ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ವಿ.ಕೆ.ಎಫ್ ಕೇಂದ್ರ ಕಚೇರಿಯಲ್ಲಿ ಹೆಚ್.ಶಿವರಾಮೇಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಮಾಲೂರು ತಾಲ್ಲೂಕು ಘಟಕದ ಕಾರ್ಮಿಕ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ಕಾರ್ಯವನ್ನು ಕರವೇ ಜಿಲ್ಲಾ ಉಸ್ತುವಾರಿ ಲಕ್ಕೂರು ಎಂ.ನಾಗರಾಜ್, ತಾಲ್ಲೂಕು ಗೌರವ ಅಧ್ಯಕ್ಷರಾದ ಆನೇಪುರ ದೇವರಾಜ್, ತಾಲ್ಲೂಕು ಪೋಷಕರಾದ ಮಾ.ವೆ ಪ್ರಕಾಶ್ ಹಾಗೂ ತಾಲ್ಲೂಕು ಅಧ್ಯಕ್ಷ ದೊಡ್ಡಕಲ್ಲಹಳ್ಳಿ ಮಂಜುನಾಥ್ ನಾಯಕತ್ವದಲ್ಲಿ ನಡೆಸಲಾಯಿತು.
ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾಲೂರು ತಾಲ್ಲೂಕು ಕಾರ್ಮಿಕ ಘಟಕವನ್ನು ಆಸ್ತಿತ್ವಕ್ಕೆ ತಂದು ಚಾಲನೆ ನೀಡಲಾಯಿತುಗೌರವ ಅಧ್ಯಕ್ಷರು: ಗೋವರ್ಧನ್ ರೆಡ್ಡಿ,(ಸೊಣ್ಣಹಳ್ಳಿ). ತಾಲ್ಲೂಕು ಅಧ್ಯಕ್ಷರುಸೈಯದ್ ನದೀಮ್, ತಾಲ್ಲೂಕು ಉಪಾಧ್ಯಕ್ಷರುಮಂಜುನಾಥ್ ಕೆ.ವಿ. (ಕೋಡೂರು).ಪ್ರಧಾನ ಕಾರ್ಯದರ್ಶಿಸತೀಶ್ (ಕೋಡೂರು), ಕಾರ್ಯದರ್ಶಿ:ದೀಪು, ಖಜಾಂಜಿ:ನಯಾಸ್, ಕ್ರೀಡಾ ಕಾರ್ಯದರ್ಶಿ:ಅಕ್ರಂ, ಸಂಚಾಲಕರು:ಮಲಪ್ಪನಹಳ್ಳಿ ರಮೇಶ್ ಗೌಡ, ಪತ್ರೀಕಾ ಕಾರ್ಯದರ್ಶಿ:ಸುಲ್ತಾನ್ ಮಸ್ತಿ, ಕಾರ್ಯ ಅಧ್ಯಕ್ಷರು: ವಿಜಿ ಹಾಗೂ ಸದಸ್ಯರುಗಳಾಗಿ ಅನೇಕ ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಇವರುಗಳನ್ನು ತಕ್ಷಣವೇ ಜಾರಿ ಬರುವಂತೆ ಆದೇಶ ಪತ್ರವನ್ನು ನೀಡಿ, ಕನ್ನಡ ನಾಡು-ನುಡಿಯ ಸಂರಕ್ಷಣೆ, ಕಾವೇರಿ ಸಂರಕ್ಷಣೆ, ನೆಲ-ಜಲದ ಬಗ್ಗೆ ಹೋರಾಟ ಇವುಗಳನ್ನು ಒಳಗೊಂಡಂತೆ ದನಿ ಇಲ್ಲದ ಕನ್ನಡಿಗರಿಗೆ ಧ್ವನಿಯಾಗಿ, ಅನ್ಯಾಯದ ವಿರುದ ಸೆಟೆದು ನಿಲ್ಲುವ ಮೂಲಕ ಕರವೇ ಆಶಯಗಳಿಗೆ ತಕ್ಕಂತೆ, ಪ್ರಮಾಣಿಕತೆಯಿಂದ ಕೆಲಸ ಮಾಡುವ ಮೂಲಕ ತಾವು ಸಂಘಟನೆಯನ್ನು ಬಲಾಢ್ಯಗೋಳಿಸಿ, ನಿಸ್ವಾರ್ಥ ಸೇವೆ ಮಾಡಬೇಕು ಎಂದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.