ದಮ್ಮಾಮ್ (ವಿಶ್ವಕನ್ನಡಿಗ ನ್ಯೂಸ್): ಇತ್ತೀಚೆಗೆ ನಿಧನರಾದ ಇಂಡಿಯಾ ಫ್ರೆಟರ್ನಿಟಿ ಫೋರಂನ ನಾಯಕ ಮುಹಮ್ಮದ್ ಅಬ್ದುಲ್ ವಾಹಿದ್ ರಿಗೆ ಸಂತಾಪ ಸೂಚನೆಯ ಭಾಗವಾಗಿ ಸಂಘಟನೆಯ ವತಿಯಿಂದ ಇತ್ತೀಚೆಗೆ ಆನ್ ಲೈನ್ ಸಭೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು ವಾಹಿದ್ ಜೀವನದಲ್ಲಿ ಪಾಲಿಸುತ್ತಿದ್ದ ಮೌಲ್ಯಾದರ್ಶಗಳನ್ನು ಕೊಂಡಾಡಿದರು. ಐ.ಎಫ್.ಎಫ್, ದಮ್ಮಾಮ್ ಪ್ರಾಂತ್ಯ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಸಲಾಂ ಮಾಸ್ಟರ್ ಅಬ್ದುಲ್ ವಾಹಿದ್ ಸಾಮಾಜಿಕ ಬದುಕನ್ನು ಪರಿಚಯಿಸಿದರು. ಅಲ್ಲಾಹನು ವಾಹಿದ್ ರಿಗೆ ಎಲಾ ಸೌಲಭ್ಯಗಳನ್ನು ನೀಡಿದ್ದನು. ತನ್ನನ್ನು ಪ್ರೀತಿಸುವ ಕುಟುಂಬ, ಕೈತುಂಬ ಸಂಬಳವಿರುವ ಉದ್ಯೋಗ ಎಲ್ಲವೂ ಅವರ ಬಳಿ ಇತ್ತು. ತನ್ನ ಕುಟುಂಬ ಮತ್ತು ಉದ್ಯೋಗವನ್ನು ಮುನ್ನಡೆಸುತ್ತಾ ನೆಮ್ಮದಿಯ ಜೀವನವನ್ನು ಮುಂದುವರಿಸುವುದು ಸಾಧ್ಯವಾಗಿತ್ತಾದರೂ ಆವರು ತನ್ನನ್ನು ಅಲ್ಲಿಗೇ ಸೀಮಿತ ಗೊಳಿಸಲಿಲ್ಲ. ಇಂಡಿಯಾ ಫ್ರೆಟರ್ನಿಟಿ ಫಾರಂನಲ್ಲಿ ಸಕ್ರಿಯರಾಗಿದ್ದ ಅವರು ಸಂಕಷ್ಟದಲ್ಲಿದ್ದ ಅನಿವಾಸಿಗಳನ್ನು ನೆರವಾಗುತ್ತಿದ್ದರು. ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರಿಗೆ ಮಾತ್ರವಲ್ಲದೆ ತಾಯ್ನಾಡಿನಲ್ಲೂ ಬಡಬಗ್ಗರಿಗೆ ಸಹಾಯ ಹಸ್ತ ಚಾಚುತ್ತಿದ್ದರು. ಭಾರತದ ಬಿಹಾರ, ಪಶ್ಚಿಮ ಬಂಗಾಳ ಮತ್ತು ತೆಲಂಗಾಣಗಳ ದೂರದ ಗ್ರಾಮಗಳಲ್ಲಿ ನಡೆಯುವ ಅಭಿವೃದ್ಧಿ ಕೆಲಸಗಳಲ್ಲಿ ಅವರು ನೇರವಾಗಿ ತೊಡಗಿಕೊಳ್ಳುತ್ತಿದ್ದರು. ಹಣಕಾಸಿನ ಸಹಾಯ ನೀಡುವುದೇ ಅಲ್ಲದೆ ರಜಾ ಅವಧಿಯಲ್ಲಿ ಈ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸುತ್ತಿದ್ದರು.
