ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) :- ಮನುಷ್ಯನಿಗೆ ಭಗವಂತ ಎಲ್ಲವನ್ನು ಕೊಟ್ಟಿರುವುದಿಲ್ಲ , ಕೊಟ್ಟಿರುವುದರಲ್ಲಿ ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಾವು ಮಾಡುವ ಪುಣ್ಯದ ಕೆಲಸ. ಅದು ಕೊನೆಯವರೆಗೂ ಶಾಶ್ವತವಾಗಿ ಉಳಿಯುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.
ತಾಲೂಕಿನ ವಕ್ಕಲೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆರೋಗ್ಯ ಸಿಬ್ಬಂದಿಗೆ ಹಾಗೂ ಆಶಾ ಕಾರ್ಯಕರ್ತರಿಗೆ ಜಾತ್ಯಾತೀತ ಜನತಾದಳ ತಾಲೂಕು ಘಟಕದಿಂದ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು ಜೆಡಿಎಸ್ ಪಕ್ಷದಿಂದ ಯಾವುದೇ ಪ್ರಚಾರಕ್ಕೆ ಅಥವಾ ದೂರ ಆಲೋಚನೆ ಇಟ್ಟುಕೊಂಡು ಇಲ್ಲಿಗೆ ಬಂದಿಲ್ಲ ಕೊರೊನಾ ಹೋಗಲಾಡಿಸಲು ಹಗಲಿರುಳು ಶ್ರಮಿಸಿದ ನಿಮ್ಮಂಥವರನ್ನು ಗೌರವಿಸಲು ಬಂದಿದ್ದೇವೆ ಎಂದರು.
ವೇತನ ಕಡಿಮೆಯಿದ್ದರೂ ಕೂಡ ಕೊರೋನಾ ಒಂದು ಮತ್ತು ಎರಡನೇ ಅಲೆಯಲ್ಲಿ ಕೊರೋನಾ ವಾರಿಯರ್ ಹಗಲಿರುಳು ಕೆಲಸ ಮಾಡಿದ್ದಾರೆ . ಪ್ರಾಮಾಣಿಕತೆಯಿಂದ ಕೆಲಸಮಾಡುತ್ತಿದ್ದಾರೆ ಇವರ ಸೇವೆಗೆ ಪ್ರತಿಯಾಗಿ ರಾಜ್ಯ ಸರ್ಕಾರ ಸೂಕ್ತವಾದ ಸೌಲಭ್ಯಗಳನ್ನು ನೀಡಲು ಮುಂದಾಗಬೇಕೆಂದು ಆಗ್ರಹಿಸಿದರು . ರಾಜ್ಯದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ . ಅದಲ್ಲಿ ಕುಮಾರಸ್ವಾಮಿ ಅವರ ಜನಪರ ಆಡಳಿತ ನೀಡಿದವರಲ್ಲಿ ಒಬ್ಬರು . ಇವತ್ತಿಗೂ ಬಡವರು , ರೈತರ , ಅಂಗವಿಕಲರು , ಆಶಾ ಕಾರ್ಯಕರ್ತರು , ಅಂಗನವಾಡಿ ನೌಕರರು ಕಷ್ಟಕ್ಕೆ ಮೊದಲು ಧ್ವನಿ ಎತ್ತುವುದರಲ್ಲಿ ಮೊದಲನೇ ಸಾಲಿನಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಅದು ಹೆಚ್.ಡಿ. ಕುಮಾರಸ್ವಾಮಿ ಮಾತ , ಕೊರೋನಾದಿಂದ ಮನೆಯ ಯಜಮಾನ ಮೃತಪಟ್ಟಾಗ ಆ ಮನೆಯ ಪರಿಸ್ಥಿತಿ ಏನು ಅನ್ನೋದನ್ನ ಸರ್ಕಾರ ಯೋಚಿಸುತ್ತಿಲ್ಲ.
ಆದರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೋಲಾರ ಜಿಲ್ಲೆಯಲ್ಲಿ ಕೂರೋಣಾ ವಾರಿಯಗಳಿಗೆ ಆಹಾರದ ಕಿಟ್ಗಳನ್ನ , ವಿತರಣೆ ಮಾಡಿದ ಸಂದರ್ಭದಲ್ಲಿ ಕೊರೋನಾದಿಂದ ವಿದ್ಯಾವಂತ ಮಹಿಳೆ ಸಣ್ಣ ವಯಸ್ಸಿನಲ್ಲಿಯೇ ತನ್ನ ಗಂಡನನ್ನ ಕಳೆದುಕೊಂಡಾಗ ಆ ಮಹಿಳೆಯ ಕಷ್ಟವನ್ನು ಅರಿತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿದ್ಯಾಭ್ಯಾಸ ತಕ್ಕಂತೆ ಖಾಸಗಿ ಕಂಪನಿಗಳಲ್ಲಿ ಕೆಲಸ ಕೊಡಿಸುವ ಭರವಸೆ ನೀಡುವ ಮೂಲಕ ಆ ಕುಟುಂಬಕ್ಕೆ ಆಸರೆಯಾಗುತ್ತಿದ್ದಾರೆ ಎಂದು ಹೇಳಿದರು .
