ಮಂಗಳೂರು(www.vknews.in): ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಸೋಸಿಯಲ್ ಡೆವಲಪ್ಮೆಂಟ್ ಪೌಂಡೇಶನ್ [ರಿ] ಇದರ ವತಿಯಿಂದ “ಸಾದಕರಿಗೆ ಸನ್ಮಾನ” ಕಾರ್ಯಕ್ರಮ ಚಿಂತಕ, ಸಮಾಜ ಸೇವಕ,ಸಮುದಾಯ ಕಳಕಳಿಯ ಜನನಾಯಕರಾದ “ಜನಾಬ್ ರಫೀಕ್ ಮಾಷ್ಟರ್ ಆತೂರ್” ರವರ ಮಂಗಳೂರಿನ ಕಂಕನಾಡಿಯಲ್ಲಿರುವ ಮನೆಯಲ್ಲಿ ನಡೆಯಿತು. ಪ್ರತಿಭೆಯನ್ನು ಪ್ರಚೋದಿಸುವ ಇಂಥಹ ಕಾರ್ಯಗಳ ಮೂಲಕ ನಮ್ಮ ಸಮುದಾಯದ ಇನ್ನಷ್ಟೂ ಪ್ರತಿಭೆಗಳನ್ನು ಹೊರತೆಗೆಯಲು ಸಾಧ್ಯವಿದೆ. ಈ ದಿನದ ಸನ್ಮಾನ ಕಾರ್ಯಕ್ರಮದಲ್ಲಿ ಎರಡು ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆಗೈದ ಇಬ್ಬರು ವಿದ್ಯಾರ್ಥಿಗಳಾದ “ಮುಹಮ್ಮದ್ ಸುನೈಫ್ ಇಸ್ಮಾಯಿಲ್,ಮತ್ತು ಮುಹಮ್ಮದ್ ಸಿನಾನ್” ರವರ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು. ಸಿನಾನ್ ರವರು ಬ್ಯಾಟರಿ ಚಾಲಿತ ಸೈಕಲ್ ಮಾದರಿ ನಿರ್ಮಿಸಿ ಗಮನಾರ್ಹ ಸಾದನೆ ಮಾಡಿದ್ದಾರೆ ಅದರಲ್ಸೂ ವಿಶೇಷವಾಗಿ ಪೆನ್ಸಿಲಿನ ಕಡ್ಡಿ ಗಳನ್ನು ತನ್ನ ಕೈಗಳಿಂದ ಕೆತ್ತನೆ ಮಾಡುವ ಮೂಲಕ ಹಲವಾರು ಕಲಾಕೃತಿಗಳನ್ನು ರಚಿಸಿ ಗಮನಾರ್ಹ ಸಾದನೆ ಮಾಡಿದ ಸುನೈಫ್ ರವರ ಪ್ರತಿಭೆ ಅಧ್ಬುತ. ವರ್ಷಗಳ ಹಿಂದೆ “ಅದ್ಭುತ ಬಾಲಕ” ಎಂದೆ ಪ್ರಖ್ಯಾತಿ ಪಡೆದ ತನ್ನ ಮಗು ಮೊಹಮ್ಮದ್ ಸ್ವರೂಪ್’ನಂತಹ ಪ್ರತಿಭೆಗಳನ್ನು ನಮ್ಮ ಸಮುದಾಯದ ಪ್ರತಿಯೊಬ್ಬರಲ್ಲಿಯೂ ಬೆಳೆಸಬೇಕೆಂಬ ದೃಷ್ಟಿಯಿಂದ ಯಾವುದೇ ಫಲಪೇಕ್ಷೆಗಳನ್ನು ಬಯಸದೆ ಪ್ರತಿಭೆಗಳನ್ನು ಗುರುತಿಸುವ,ಬೆಳೆಸುವ ಕಾರ್ಯಗಳನ್ನು ಮಾಡುತ್ತಿದ್ದಾರೆ ರಫೀಕ್ ಮಾಷ್ಟರ್ ರವರು. ಅಲ್ಲಾಹು ದೀರ್ಘಾಯುಷ್ಯ ಆರೋಗ್ಯ ಕರುಣಿಸಲಿ ಆಮೀನ್.
ಕಾರ್ಯಕ್ರಮದಲ್ಲಿ ‘ಭಾರತ ರತ್ನ’ ಡಾ. ಎ ಪಿ ಜೆ. ಅಬ್ದುಲ್ ಕಲಾಂ ಸೋಸಿಯಲ್ ಡೆವಲಪ್ಮೆಂಟ್ ಫೌಂಡೇಶನ್ [ರಿ] ಇದರ ಅದ್ಯಕ್ಷರಾದ ಜನಾಬ್. ಅಬ್ದುಲ್ ಕಾದರ್ ಹುಸೈನ್ ಪಡುಬಿದ್ರೆ, ಉಪಾದ್ಯಕ್ಷ ಜನಾಬ್ ಅಬೂಬಕ್ಕರ್, ಶಿಕ್ಷಣ ತಜ್ಞ,ಸಮಾಜ ಸೇವಕ ಜನಾಬ್ ರಫೀಕ್ ಮಾಷ್ಟರ್ ಆತೂರು, ಸುಲ್ತಾನ್ ಬಿಲ್ಡರ್ಸಿನ ಆಡಳಿತ ನಿರ್ದೇಶಕ ಜನಾಬ್. ಮೊಹಮ್ಮದ್ ಯೂ ಬಿ, ಕಣ್ಣೂರ್ ಆಂಗ್ಲಮಾದ್ಯಮ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಜನಾಬ್. ಅಬ್ದುಲ್ ಮಜೀದ್ ಹಾಜಿ ಸಿತಾರ್, ಐ ಐ ಟಿ ಮದ್ರಾಸ್. ಯಂ ಟೆಕ್, ವಿದ್ಯಾರ್ಥಿ ಝುನೈನ್, ಇಂಜಿನಿಯರ್, ಜನಾಬ್. ಝಾಕಿರ್ ಹುಸೈನ್ ಮಂಗಳೂರು, ಉದ್ಯಮಿ ಜನಾಬ್. ಫೈರೋಝ್ ಮಂಗಳೂರು, ಮಾಷ್ಟರ್. ಮೊಹಮ್ಮದ್ ಫಹದ್, ಅಲ್-ಅಮೀನ್ ಯೂತ್ ಫೆಡರೇಶನ್ [ರಿ] ಎ ವೈ ಎಫ್ ಕೊಡಂಗಾಯಿ ಇದರ ಸದಸ್ಯರಾದ ಅಬ್ದುಲ್ ಕಾದರ್ ಕೊಡಂಗಾಯಿ, ಮತ್ತು ಸಿರಾಜ್ ಸಾಲೆತ್ತೂರು ಉಪಸ್ಥಿತಿಯಿದ್ದರು.
ವರದಿ: ಅಬೂ ಅಯಾನ್ ಕೊಡಂಗಾಯಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.