ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಜನರ ಕಷ್ಟಕ್ಕೆ ಸ್ಪಂಧನೆ ನೀಡುವ ಮೂಲಕ ಗರ್ಭಿಣಿ ಮತ್ತು ಬಾಣಂತಿಯರಿಗೆ ತವರು ಮನೆ ಉಡುಗೊರೆ ನೀಡುತ್ತಿರುವ ಸಮಾಜ ಸೇವಕ ಚಂದನ್ಗೌಡರಂತಹ ಮಕ್ಕಳನ್ನು ಮಹಿಳೆಯರು ಜನ್ಮ ನೀಡಬೇಕೆಂದು ಕೋಡಿಮಠದ ಶ್ರೀಗಳು ಹೇಳಿದರು.
ಚಂದನವನ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಸಮಾಜ ಸೆವ ಕ ಚಂದನ್ ಗೌಡರು ತಾಲೂಕಿನ ವೇಮಗಲ್ನಲ್ಲಿ ಆಯೋಜಿಸಿದ್ದ , ಗರ್ಭಿಣಿ ಮತ್ತು ಬಾಣ೦ತಿ೦ರುರಿಗೆ ಮಡಿಲುತುಂಬುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ಹೆಣ್ಣು ಮಕ್ಕಳನ್ನು ಗೌರವಿಸುವ ಕಡೆ ದೇವರು ನೆಲೆಸುತ್ತಾರೆ. ಹೀಗಾಗಿ ಮಹಿಳೆಯರಿಗೆ ತವರು ಮನೆ ಉಡುಗೊರೆ ನೀಡುತ್ತಿರುವ ಚಂದನ್ಗೌಡರ ಜನಸೇವೆಗೆ ಅಧಿಕಾರದ ಶಕ್ತಿ ಸಿಗಲಿ ಎಂದರು. ಹೆಣ್ಣಿನಲ್ಲಿ ಪ್ರಕೃತಿ , ಸಂಸ್ಕೃತಿ ವಿಕೃತಿ ಮೂರೂಇದೆಯಾದರೂ ತಾಳಿ ಕಟ್ಟಿಸಿಕೊಂಡು ತಾಳುವ ಹಾಗೆ ಬಾಳಿ ಶೀಲವಂತೆ ಆಗಬೇಕೆಂದು ಶ್ರೀಗಳು ಮಹಿಳೆಯರಿಗೆ ಕರೆ ನೀಡಿದರು. ಸಮಾಜ ಸೇವಕ ಚಂದನ್ಗೌಡ ಮಾತನಾಡಿ , ಇದೀಗ ಸ್ವಲ್ಪ ಮಟ್ಟಿಗೆ ಕರೋನಾ ಬಿಡುವು ನೀಡಿದ್ದರೂ 3 ನೇ ಅಲೆ ನಿರೀಕ್ಷೆ ಇರುವುದರಿಂದಾಗಿ ಮಹಿಳೆಯರು ಎಚ್ಚೆತ್ತುಕೊಂಡು ಎಸ್ಎಂಎಸ್ ಸೂತ್ರವನ್ನು ಪಾಲಿಸಬೇಕೆಂದು ಮನವಿ ಮಾಡಿದರು. ಗೌರಿ ಹಬ್ಬಕ್ಕಾಗಿ ಅಣ್ಣನಾಗಿ ಸೀರೆ ವಿತರಿಸುತ್ತಿದ್ದು ಆಶೀರ್ವಾದದ ಮೂಲಕ ಹರಸಬೇಕೆಂದು ಮನವಿ ಮಾಡಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವಿ.ಮುನಿರಾಜು ಮಾತನಾಡಿ , ಸಮಾಜ ಸೇವಕ ಚಂದನ್ಗೌಡರ ಸೇವೆಯನ್ನು ಕೊಂಡಾಡಿದರು. ಕಲಾವಿದಜ್ಞಾನಮೂರ್ತಿ , ಜಿಪಂ ಮಾಜಿ ಸದಸ್ಯ ಅರವಿಂದ್ ಮಾತನಾಡಿದರು . ಮಧೇರಿ ಪಂಚಾಯತಿ ಅಧ್ಯಕ್ಷೆ ಪುಷ್ಕಾ.ಉಪಾಧ್ಯಕ್ಷ ಪ್ರಕಾಶ್ , ಸೀತಿ ಪಂಚಾಯತಿ ಅಧ್ಯಕ್ಷೆ ಸೀತಾಲಕ್ಷ್ಮಿ , ಉಪಾಧ್ಯಕ್ಷೆ ಮಂಜುಳಾ , ಬೆಳಮಾರನಹಳ್ಳಿ ಗ್ರಾಂ.ಪಂಅಧ್ಯಕ್ಷಚಂದು , ಕಾಡಹಳ್ಳಿ ಮಂಜುನಾಥ್ , ಕ್ಯಾಲನೂರು ನಾರಾಯಣಮೂರ್ತಿ ಮುಂತಾದವರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.