ರಾಜ್ಯದಲ್ಲಿ ಯಾರು ಕೂಡ ಆರೋಗ್ಯ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜೆಡಿಎಸ್ ಪಕ್ಷದ ವರಿಷ್ಠರಾದ ಎಚ್.ಡಿ.ದೇವೇ ಗೌಡ , ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ , ಆದೇಶದಂತೆ ಅನೇಕ ಜನ ಉಪಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಈಗಾಗಲೇ ಕೊರೋನಾ ವಾರಿಯಗಳಿಗೆ ಆಹಾರ ಕಿಟ್ ವಿತರಣೆ , ಮೆಡಿಸಿನ್ ಕಿಟ್ ವಿತರಣೆ , ಆಮ್ಲಜನಕ ಸಾಂದ್ರಕಗಳು , ಅಲ್ಲದೆ ನನ್ನ ಎಂಎಲ್ಸಿ ಅನುದಾದಲ್ಲಿ ಕೋಲಾರ ಎಸ್ ಎನ್.ಆರ್ . ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳನ್ನ ಒದಗಿಸಲು ಅನುದಾವನ್ನು ಕೊಟ್ಟಿರುವುದಾಗಿ ಹೇಳಿದರು.
ಜೆಡಿಎಸ್ ಯುವ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ , ಒಂದು ವರ್ಷದಿಂದ ದೇಶದಲ್ಲಿ ಕೊರೋನಾ ಬಂದ ನಂತರ ಯಾವುದೇ ಭಯ ಭೀತಿಯಿಲ್ಲದೇ ಮನೆಮನೆಗೆ ಹೋಗಿ ಆರೋಗ್ಯ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತರು ಸಾಮಾಜಿಕ ಕಳಕಳಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ . ನಿಮ್ಮೆಲ್ಲರ ಸೇವೆಯಿಂದಲೇ ಹಳ್ಳಿಗಳಲ್ಲಿ ಕೊರೊನಾ ಮುಕ್ತ ಗ್ರಾಮಗಳಾಗಿ ಮಾಡಿದ್ದು ನಿಮ್ಮಂತವರಿಗೆ ಸಹಾಯ ಮಾಡಬೇಕೆಂಬುದನ್ನು ಭಾವಿಸಿ ನಿಮ್ಮನ್ನು ಸನ್ಮಾನ ಮಾಡಿ ಇನ್ನಷ್ಟು ಸೇವೆ ಮಾಡಲು ಅವಕಾಶ ನೀಡುತ್ತಿದ್ದೇವೆ ಎಂದರು.
ಕೊರೋನಾ ಮೂರನೇ ಒಲೆ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಅನಾಹುತಗಳನ್ನು ಸಂಭವಿಸುತ್ತವೆ ಎಂದು ಈಗಾಗಲೇ ತಜ್ಞರ ಸಮಿತಿ ಎಚ್ಚರಿಕೆ ಕೊಟ್ಟಿವೆ . ಸಂಪೂರ್ಣವಾಗಿ ಕೊರೋನಾ ಮುಕ್ತ ಮಾಡಲಿಕ್ಕೆ ಜನಪ್ರತಿನಿಧಿಗಳಿಗೆ ಇಲಾಖೆಯವರು ಸಾರ್ವಜನಿಕರು ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು .
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು ಮಾತನಾಡಿ , ಕೊರೋನಾ ಬರುವ ಮುಂಚೆ ಯಾವುದೇ ಒಬ್ಬ ಜನಪ್ರತಿನಿಧಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಕೇಳುತ್ತಿದ್ದರು . ಆದರೆ ಕೊರೋನಾ ಮಹಾಮಾರಿ ಬಂದ ನಂತರ ಕೇವಲ ಆಸ್ಪತ್ರೆಗಳ ಅಭಿವೃದ್ಧಿಗೆ ಜನರ ಆರೋಗ್ಯದ ರಕ್ಷಣೆಗೆ ಒತ್ತು ನೀಡುವ ಮೂಲಕ ಕೇವಲ ಆಸ್ಪತ್ರೆಗಳಿಗೆ ಅನುದಾನವನ್ನು ಕೇಳುವ ಪರಿಸ್ಥಿತಿ ಬಂದಿದ್ದು ಜನರ ಆರೋಗ್ಯ ಎಲ್ಲಕ್ಕಿಂತ ಮುಖ್ಯವಾಗಿದೆ ಎಂದು ಮತ್ತಷ್ಟು ಸೌಲಭ್ಯಗಳನ್ನು ನೀಡುತ್ತಾ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು .
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಬಾಬು ಮೌನಿ , ತಾಲೂಕು ಪಂಚಾಯತಿ ಸದಸ್ಯ ಎಂ . ಪಾಲಾಕ್ಷಗೌಡ , ವೈದ್ಯಾಧಿಕಾರಿ ಚರಣ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಚಿನ್ನಮ್ಮ ಸದಸ್ಯರಾದ ಲೋಕೇಶ್ , ಆನಂದ್ , ಮುಂತಾದವರು ಇದ್ದರು . ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.