(www.vknews.in) ಸರಕಾರಿ ಪ್ರಾಥಮಿಕ ಶಾಲೆಗಳನ್ನು ಕೂಡಲೇ ತೆರೆಯಬೇಕು ಹಾಗೂ ಪಠ್ಯ ಪುಸ್ತಕ ಮತ್ತು ಶಿಕ್ಷಕರನ್ನು ಕೂಡ ನೇಮಿಸಬೇಕೆಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಪುತ್ತೂರು ಸಹಾಯಕ ಆಯುಕ್ತರ ಮೂಲಕ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರಿಗೆ ಮನವಿ ಸಲ್ಲಿಸಲಾಯಿತು.
ಮಾನ್ಯ ಮುಖ್ಯಮಂತ್ರಿಯವರು ಹಾಗು ಶಿಕ್ಷಣ ಸಚಿವರ ಮುತುವರ್ಜಿ ಯಿಂದಾಗಿ ರಾಜ್ಯದಲ್ಲಿ ೯ ರಿಂದ ೧೨ ನೇ ತರಗತಿಗಳು ಈಗಾಗಲೇ ಕೆಲವು ಜಿಲ್ಲೆಗಳನ್ನು ಹೊರತು ಪಡಿಸಿ ಪ್ರಾರಂಭ ವಾಗಿವೆ. ಇದನ್ನು ಎಸ್ಡಿಎಂಸಿ ಸಮನ್ವಯ ವೇದಿಕೆಯು ಸ್ವಾಗತಿಸುತ್ತದೆ . ಇದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿಯವರು ಹಾಗು ಶಿಕ್ಷಣ ಸಚಿವರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
ಸರ್ಕಾರದ ಈ ದೃಢ ನಿರ್ಧಾರವನ್ನು ನಮ್ಮ ರಾಜ್ಯ ಶಾಲಾಭಿವೃದ್ಧಿ ಹಾಗು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಸಂಪೂರ್ಣ ಬೆಂಬಲವನ್ನು ಘೋಷಿಸುತ್ತದೆ
ಇದೇ ಸಂದರ್ಭದಲ್ಲಿ ಅವರ ಗಮನ ಸೆಳೆಯುವ ವಿಷಯವೆನೆಂದರೆ ಎಲ್ಲ ದೃಷ್ಟಿ ಹಾಗು ಮಜಲುಗಳಿಂದ ನೋಡಿದಾಗ ಅತಿ ಹೆಚ್ಚು ಹಾನಿ ಹಾಗು ನಷ್ಟವಾಗಿರುವುದು 1 ರಿಂದ 8 ನೇ ತರಗತಿ ಮಕ್ಕಳಿಗೆ . ಈ ಹಂತದಲ್ಲಿ ಹೆಚ್ಚು ಹೆಚ್ಚು ಮಕ್ಕಳು ಶಾಲೆ ತೊರೆದು ಬಾಲ ಕಾರ್ಮಿಕರಾಗಿರುವುದಲ್ಲದೆ , ಮಕ್ಕಳು ಬಾಲ್ಯವಿವಾಹ ಮತ್ತು ಭಿಕ್ಷಾಟನೆಗೆ ತೊಡಗಿರುವುದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. ಅಪೌಷ್ಟಿಕತೆ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ .
ಈ ಎಲ್ಲ ಕಾರಣಗಳಿಂದ ಬೆಳಗಿನ ಬಿಸಿಹಾಲು ಹಾಗು ಮಧ್ಯಾಹ್ನದ ಬಿಸಿ ಊಟದೊಂದಿಗೆ ತಕ್ಷಣವೇ 1 ರಿಂದ 8 ನೇ ತರಗತಿ ಶಾಲೆಗಳನ್ನು ತೆರೆಯುವುದು ಉತ್ತಮ ಆಯ್ಕೆಯಾಗಿದೆ. ಶಾಲೆ ತೆರೆಯುವ ಬಗ್ಗೆ ಈಗಾಗಲೇ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು ಶಾಲಾ ಹಂತದಲ್ಲಿ ಪೂರ್ವ ತಯಾರಿಗಳನ್ನು ಮಾಡಿ ಕೊಳ್ಳುತ್ತಾ ಇದೆ.
