ಸುರತ್ಕಲ್ (www.vknews.com) : ಒಂದು ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಗ್ರಂಥಾಲಯ, ವಿಜ್ಞಾನದ ಪ್ರಯೋಗಾಲಯಗಳು ಅತ್ಯಗತ್ಯ ಎಂದು ವಿಧಾನಪರಿಷತ್ ಸದಸ್ಯ ಬಿಎಂ ಫಾರೂಕ್ ಹೇಳಿದರು. ಅವರು ಕೃಷ್ಣಾಪುರದ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಅಟಲ್ ಟಿಂಕೆರಿಂಗ್ ಲ್ಯಾಬ್ ಉದ್ಘಾಟಿಸಿ ಮಾತನಾಡಿರು.
ಈ ಜಗತ್ತಿನಲ್ಲಿ ಇರುವ ಎಲ್ಲಾ ವಸ್ತುಗಳಿಂದಲೂ ನಾವು ಜ್ಞಾನವನ್ನು ಅರ್ಜಿಸಬಹುದು. ಜ್ಞಾನಾರ್ಜನೆಗೆ ಕೊನೆಯೋ, ಇತಿಮಿತಿಗಳೋ ಇಲ್ಲ. ಇಸ್ಲಾಂ ಧರ್ಮ ಮತ್ತು ಪ್ರವಾದಿ ಮುಹಮ್ಮದ್ ಅವರು ಕೂಡಾ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ ಎಂದರು. ಈ ನಿಟ್ಟಿನಲ್ಲಿ ಮುಸ್ಲಿಂ ಸಮುದಾಯದ ಯುವಜನತೆ ಉತ್ತಮ ಶಿಕ್ಷಣವನ್ನು ಪಡೆದು ಐಎಎಸ್ ಮತ್ತು ಐಪಿಎಸ್ ಮುಂತಾದ ಹುದ್ದೆಗಳಿಗೆ ತೆರಳಬೇಕು ಎಂದರು.
ವಿಜ್ಷಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕಾರ್ಪೋರೇಟರ್ ಲಕ್ಷ್ಮೀ ಶೇಖರ್, ಪ್ರೌಢಶಾಲಾ ಮಟ್ಟದಲ್ಲೇ ಈ ರೀತಿಯಾಗಿ ಲ್ಯಾಬ್ಗಳನ್ನು ಬಳಸಿಕೊಳ್ಳುವುದು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಉತ್ತಮ ಎಂದರು. ಶಾಲೆಗಳಲ್ಲಿ ದೊರೆಯುವ ಈ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಉಪಯೋಗಿಸಿ ಎಂದು ಕರೆ ನೀಡಿದರು.
ಮಾಜಿ ಶಾಸಕ ಡಾ. ಮೊಹಿಯದ್ದೀನ್ ಬಾವಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಬಹಳಷ್ಟು ಹಣ ಖರ್ಚು ಮಾಡಿ ಉತ್ತಮ ಸೌಲಭ್ಯ ಸಾಧನಗಳನ್ನು ಕಲಿಕೆಗಾಗಿ ಒದಗಿಸುತ್ತಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಬೇಕಿದ್ದು, ಫಲಿತಾಂಶ ಮತ್ತು ಪ್ರದರ್ಶನದ ಮೂಲಕ ಇದನ್ನು ತೋರಿಸಿಕೊಡಬೇಕು ಎಂದರು.
ಎಟಿಎಲ್ ಪ್ರಾದೇಶಿಕ ಮುಖ್ಯಸ್ಥೆ ಜಯಲಕ್ಷ್ಮೀ, ಎನ್ಐಟಿಕೆಯ ಪ್ರೊಫೆಸರ್ ಅರುಣ್ ಐಸ್ಲೂರ್, ಕಾರ್ಪೋರೇಟರ್ ಸಂಶಾದ್ ಅಬೂಬಕರ್, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಹ್ಮದ್ ಜಲೀಲ್ ಬದ್ರಿಯಾ, ಮಾಜಿ ಅಧ್ಯಕ್ಷ ಅಬೂಬಕರ್ ಕೃಷ್ಣಾಪುರ, ಅಲ್ ಬದ್ರಿಯಾ ಎಜುಕೇಶನ್ ಅಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಬಿಎಂ ಹುಸೈನ್, ಎಂ ಎಸ್ ಶರೀಫ್, ಬಿಎ ನಝೀರ್, ಎಚ್ಎನ್ಜಿಸಿ ಗ್ರೂಪ್ನ ನಿರ್ದೇಶಕ ಅಹ್ಮದ್ ಮನ್ಸೂರ್, ಪ್ರಿನ್ಸಿಪಾಲ್ ವಿಲ್ಮ ಡಿಮೊಲ್ಲೊ, ಉಪಾಧ್ಯಕ್ಷ ಫೀರೋಝ್ ಖಾನ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಅಲಿ ತೋ ಮತ್ತಿತರರು ಉಪಸ್ಥಿತರಿದ್ದರು. ಅಲ್ ಬದ್ರಿಯಾ ಎಜುಕೇಶನ್ ಅಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಕಾದರ್ ಬೋಂಬೆ ಅಧ್ಯಕ್ಷತೆ ವಹಿಸಿದ್ದರು.ಸಂಚಾಲಕ ಬಿ.ಎ ಇಕ್ಬಾಲ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು.
ಮುಖ್ಯ ಶಿಕ್ಷಕ ಸತೀಶ್.ಎನ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಇಫ್ತಿಕಾರ್ ಅಹ್ಮದ್ ವಂದಿಸಿದರು. ಶಿಕ್ಷಕಿ ಝೀನತ್, ಲೀಲಾವತಿ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.