ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಕನ್ನಡ ರಾಜ್ಯೋತ್ಸವ ಪ್ರಯುಕ್ತ “ನನ್ನ ಕನಸಿನ ಕರ್ನಾಟಕ” ಎಂಬ ವಿಷಯದಲ್ಲಿ ವಿಶ್ವ ಕನ್ನಡಿಗ ನ್ಯೂಸ್ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದ್ದು, ವಿಜಯಲಕ್ಷ್ಮಿ ಹಿರೇಮಠ-ಹುಬ್ಬಳ್ಳಿ ಪ್ರಥಮ ಸ್ಥಾನವನ್ನು, ಸ್ವಾಸ್ತಿ ಸಿ.ಶೆಟ್ಟಿ ಉಡುಪಿ ದ್ವಿತೀಯ ಸ್ಥಾನವನ್ನು ಹಾಗು ಮುಹಮ್ಮದ್ ಸಿ.ಹೆಚ್ ವಿರಾಜಪೇಟೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
76 ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯು ಪೈಪೋಟಿಯಿಂದ ಕೂಡಿತ್ತು. ಪ್ರತೀ ಸ್ಪರ್ಧಾರ್ಥಿಗಳು ಉತ್ತಮವಾಗಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಮೊದಲ ಹತ್ತು ಸ್ಥಾನದಲ್ಲಿರುವ ಸ್ಪರ್ಧಿಗಳ ವಿವರ ಈ ಕೆಳಗಿನಂತಿದೆ.
ಶಾನ್ವಿ ಚಂದ್ರ, ಶಶಾಂಕ್, ಮಾನ್ವಿ ಆರ್ ಶೆಟ್ಟಿ, ಮಿಸ್ಅಬ್ ರಾಫಿ, ತ್ರಿಷಾ ಶೆಟ್ಟಿ, ನಿತೇಶ್ ಕುಮಾರ್, ಪ್ರಣವ್ಯ ವಿ ಜೈನ್.
ತೀರ್ಪುಗಾರರಾಗಿ ಅಂಬಿಕಾ ಹಂಚಾಟೆ ಹಾಗು ಅಶ್ರಫ್ ಕೆ.ಸಿ ರೋಡ್ ಸಹಕರಿಸಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಸರ್ವ ಸ್ಪರ್ಧಾರ್ಥಿಗಳಿಗೂ ವಿಶ್ವ ಕನ್ನಡಿಗ ಸಂಪಾದಕೀಯ ಮಂಡಳಿ ವತಿಯಿಂದ ಧನ್ಯವಾದಗಳು. ಸ್ಪರ್ಧೆಯಲ್ಲಿವಿಜೇತರಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ತೀರ್ಪುಗಾರರಾಗಿ ಸಹಕರಿಸಿದ ಸರ್ವರಿಗೂ ಹಾಗೂ ಈ ಭಾಷಣ ಸ್ಪರ್ಧೆಯು ಯಶಸ್ವಿಯಾಗಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ.
ವಿಶ್ವ ಕನ್ನಡಿಗ ನ್ಯೂಸ್ ಸಂಪಾದಕೀಯ ಮಂಡಳಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.