(www.vknews.com) : ಕೊರೋನ ಕೋವಿಡ್-19 ವೈರಸ್ ಲೊಕ್ ಡೌನ್’ನಿಂದಾಗಿ ಸಾಮಾನ್ಯ ಕುಟುಂಬದ ಜನಜೀವನ ಕಷ್ಟಕರವಾಗುತ್ತಿರುವ ಈ ಸಮಯದಲ್ಲಿ ಅವರಿಗೆ ಆಶಾಕಿರಣವಾಗಿ ಮೂಡಿಬರುತ್ತಿದ್ದಾರೆ ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮತಿ ಎಸ್. ಹೆಗ್ಡೆ.
ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಶ್ರೀಮತಿಯವರು, ಲಯನ್ಸ್ ಕ್ಲಬ್ ಹಾಗೂ ಇನ್ನಿತರ ಹಲವು ಸಂಸ್ಥೆಗಳ ಅಧ್ಯಕ್ಷೆಯಾಗಿ ಮತ್ತು ಸದಸ್ಯೆಯಾಗಿ ಕಾರ್ಯನೀರ್ವಹಿಸಿ ಅನುಭವವಿದ್ದು, ಈಗ ಈ ಲೊಕ್’ಡೌನ್ ಸಂಧರ್ಭದಲ್ಲಿ ಜನರ ಕಷ್ಟ-ಸುಖವನ್ನರಿತು, ಅವರ ಸಮಸ್ಯೆಗಳಿಗೆ ಮರಗುತ್ತಾ, ಅವರಿಗೆ ತನ್ನ ಶಕ್ತಿ-ಸಾಮರ್ಥ್ಯಗನುಗುಣವಾಗಿ ಅವರ ಅಗತ್ಯಕ್ಕೆ ಬೇಕಿರುವ ಆಹಾರದ ಕಿಟ್ಟನ್ನು ಒದಗಿಸುತ್ತಾ, ಅವರಿಗೆ ಸಾಂತ್ವನ ಹೇಳುವ ಕೆಲಸದಲ್ಲಿ ಸದಾ ಕಾಲ ನಿರತರಾಗಿದ್ದಾರೆ. ಹಾಗೂ ಜನರ ಸೇವೆಗೆ ತನ್ನನ್ನು ಮುಡಿಪಾಗಿಟ್ಟುಕೊಂಡಿದ್ದಾರೆ.
ಸದಾ ಕಾಲ ಜನರ ಸೇವೆಗೆ ಲಭ್ಯವಿರುವ ಸುಮತಿ ಹೆಗ್ಡೆಯವರು, ದಿನನಿತ್ಯ ದುಡಿಯುವ, ಕಾರ್ಮಿಕ ವರ್ಗದ ಹಾಗೂ ಮಧ್ಯಮ ವರ್ಗದ ನೂರಾರು ಜನರನ್ನು ಭೇಟಿಯಾಗಿ ಅವರ ಕಷ್ಟ-ಸುಖವನ್ನು ಆಳಿಸಿ, ಅವರಿಗೆ ಸಹಾಯವನ್ನು ಯಾವುದೇ ಪ್ರಚಾರದ ಅಬ್ಬರವಿಲ್ಲದೆ ಈ ಮಾತೃಹೃದಯಿ ಮಾಡುತ್ತಿರುವ ಸುದ್ಧಿಗಳು ಸಹಾಯ ಪಡೆದವರ ಮೂಲಕ ಈಗ ಪ್ರಚಾರ ಪಡೆಯುತ್ತಿದೆ.
ಜನಸಾಮಾನ್ಯರ ನೋವನ್ನು ಅರಿತವರಂತೆ ಶ್ರೀಮತಿ ಸುಮತಿ ಎಸ್. ಹೆಗ್ಡೆಯವರು ಪೆಟ್ರೋಲ್-ಡಿಸೇಲ್ ಬೆಲೆಯೇರಿಕೆ, ಗ್ಯಾಸ್ ಬೆಲೆಯೇರಿಕೆ, ಕರೆಂಟ್ ಬಿಲ್ ಏರಿಕೆ ಹಾಗೂ ವ್ಯಾಕ್ಸಿನ್ ಕೊರತೆ ವಿರುದ್ದ ನಿರಂತರವಾಗಿ ಧ್ವನಿ ಎತ್ತುತ್ತಾ ಜನರ ನಾಡಿಮಿಡಿತವಾಗುತ್ತಿದ್ದಾರೆ.
ಜನಸೇವೆಗೆ ಸದಾ ಕಾಲ ಮಿಡಿಯುವ, ಲಭ್ಯವಿರುವ ಸುಮತಿ ಹೆಗ್ಡೆಯಂತಹ ನಾಯಕಿಯರು ಶಾಸಕರಾಗಿ ಆಯ್ಕೆಯಾದಲ್ಲಿ ಆ ಕ್ಷೇತ್ರದ ಜನತೆ ನಿಜಕ್ಕೂ ಅದೃಷ್ಟವಂತರಾಗಿರಬೇಕು.
– ಆರ್.ಹೆಚ್.ಕೆ
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.