂರು, ಮುಬಶ್ಶಿರ್ ಅಹ್ಸನಿ ಕೊಡಗು, ವಾಜಿದ್ ಹಾಸನ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ಸಯ್ಯಿದ್ ಅಲವೀ ತಂಙಳ್ ಕರ್ಕಿ, ಅಝೀಝ್ ಸಖಾಫಿ ಕೊಡಗು, ಶಾಫಿ ಸಅದಿ ಬೆಂಗಳೂರು, ರವೂಫ್ ಖಾನ್ ಉಡುಪಿ, ಮುನೀರ್ ಸಖಾಫಿ ಉಳ್ಳಾಲ (ದ.ಕ ವೆಸ್ಟ್), ಆರಿಫ್ ಸಅದಿ ಉತ್ತರ ಕನ್ನಡ, ಖಾದರ್ ಪಾಶಾ ದಾವಣಗೆರೆ, ಮುಹಮ್ಮದ ಅಲಿ (ದ.ಕ ಈಸ್ಟ್), ಯಾಸೀನ್ ಸಖಾಫಿ ಹಾವೇರಿ, ಸಲೀಂ ಕೊಪ್ಪಳ, ಜುನೈದ್ ಸಖಾಫಿ ಚಿತ್ರದುರ್ಗ, ಮನ್ಸೂರ್ ಉಡುಪಿ, ಸುಹೈಲ್ ತುಮಕೂರು, ಶರೀಫ್ ಬೆರ್ಕಳ (ದ.ಕ ಈಸ್ಟ್), ಶರೀಫ್ ಮಿಸ್ಬಾಹಿ ಹಾಸನ, ಸಯ್ಯಿದ್ ಖಾಲಿದ್ ಶಿವಮೊಗ್ಗ, ನೂರುದ್ದೀನ್ ಮುಜೀಬಿ ಬಳ್ಳಾರಿ ಆಯ್ಕೆಗೊಂಡಿದ್ದಾರೆ. ಸಭೆಯಲ್ಲಿ ಎಸ್ಸೆಸ್ಸೆಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಫಾರೂಕ್ ನಹೀಮಿ ಕೊಲ್ಲಂ, ನಾಯಕರಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಜೆ.ಎಂ ಕಾಮಿಲ್ ಸಖಾಫಿ, ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಸಹಿತ ಹಲವು ನಾಯಕರು, ಜಿಲ್ಲಾವಾರು ಪದಾಧಿಕಾರಿಗಳು ಭಾಗವಹಿಸಿದ್ದರು.
ನೂತನ ರಾಜ್ಯಾಧ್ಯಕ್ಷರ ಪರಿಚಯ: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ನಿವಾಸಿ ಮರ್ಹೂಂ ಹಸೈನಾರ್ ರವರ ಪುತ್ರರಾಗಿರುವ ಅಬ್ದುಲ್ ಲತೀಫ್ ಸಅದಿ 2011ರಲ್ಲಿ ಸಅದಿ ಬಿರುದು ಪಡೆದಿರುತ್ತಾರೆ. 2010 ರವರೆಗೆ ಬೆಳ್ತಂಗಡಿಯಲ್ಲಿ ಸಂಘಟನಾ ರಂಗದಲ್ಲಿ ತೊಡಗಿಸಿಕೊಂಡು, 2011ರಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸಂಘಟನಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಎರಡು ಬಾರಿ ಹೊಸನಗರ ಡಿವಿಷನ್ ಅಧ್ಯಕ್ಷರಾಗಿ, 2015-16ರಲ್ಲಿ ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಶಿವಮೊಗ್ಗದಲ್ಲಿರುವ ಮರ್ಕಝ್ ಸಆದಃ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.