ಅದಲ್ಲದೆ ಬಹುತೇಕ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕೂಡ ಗಣನೀಯವಾಗಿ ಕಡಿಮೆ ಇದೆ .
ಅದರ ವಿವರ ಈ ಕೆಳಕಂಡಂತಿದೆ:
1. 10 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು 3,784;
2. 30 ಮತ್ತು ಅದಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಶಾಲೆಗಳು 12865;
3. 50 ಮತ್ತು ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು 6527;
4. 100 ಮತ್ತು ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳು 8366;
5. 100 ಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಶಾಲೆಗಳು 11709
ಮೊದಲಿಗೆ , ಕ್ರಮ ಸಂಖ್ಯೆ ೧ ಹಾಗು ೨ ರಲ್ಲಿ ತೋರಿಸಿರುವಂತೆ ಕಡಿಮೆ ಮಕ್ಕಳಿರುವ 16649 ಶಾಲೆಗಳನ್ನು ತೆರೆಯುವುದು ಉತ್ತಮ ಆಯ್ಕೆಯಾಗಿದೆ. ಕ್ರಮ ಸಂಖ್ಯೆ 1 ಮತ್ತು 2 ರಲ್ಲಿನ ಎಲ್ಲ 16649 ಶಾಲೆಗಳನ್ನು ಬೆಳಗಿನ ಬಿಸಿಹಾಲು ಮಧ್ಯಾಹ್ನದ ಬಿಸಿ ಊಟದೊಂದಿಗೆ ತಕ್ಷಣವೇ ಶಾಲೆಗಳನ್ನು ತೆರೆಯಲು ಯಾವುದೇ ರೀತಿಯ ಸಮಸ್ಯೆಗಳು ಕಂಡು ಬರುವುದಿಲ್ಲ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋರೋಣ ಸೋಂಕಿನ ಪ್ರಮಾಣ ಕೂಡ ಅತ್ಯಂತ ಕಡಿಮೆ ಆಗಿದೆ. .
ಆದರಿಂದ ಅಲ್ಲಿ ಕೋವಿಡ್ ೧೯ ರ ಎಲ್ಲ ಶಿಷ್ಟಾಚಾರಗಳನ್ನು (Protocols ) ಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಬಹುದು.
ಜೊತೆಗೆ ಸರಕಾರದ ತಜ್ಞರ ಸಮಿತಿಯು ಕೆಳಹಂತದ ತರಗತಿಗಳನ್ನು ಮೊದಲು ತೆರೆಯುವುದು ಉತ್ತಮ ನಿರ್ಧಾರವೆಂದು ಅಭಿಪ್ರಾಯಿಸಿದ್ದಾರೆ . ಈ ಅಂಶಗಳನ್ನು ಆಧರಿಸಿ. ಗ್ರಾಮೀಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳ 1 ರಿಂದ 8 ನೇ ತರಗತಿಗಳನ್ನು ತೆರೆಯಲು ಕೂಡಲೇ ನಿರ್ಧರಿಸಬೇಕೆಂದು ಎಸ್ಡಿಎಂಸಿ ಸಮನ್ವಯ ವೇದಿಕೆಯು ಮಾನ್ಯ ಮುಖ್ಯಮಂತ್ರಿಯವರನ್ನು ಹಾಗೂ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತೇವೆ.
