ಕೋಲಾರ(ವಿಶ್ವಕನ್ನಡಿಗ ನ್ಯೂಸ್) ನಗರದಲ್ಲಿ ಬಿದ್ದ ಭಾರಿ ಮಳೆಯಿಂದಾಗಿರುವ ಹಾನಿಯ ಕುರಿತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಹೆಚ್.ಗಂಗಾಧರ್ ಪರಿಶೀಲನೆ ನಡೆಸಿದರು.
ನಗರದ ಸಾರಿಗೆ ನಗರ , ಗಾಂಧಿನಗರ , ಗದ್ದೆಕಣ್ಣೂರು ಕೋಲಾರಮ್ಮ ಬಡಾವಣೆ , ಬೈರೇಗೌಡ ನಗರ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಿದ ಅವರು , ಕಳೆದ ರಾತ್ರಿ ಬಿದ್ದ ಭಾರಿ ಮಳೆಯಿಂದಾಗಿರುವ ಹಾನಿಯನ್ನು ವೀಕ್ಷಿಸಿದರು .
ಮಳೆಯಿಂದ ತೊಂದರೆಗೊಳಾಗಿರುವ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದ ಅವರು ಸಾಂತ್ವಾನ ಹೇಳಿ , ಪರಿಹಾರ ಕಲ್ಪಿಸಲು ಸೇವಾ ಪ್ರಾಧಿಕಾರಕ್ಕೆ ಸಮರ್ಪಕ ದಾಖಲೆ ಸಲ್ಲಿಸುವಂತೆ ಸೂಚಿಸಿದರು. ಪರಿಶೀಲನೆ ಸಂದರ್ಭದಲ್ಲಿ ಯಾವುದೇ ಮನೆಗಳಿಗೆ ಹಾನಿಯಾಗಿರುವ ಘಟನೆಗಳ ಕುರಿತು ಸೂಕ್ತ ಕಮಕ್ಕೆ ಜಿಲ್ಲಾಡಳಿತಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಕೋಲಾರಮ್ಮ ಬಡಾವಣೆಯಲ್ಲಿ ಮಹಿಳೆಯೊಬ್ಬರು ಮನೆ ಜಲಾವೃತವಾಗಿದ್ದು , ಮನೆಯೊಳಕ್ಕೆ ಹಾವುಗಳು ನುಗ್ಗಿವೆ ಎಂದು ತಿಳಿಸಿ ಸಹಾಯಕ್ಕೆ ಕೋರಿದಾಗ , ಕೂಡಲೇ ಅರಣ್ಯಾಧಿಕಾರಿಗಳಿಗೆ ಕ್ರಮಕ್ಕೆ ಸೂಚಿಸಿದರು .
ಸಾರಿಗೆ ನಗರದಲ್ಲಿ ೭೦ ಮನೆಗಳಿಗೆ ನೀರು ನುಗ್ಗಿದ್ದು , ಸಾರ್ವಜನಿಕರು ತೊಂದರೆಗೆ ಒಳಗಾಗಿರುವುದು ನ್ಯಾಯಾಧೀಶರ ಗಮನಕ್ಕೆ ಬಂತು .ಈ ಸಂದರ್ಭದಲ್ಲಿ ಸಾರಿಗೆ ನಗರದ ಪಕ್ಕದಲ್ಲಿನ ರಾಜಕಾಲುವೆ ದುರಸ್ಥಿಗೊಳಿಸಲು ನ್ಯಾಯಾಧೀಶರು ನಗರಸಭೆಗೆ ಸೂಚಿಸಿದರು.
ಮುಂದಿನ ೪೮ ಗಂಟೆಗಳ ಹೆಚ್ಚಿನ ಮಳೆಯಾಗುವ ಸಂಭವ ಇರವುದರಿಂದ ಮಳೆಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಅನುಕೂಲವಾಗುವಂತೆ ಮುಂಜಾಗ್ರತೆಯಾಗಿ ಹಾರೈಕೆ ಕೇಂದ್ರಗಳ ಸ್ಥಾಪನೆಗೆ ಸಿದ್ಧತೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚಿಸಿದರು .
ಈ ಸಂದರ್ಭದಲ್ಲಿ ನ್ಯಾಯಾಧೀಶರೊಂದಿಗೆ ವಿಪತ್ತು ನಿರ್ವಹಣಾ ಸಮಿತಿ ಸದಸ್ಯ ವಕೀಲ ಕೆ.ಆರ್.ಧನರಾಜ್ , ನಗರಸಭೆ ಉಪಾಧ್ಯಕ್ಷ ಪ್ರವೀಣ್ಗೌಡ , ಸದಸ್ಯ ರಾಕೇಶ್ , ಕಂದಾಯ ನಿರೀಕ್ಷಕ ವಿಜಯದೇವ್ ಮತ್ತಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.