ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್): ಜೀವನದ ಸಂಕಷ್ಟದ ಸಂದರ್ಭಗಳಲ್ಲಿ ಶ್ರೀಕೃಷ್ಣನ ಬೋಧನೆಗಳು ಸಹಾಯಕಾರಿಯಾಗಲಿವೆ ಈ ಕುರಿತು ಜರ್ಮನ್ ಭಾಷಾಶಾಸ್ತ್ರಜ್ಞ ಮ್ಯಾಕ್ಸ್ ಮುಲ್ಲರ್ ಸೇರಿದಂತೆ ಇನ್ನಿತರೆ ಪಾಶ್ಚಾತ್ಯರು ಶ್ರೀಕೃಷ್ಣನ ತತ್ವಗಳನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಹೆಚ್.ಅಮರೇಶ್ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೋವಿಡ್ ಪೂರ್ವದಲ್ಲಿ ಶ್ರೀಕೃಷ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು ಪ್ರಸ್ತುತ ಕೋವಿಡ್ ಸಾಂಕ್ರಮಿಕ ರೋಗದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ವಯ ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಹಿಂದೂ ಧರ್ಮದಲ್ಲಿ ಶ್ರೀಕೃಷ್ಣ ಪರಮಾತ್ಮನಿಗೆ ಶ್ರೇಷ್ಠ ಸ್ಥಾನವಿದೆ ಆದಿ ಪುರಾಣದಿಂದ ಹಿಡಿದು ದಾಸ ಪರಂಪರೆ ಒಳಗೊಂಡಂತೆ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿ ಶ್ರೀಕೃಷ್ಣನ ತತ್ವ ಸಿದ್ಧಾಂತಗಳ ಉಲ್ಲೇಖವಿದೆ. ಪ್ರತಿಯೊಬ್ಬರಲ್ಲೂ ಮಾನಸಿಕವಾಗಿ ಎಷ್ಟೋ ಸಮಸ್ಯಾತ್ಮಕ ಪ್ರಶ್ನೆಗಳು ಉಳಿದು ಕೊಂಡಿರುತ್ತವೆ ಆ ಎಲ್ಲ ಪ್ರಶ್ನೆಗಳಿಗೆ ಭಗವದ್ಗೀತೆಯ ಸಾರದಲ್ಲಿ ಉತ್ತರವನ್ನು ಕಂಡುಕೊಳ್ಳಬಹುದು ಸಂಕಷ್ಟದ ಸಂದರ್ಭಗಳಲ್ಲಿ ಭಗವದ್ಗೀತೆಯ ಬೋಧನೆಗಳು ಸಹಾಯಕಾರಿಯಾಗಲಿವೆ ಗೀತೆಯ ಸಾರವನ್ನು ಎಲ್ಲರೂ ಅಳವಡಿಕೊಂಡು ನಡೆದರೆ ಒಳಿತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಮುನೇಗೌಡ ಅವರು ಮಾತನಾಡಿ, ಶ್ರೀಕೃಷ್ಣನ ಬೋಧನೆಗಳು ಒಂದೇ ಸಮುದಾಯಕ್ಕೆ ಸೀಮಿತವಾದವುಗಳಲ್ಲ ಅವರ ಬೋಧನೆಗಳನ್ನು ಎಲ್ಲರೂ ಪಾಲಿಸಬೇಕು ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದನ್ನು ಭಗವದ್ಗೀತೆ ತಿಳಿಸಿಕೊಡುತ್ತದೆ ನಿನ್ನ ಕರ್ಮದಲ್ಲಿ ನಿಷ್ಠೆಯಿಂದ ಕಷ್ಟಪಡು ನಿನಗೆ ಉತ್ತಮ ಪ್ರತಿ ಫಲ ಸಿಕ್ಕೆ ಸಿಗುತ್ತದೆ ಎಂಬ ಶ್ರೇಷ್ಠ ತತ್ವವನ್ನು ನೀಡಿದವರು ಸರ್ವಾಂತರ್ಯಾಮಿ ಶ್ರೀಕೃಷ್ಣ ಪರಮಾತ್ಮರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ತಾಲೂಕು ಅಧ್ಯಕ್ಷ ಗಂಗಾಧರ್, ಸಂಘದ ಪದಾಧಿಕಾರಿಗಳಾದ ಪ್ರಭಾಕರ್ (ಶಿಕ್ಷಕರು), ಶ್ರೀನಿವಾಸ್, ವೆಂಕಟೇಶ್, ಕೃಷ್ಣಪ್ಪ, ಟಿ.ಸಿ.ಗೋವಿಂದರಾಜು (ಶಿಕ್ಷಕರು), ಹರೀಶ್, ಯಾದವ ಯುವ ವೇದಿಕೆಯ ಮುನಿಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ: ತೆ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.