ಶಾಲೆ ತೆರೆಯುವ ನಿರ್ದೇಶನ ನೀಡುವುದರೊಂದಿಗೆ, ಸರಕಾರಿ ಶಾಲೆಯ ಮೂಲಭೂತ ಅಗತ್ಯತೆ ಯಾದ ಪಠ್ಯ ಪುಸ್ತಕ, ಹಾಗೂ ಶಿಕ್ಷಕರ ಕೊರತೆಯನ್ನು ಶಾಲೆ ಪ್ರಾರಂಭ ದೊಂದಿಗೆ ನೀಗಿಸುವ ವ್ಯವಸ್ತೆಯನ್ನು ಕೂಡ ಮಾಡಬೇಕು. ಶಿಕ್ಷಕರ ಕೊರತೆಗೆ ಪೂರಕವಾಗಿ ಈಗಾಗಲೇ ಸರಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಆಯ್ಕೆ ಮಾಡಿ ಕೊಳ್ಳಲು ಕೂಡಲೇ ಆದೇಶವನ್ನು ಹೊರಡಿಸುವುದು.
ಜೊತೆಗೆ ಕಳೆದ ಎರಡು ವರ್ಷಗಳಿಂದ ಮಕ್ಕಳ ಕಲಿಕೆಯ ಮೇಲೆ ಉಂಟಾಗಿರುವ ನಷ್ಟವನ್ನು ಸರಿಪಡಿಸಲು ಮುಂದಿನ ಒಂದು ವರ್ಷ ಕಲಿಕೆಯ ರೂಪುರೇಷೆ , ಪಠ್ಯಕ್ರಮ , ಶಿಕ್ಷಕರ ತರಬೇತಿ ಮತ್ತು ವಿಧಾನ ಹೇಗಿರಬೇಕೆಂದು ನಿರ್ಧರಿಸಲು ಸರಕಾರಿ ಶಾಲೆಗಳ ಬಗ್ಗೆ ವೈಜ್ಞಾನಿಕವಾಗಿ ತಿಳಿದಿರುವಂತಹವರನ್ನು ಸೇರಿಸಿ ಕೊಂಡು ಒಂದು ಶೈಕ್ಷಣಿಕ ಸಲಹಾ ಸಮಿತಿಯನ್ನು ರಚಿಸಿ ಮಕ್ಕಳಿಗೆ ಸರಿಯಾದ ಶಿಕ್ಷಣವನ್ನು ಕೊಡುವಲ್ಲಿ ತಾವುಗಳು ಸಹಕರಿಸುವ ಬಗ್ಗೆ ಮನವಿಯಲ್ಲಿ ಹೇಳಲಾಗಿದೆ
ನಿರಂಜನಾರಾಧ್ಯ ವಿ.ಪಿ. ಮಹಾ ಪೋಷಕರು ಎಸ್ಡಿಎಂಸಿ ಸಮನ್ವಯ ವೇದಿಕೆ.
ಮೊಯ್ದಿನ್ ಕುಟ್ಟಿ , ರಾಜ್ಯಾಧ್ಯಕ್ಷರು ಎಸ್ಡಿಎಂಸಿ ಸಮನ್ವಯ ವೇದಿಕೆ.
ಮನವಿ ನೀಡುವ ಸಂದರ್ಭದಲ್ಲಿ ಎಸ್ಡಿಎಂಸಿ ಸಮನ್ವಯ ವೇದಿಕೆ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ,
ಎಸ್ಡಿಎಂಸಿ ಸಮನ್ವಯ ವೇದಿಕೆ ಜಿಲ್ಲಾ ಸಮಿತಿ ಉಪಾಧ್ಯಕ್ಷ ಉಮ್ಮರ್ ಫಾರೂಕ್ ಕೊಡಪದವು,
ಜಿಲ್ಲಾ ಜೊತೆ ಕಾರ್ಯದರ್ಶಿ ಸಲಿಕತ್,
ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಅಜೇರು,
ಪುತ್ತೂರು ಎಸ್ಡಿಎಂಸಿ ಸಮನ್ವಯ ವೇದಿಕೆಯ ಜಬ್ಬಾರ್ ಕುರಿಯ, ಜನಾರ್ದನ ಹೊಸಗದ್ದೆ, ಲತೀಫ್ ಶಾಂತಿನಗರ, ಬಂಟ್ವಾಳ ಎಸ್ಡಿಎಂಸಿ ಸಮನ್ವಯ ವೇದಿಕೆಯ ಹಸೈನಾರ್ ಕಡಂಬು, ಸಿರಾಜ್ ಮದಕ ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.