ಸೌದಿ ಅರೇಬಿಯಾದಲ್ಲಿ ಅವರು ನಿರಂತರವಾಗಿ ಅನಿವಾಸಿ ಭಾರತಿಯರಿಗಾಗಿ ಸಾಮಾಜಿಕ ಚಟುವಟಿಕೆಗಗಳು ಮತ್ತು ಮಾನವೀಯ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ರಿಯಾದ್ ನಲ್ಲಿರುವ ಭಾರತಿಯ ರಾಯಭಾರಿ ಕಛೇರಿಯ ಸಂಯೋಜನೆಯೊಂದಿಗೆ ಅನಿವಾಸಿ ಭಾರತೀಯ ಕಾರ್ಮಿಕರಿಗೆ ನೆರವಾಗುತ್ತಿದ್ದರು. ಸೌದಿ ಅರೇಬಿಯಾದ ಪೂರ್ವ ಪ್ರಾಂತ್ಯದಲ್ಲಿ ವಿಶೇಷವಾಗಿ ಹೈದರಬಾದ್ ಸಮುದಾಯದ ಮಧ್ಯೆ ಅವರು ತಮ್ಮ ಸಾಮಾಜಿಕ ಚಟುಅವಟಿಕೆಗಳಿ ಗಾಗಿ ಹೆಸರು ವಾಸಿಯಾಗಿದ್ದರು. ಯುವ ಉದ್ದ್ಯಮಿಯಾಗಿ ಅವರು 1991ರಲ್ಲಿ ಹೈದರಾಬಾದ್ ನಲ್ಲಿ ಮಾವ್ಸ್ ಇನ್ ಫಾರ್ಮೇಶನ್ ಟೆಕ್ ಕಂಪೆನಿ ಯನ್ನು ಸ್ಥಾಪಿಸಿದ್ದರು ಮತ್ತು 1994ರ ತನಕ ಅದರ ವ್ಯವಸ್ಥಾಪನಾ ಪಾಲುದಾರನಾಗಿದ್ದರು.
ಸೌದೀಕರಣದ ಸಂದರ್ಭದಲ್ಲಿ ಭಾರತೀಯ ಅನಿವಾಸಿ ಸಮುದಾ ಯ ತೀವ್ರ ಸಂಕಷ್ಟದಲ್ಲಿದ್ದಾಗ ಅವರ ಸಂಕಷ್ಟಗಳನ್ನು ಪರಿಹರಿಸುವುದಕ್ಕಾಗಿ ಅವರು ಮಾಡಿದ ಪ್ರಯತ್ನಗಳು ವ್ಯಾಪಕ ಶ್ಲಾಘನೆಗೆ ಕಾರಣವಾಗಿತ್ತು. ಇಂಡಿಯಾ ಫ್ರೆಟರ್ನಿಟಿ ಫೋರಂ ಪರವಾಗಿ ಅವರು ಹಲವು ಕಾರ್ಮಿಕ ಶಿಬಿರಗಳಲ್ಲಿ ಆರೋಗ್ಯ, ಸುರಕ್ಷತೆ ಮತ್ತು ವೈದ್ಯಕೀಯ ವಿಷಯಗಳಿಗೆ ಸಂಬಂಧಿಸಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇಂಡಿಯಾ ಫ್ರೆಟರ್ನಿಟಿ ಫೋರಂ ಮಾತ್ರವಲ್ಲದೆ ಹೈದರಾಬಾದ್ ಅಸೋಸಿಯೇಶನ್, ಇಂಡಿಯಾ ಫೋರಂ ನಂತಹ ಇತರ ಸಂಘಟನೆಗಳಲ್ಲೂ ಕ್ರಿಯಾಶೀಲರಾಗಿದ್ದು ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಒದಗಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥೆ ಗೊಳಿಸುವುದು, ರಾಯಭಾರಿ ಸಂಬಂದಿ ಕೆಲಸಗಳಿಗೆ ಸ್ವಯಂಸೇವಕರನ್ನು ಸಿದ್ಧಗೊಳಿಸುವುದು