ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ವಿದ್ಯಾರ್ಥಿ ಸಮುದಾಯಕ್ಕೆ ಸಂತಸದ ಸುದ್ದಿ. ಮಾಲೂರು ಪಟ್ಟಣ್ಣದ ಹೋಂಡಾ ಸ್ಟೇಡಿಯಂ ಹಿಂಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ಪಿ.ಯು.ಸಿ ಹಾಗೂ ತತ್ಸಮಾನ ಐ.ಟಿ.ಐ ಉತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸಮಾಜ ಕಾರ್ಯ ವಿಭಾಗದ (BSW) ಮೂರು ವರ್ಷದ ಪದವಿಗೆ ದಾಖಲಾತಿಯನ್ನು ಆರಂಭಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಪಕರಾದ ಅನಂತರಾಜು.ಎನ್ ಮಾತನಾಡಿ “ನಮ್ಮ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಐ.ಟಿ.ಐ ಪಾಸದ ವಿದ್ಯಾರ್ಥಿಗಳಿಗೆ ಪ್ರಸ್ತುತ ದಾಖಲಾತಿಗಳು ಆರಂಭವಾಗಿದೆ. ಈ ಕೋರ್ಸ್ ಮಾಡಿದವರಿಗೆ ನೂರಾರು ಉದ್ಯೋಗವಕಾಶಗಳು ದೊರೆಯಲಿದೆ. ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಹಾಗೂ ಸ್ವಯಂ ಉದ್ಯೋಗವನ್ನು ಕೈಗೋಳ್ಳುವ ಎಲ್ಲಾ ರೀತಿಯ ಕಾರ್ಯಾಗಾರಗಳನ್ನು ಸಹ ಮಾಡಲಾಗುತ್ತದೆ. ಮಾಲೂರು ತಾಲ್ಲೂಕಿನ ಪೋಷಕರು ನಿಮ್ಮ ಮಕ್ಕಳನ್ನು ಸೇರಿಸುವ ಮೂಲಕ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ, ಇದನ್ನು ಎಲ್ಲಾರೂ ಸದುಪಯೋಗಪಡಿಸಿಕೊಳ್ಳಿ” ಎಂದರು.
ಸಮಾಜ ಕಾರ್ಯ ವಿಭಾಗದಲ್ಲಿ ಅನೇಕ ರೀತಿಯ ವೈಶಿಷ್ಟ್ಯವನ್ನು ಒಳಗೊಂಡಿದೆ, ವಿಶ್ವ ಪ್ರಸಿದ್ದ ಶಿಕ್ಷಕಿ ಡಾ. ಮೇರಿ ಎಲೆನ್ ವೀಮರ್ ರವರ ಭೋದನಾ ವಿಧಾನಗಳೊಂದಿಗೆ ಭೋದನೆ, ವಿದ್ಯಾರ್ಥಿ ಸ್ನೇಹಿ ವಿಭಾಗ, ಅನುಭವವುಳ್ಳ ಭೋಧಕ ವರ್ಗ, ಮಹತ್ವದ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ದಿನಗಳ ಆಚರಣೆ, ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಲಹೆ, ನೆರವು, ತರಬೇತಿಯನ್ನು ಸಹ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಿಸುವ ಕಾರ್ಯ ಮಾಡಲಾಗುವುದು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ರವರು ಮಾತನಾಡಿ “ನಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಕಾರ್ಯ ವಿಭಾಗವನ್ನು ಪ್ರಾರಂಭಮಾಡಿ 5 ವರ್ಷಗಳಾಗಿದ್ದು ಉತ್ತಮ ಹಾದಿಯತ್ತ ಸಾಗುತ್ತ ನೂರಾರು ವಿದ್ಯಾರ್ಥಿಗಳ ಭವಿಷ್ಯ ಪ್ರಜ್ವಲಿಸುವ ಹಾಗೇ ತರಬೇತಿ, ಬೋಧನೆ ನಡೆಯುತ್ತಿದೆ, ಈ ಉತ್ತಮ ಅವಕಾಶವನ್ನು ನಿಮ್ಮ ಮಕ್ಕಳನ್ನು ದಾಖಲಾತಿ ಮಾಡುವ ಮೂಲಕ ಸ್ಪಂದಿಸಿ” ಎಂದರು.
ನಿಮ್ಮ ಮಕ್ಕಳನ್ನು ದಾಖಲಾತಿ ಮಾಡುವವರು, ಅನಂತರಾಜು. ಮುಖ್ಯಸ್ಥರು, ಹಾಗೂ ಸಹಾಯಕ ಪ್ರಾಧ್ಯಾಪಕರ ಮೊಬೈಲ್ ಸಂಖ್ಯೆಗೆ ಕರೆಮಾಡಿ ಸಂಪರ್ಕ ಮಾಡಬಹುದು ಮೊ:8971150759, ಹಾಗೇ ಮೋಹನ್ ಕುಮಾರ್.ವಿ 9742371600, ಶ್ರೀಮತಿ ನೂತನ 8762882224 ಸಂಪರ್ಕಿಸಬಹುದು.
ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷರು, ಶಾಸಕರು ಕೆ.ವೈ.ನಂಜೇಗೌಡ, ಕಾರ್ಯಾಧ್ಯಕ್ಷರಾದ ಸಿ.ರಾಜು, ಪ್ರಾಂಶುಪಾಲರಾದ ವೆಂಕಟೇಶ್, ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಪಕರಾದ ಮೋಹನ್ ಕುಮಾರ್.ವಿ, ಶ್ರೀಮತಿ ನೂತನ.ಬಿ.ಡಿ ಇವರ ಉತ್ತಮ ಸಹಕಾರದ ಮೂಲಕ ಅಭಿವೃದ್ದಿ ಹಾದಿಯಲ್ಲಿ ಸಾಗುತ್ತಿದೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.