ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಧರ್ಮ ದೈವ -2 ಚಿತ್ರೀಕರಣಗೊಂಡು ಬಿಡುಗಡೆಗೆ ಸಿದ್ದಗೊಳ್ಳುತ್ತಿರುವ ಹಂತದಲ್ಲೇ ಧರ್ಮ ದೈವ ತಂಡ ಆಕೆ ಮೋಹಿನಿ….? ಎಂಬ ಸಮಾಜಕ್ಕೆ ಸಂದೇಶ ಸಾರುವ ಕಿರುಚಿತ್ರವನ್ನು ಚಿತ್ರೀಕರಣ ಗೊಳಿಸಿ ಮುಗಿಸಿದೆ. ಚಿತ್ರವನ್ನು ಉಡುಪಿ ಮೂಲದ ಉದ್ಯಮಿ ಸಂತೋಷ್ ಕೆ ಶೆಟ್ಟಿ ಅಂಗಡಿ ಗುತ್ತು ಕಳತ್ತೂರು ನಿರ್ಮಿಸಿದ್ದಾರೆ. ಸಿರೀಸ್ ಆಫ್ ಧರ್ಮ ದೈವ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ ಕಥೆ ಬರೆದು ಆಕೆ ಮೋಹಿನಿಯನ್ನು ನಿರ್ದೇಶಿಸಿದ್ದಾರೆ.
ಒಂದು ಹೆಣ್ಣಿನ ಸುತ್ತ ಸುತ್ತುವ ಈ ಕಥೆಯಲ್ಲಿ ಸಮಾಜದ ವಾಸ್ತವತೆಯ ಕಥೆಯಿದೆ.. ಚಿತ್ರಕಥೆ ಸಂಭಾಷಣೆ ಹಮೀದ್ ಪುತ್ತೂರು ಬರೆದಿದ್ದಾರೆ. ಧನು ರೈ ಅವರ ಕ್ಯಾಮರಾ, ರಾಧೆಶ್ ರೈ ಮೋಡಪ್ಪಾಡಿ ಅವರ ಸಂಕಲನ, ಪ್ರೇಮ್ ಅರ್ಲಪದವು ಅವರ ಪ್ರಸಾದನ ಚಿತ್ರಕ್ಕಿದೆ. ಸುಧಾಕರ್ ಪಡೀಲ್ ಅವರು ಚಿತ್ರದ ಸಂಪೂರ್ಣ ನಿರ್ವಹನೆಯನ್ನು ಮಾಡಿದ್ದಾರೆ.
ಕಾವು ಸಮೀಪ ಇರುವ ಶರತ್ ರೈ ಅವರ ಮನೆಯಲ್ಲಿ ಹಾಗು ಸುತ್ತ ಮುತ್ತ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಧನ್ ರಾಜ್ ಆಚಾರ್, ರಮೇಶ್ ರೈ ಕುಕ್ಕುವಳ್ಳಿ, ರವಿ ಸ್ನೇಹಿತ್, ದೀಕ್ಷಾ ರೈ, ಚಿತ್ತರಂಜನ್ ಶೆಟ್ಟಿ ನುಳಿಯಾಲು, ಕೌಶಿಕ್ ರೈ ತೋಟ, ರಿತೇಶ್ ರೈ ಮುಂತಾದವರು ನಟಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.