ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಕರಾವಳಿ ಕರ್ನಾಟಕದ ಮತ್ತು ಗಡಿನಾಡ ಕನ್ನಡಿಗರ ಹಿರಿಯ ಸಾಹಿತಿ, ಬ್ಯಾರಿ ಸಂಶೋಧಕ, ಪತ್ರಕರ್ತ, ನಿವೃತ್ತ ಉಪನ್ಯಾಸಕ ಪ್ರೊ. ಬಿ.ಎಂ. ಇಚ್ಲಂಗೋಡು ರವರ ನಿಧನಕ್ಕೆ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಸಂತಾಪ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಬ್ಯಾರಿ ಭಾಷೆ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ನಡೆಸಿ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಭಾಜನರಾಗಿ, ಸಮಾಜದಲ್ಲಿ ಅನನ್ಯ ಸ್ಥಾನ ಗಳಿಸಿದ್ದ, ಹಿರಿಯ ಸಾಹಿತಿ, ಸಂಶೋಧಕ ಪ್ರೊ. ಶ್ರೀಯುತ, ಬಿ.ಎಂ.ಇಚ್ಲಂಗೋಡು ರವರುಅನೇಕ ಯುವ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ್ದರು.
ಅವರು ಗ್ರಾಹಕರಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಕಾನೂನು ಹೋರಾಟ ಮಾಡಿ ಗಮನ ಸೆಳೆದಿದ್ದರು. ಅಲ್ಲದೆ ಜನಸಾಮಾನ್ಯರಿಗೆ ಕಾನೂನು ನೆರವು ನೀಡುತ್ತಿದ್ದರು. ಇಳಿವಯಸ್ಸಿನಲ್ಲೂ ಸಾಹಿತ್ಯ, ಅಧ್ಯಯನದಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದರು. ಮತ್ತು ಮೀಡಿಯಾ ಟೈಮ್ಸ್ ಗ್ರಾಹಕ ಮಾಧ್ಯಮ ವಾರಪತ್ರಿಕೆಯ ಸಂಪಾದಕ, ಸಮನ್ವಯ ಗ್ರಾಹಕ ಮಾಸಿಕದ ಸಂಪಾದಕ, ತವನಿಧಿ ಮಾಸಿಕದ ಸಂಪಾದಕ ಹೀಗೆ ವಿವಿಧ ನಿಯತಕಾಲಿಕಗಳ ಸಂಪಾದಕರಾಗಿ ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿ ಜನಸಮೂಹದಲ್ಲಿ ತನ್ನದೇ ಆದ ಛಾಪನ್ನು ಹೊಂದಿದ್ದರಲ್ಲದೆ, ಮೂಡುಬಿದರೆ ವಿಜಯನಗರ ವೆಲ್ಫೇರ್ ಅಸೋಸಿಯೇಶನ್ನ ಸ್ಥಾಪನೆ, ಮೂಡುಬಿದಿರೆ ಸರ್ವಿಸ್ ಸೆಂಟರ್ ಆರಂಭ, ಮೂಡುಬಿದಿರೆ ನಾಗರಿಕ ಸಮನ್ವಯ ಸಮಿತಿ ರಚನೆ, ಮಂಗಳೂರು ಗ್ರಾಹಕ ಜಾಗೃತಿ ವೇದಿಕೆಯ ಅಧ್ಯಕ್ಷ/ಸಂಚಾಲಕ, ದ.ಕ.ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಸ್ಥಾಪಕ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಗ್ರಾಹಕ ರಕ್ಷಣಾ ಪರಿಷತ್ನ ಸದಸ್ಯ, ದ.ಕ.ಜಿಲ್ಲಾ ಗ್ರಾಹಕ ರಕ್ಷಣಾ ಪರಿಷತ್ನ ಸದಸ್ಯ, ದ.ಕ.ಜಿಲ್ಲಾ ಗ್ರಾಹಕ ವೇದಿಕೆಯ ಲೋಕ ಅದಾಲತ್ನ ಸಂಧಾನಕಾರ, ದ.ಕ.ಸಿಟಿಜನ್ಸ್ ಕೋ ಆರ್ಡಿನೇಶನ್ ಕೌನ್ಸಿಲ್ ಮೂಡುಬಿದಿರೆ ಸಂಚಾಲಕ, ಹೀಗೆ ಹಲವು ಸಮಾಜಕ್ಕಾಗಿ ತನ್ನನ್ನು ತೊಡಗಿಸಿಕೊಂಡಿದ್ದ ಅವರು ಯಾವುದೇ ಪ್ರಚಾರಪ್ರಿಯತೆಯಿಲ್ಲದೆ, ಜನಸೇವೆಗಾಗಿ ತಾನೇ ಸಮಾಜ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ಪೋಷಿಸಿಕೊಂಡು ಜವಾಬ್ದಾರಿಯುತ ಸ್ಥಾನಗಳನ್ನೂ ನಿರ್ವಹಿಸಿಕೊಂಡು ಬಂದ ಒಬ್ಬ ಮೌನ ಸಾಧಕನಾಗಿದ್ದರು ಅವರ ಮರಣವು ಸಮಾಜಕ್ಕೆ ತುಂಬಲಾರದ ನಷ್ಟ ವಾಗಿದೆಯೆಂದು ತಮ್ಮ ಪಕ್ಷದ ಸಂತಾಪ ಸಂದೇಶದ ಪತ್ರಿಕಾ ಪ್ರಕಟಣೆಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಮಾಧ್ಯಮ ವಕ್ತಾರ ಅಬ್ದುಲ್ ಖಾದರ್ ಕುಕ್ಕಾಜೆ ತಿಳಿಸಿದರು ಅಲ್ಲದೆ ಮೃತರ ಆತ್ಮಕ್ಕೆ ಚಿರಶಾಂತಿ ಹಾಗೂ ಅವರ ಕುಟುಂಬದವರಿಗೆ ಸಹನೆಗಾಗಿ ಸೃಷ್ಟಿಕರ್ತನಲ್ಲಿ ಕೋರಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.