ಕುಟುಂಬ ಸಮ್ಮಿಲನ ಕಾರ್ಯಕ್ರಮಗಳನ್ನು ವ್ಯವಸ್ಥೆಪಡಿಸುವುದು ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಹಲವು ಸಂದರ್ಭದಲ್ಲಿ ದೂರದ ಮಕ್ಕಾಗೆ ಹೋಗಿ ಭಾರತದಿಂದ ಬರುವ ಹಜ್ಜಾಜ್ ಗಳ ಸೇವೆಯಲ್ಲಿ ತೊಡಗಿಕೊಂಡಿದ್ದರು.ವಿವಿಧ ಕ್ಷೇತ್ರದಲ್ಲಿ ಅವರು ತೊಡಗಿಸಿಕೊಂಡಿದ್ದ ಕುರಿತ ಕಿರುಚಿತ್ರವನ್ನೂ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
51ರ ಹರೆಯದ ವಾಹಿದ್ ಸೌದಿ ಅರೇಬಿಯಾದ ಅಲ್ ಖೋಬರ್ ನಲ್ಲಿ ಕುಟುಂಬದೊಂದಿಗೆ ನೆಲೆಸುತ್ತಿದ್ದರು. ತವರಿನಿಂದ ಸೌದಿ ಅರೇಬಿಯಾಗೆ ಹೊರಟಿದ್ದ ತನ್ನ ಪುತ್ರನನ್ನು ದುಬೈಯಲ್ಲಿ 15 ದಿನಗಳ ತಂಗುವ ವೇಳೆ ಅಲ್ಲಿ ಜೊತೆಯಾಗುವುದಕ್ಕಾಗಿ ವಾಹಿದ್ ಕುಟುಂಬ ಸಮೇತರಾಗಿ ಅಲ್ಲಿಗೆ ತೆರಳಿ ದ್ದರು. ದುರದೃಷ್ಟವಶಾತ್ ಅಲ್ಲಿ ಕೋವಿಡ್ 19 ಗೆ ತುತ್ತಾದ ಅವರು ಅಲ್ಪ ಕಾಲದ ಅಸೌಖ್ಯದ ಬಳಿಕ ನಿಧನರಾಗಿದ್ದರು. ಹದಿನೇಳು ವರ್ಷಗಳ ಕಾಲ ಪ್ರತಿಷ್ಠಿತ ಸೌದಿ ಅರಾಮ್ಕೊ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅವರು ಪ್ರಸುತ ಅದಾ ಕಂಪೆನಿ (ಸೌದಿ ಸರಕಾರದ ಸ್ವತಂತ್ರ ಅಂಗ)ಯಲ್ಲಿ ಉದ್ಯೋಗದಲ್ಲಿದ್ದರು.
ವಾಹಿದ್ ಪತ್ನಿ, ಇಬ್ಬರು ಪುತ್ರರು ಮತ್ತು ಇಬ್ಬರು ಪುತಿಯರನ್ನು ಅಗಲಿದ್ದಾರೆ.ಕಾರ್ಯಕ್ರಮದಲ್ಲಿ ಅರಾಮ್ಕೊ ಮತ್ತು ರಿಯಾದ್ ನ ಅದಾ ಕಂಪನಿ ಪ್ರತಿನಿಧಿಗಳು, ರಾಯಭಾರಿ ಕಚೇರಿ ಸ್ವಯಂ ಸೇವಕ ಅಬ್ರಹಾಂ ವಲಿಯಾಕಲಾ, ಅಲಿಕುಟ್ಟಿ ಒಲವತ್ತೂರು, ಐ ಎಸ್. ಎಫ್ ನಾಯಕ ಅಶ್ರಫ್ ಮೊರಾಯೂರ್, ಮನ್ಸೂರ್ ಷಾ, ಮುಹಮ್ಮದ್ ಬೇಗ್ ಮತ್ತು ಐ.ಎಫ್.ಎಫ್ ನ ಮೂಸಕುಟ್ಟಿ ಪಾಲ್ಗೊಂಡಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.